ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಸ್ಯಾಂಡಲ್ ವುಡ್ ಕಲಾವಿದರು ಸ್ವಾಗತಿಸಿದ್ದಾರೆ.
ನವರಸ ನಾಯಕ ಜಗ್ಗೇಶ್, " ರಾಯರು ಪೂಜಿಸಿದ ಶ್ರೀಮೂಲರಾಮದೇವರು ಮರಳಿ ಬಂದರು, ಪ್ರೀತಿಯ ನೈವೇದ್ಯ ಸ್ವೀಕರಿಸಲು ಭಕ್ತವೃಂದದ ಮತ್ತೆ ಭುವಿಗೆ. ನನ್ನ ಜನ್ಮ ಸಾರ್ಥಕ ಹರಿ ಓಂ" ಎಂದು ಟ್ವೀಟ್ ಮಾಡಿದ್ದಾರೆ.
ದಶಕಗಳ ಕಾಡಿದ ವಿವಾದ ಕಡೆಗೂ ಅಂತ್ಯವಾಗಿದ್ದು ಕನ್ನಡ, ಹಿಂದಿ ಸೇರಿದಂತೆ ಭಾರತೀಯ ಚಿತ್ರರಂಗದ ವಿವಿಧ ತಾರೆಯರು ಸುಪ್ರೀಂ ಕೋರ್ಟ್ ತೀರ್ಪಿಗೆ ಸಂತಸ ವ್ಯಕ್ತಪಡಿಸಿದ್ದಾರೆ
Advertisement