ಬೆಂಗಳೂರು: "ಕಣ್ಸನ್ನೆ ಹುಡುಗಿ" ಎಂದು ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಮೂಲಕ ಪ್ರಸಿದ್ದರಾದ ಮಲಯಾಲಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಲು ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ಪ್ರಯತ್ನಿಸಿದರೂ ಇದುವರೆಗೆ ಯಶಸ್ವಿಯಾಗಿಲ್ಲ. "ಒರು ಆಡಾರ್ ಲವ್" ಖ್ಯಾತಿಯ ಪ್ರಿಯಾ ಕನ್ನಡ ಚಿತ್ರರಂಗಕ್ಕೆ ಅಧಿಕೃತ ಪ್ರವೇಶವನ್ನಿನ್ನೂ ಪಡೆದಿಲ್ಲ. ಆದರೆ ಈಗ ಹಿರಿಯ ನಿರ್ದೇಶಕರಾದ ಉಪೇಂದ್ರ, ಪ್ರೇಮ್ ಮೊದಲಾದವರೊಡನೆ ಕೆಲಸ ಮಾಡಿದ್ದ ರಘು ಕೋವಿ ತಾವು ಸ್ವತಂತ್ರ ನಿರ್ದೇಶನದಲ್ಲಿ ಚಿತ್ರ ತಯಾರಿಗೆ ಕೈಹಾಕಿದ್ದಾರೆ. ಈ ಚಿತ್ರಕ್ಕೆ "ಕಿಲ್ಲಿಂಗ್ ವೀರಪ್ಪನ್" ಚಿತ್ರದ ನಿರ್ಮಾಪಕರಾಗಿದ್ದ ಬಿ.ಎಸ್. ಸುಧೀಂದ್ರ ಮತ್ತು ಇ. ಶಿವಪ್ರಕಾಶ್ ಬಂಡವಾಳ ಹೂಡಲಿದ್ದಾರೆ.ಈಗ ನಿರ್ಮಾಪಕರು ಹಾಗೂ ಚಿತ್ರತಂಡ ತಮ್ಮ ನೂತನ ಚಿತ್ರಕ್ಕೆ ನಾಯಕಿಯಾಗುವಂತೆ ಪ್ರಿಯಾ ವಾರಿಯರ್ ಗೆ ಆಹ್ವಾನ ನೀಡಿದೆ.