ಅಯೋಗ್ಯ ಸಿನಿಮಾ ಸಹನಟಿ ವಿರುದ್ದ ದೂರು ದಾಖಲು: ಸುಫಾರಿ ಕೊಟ್ಟು ಎಸ್ಕೇಪ್!

ಅಯೋಗ್ಯ ಚಿತ್ರದ ಸಹನಟಿ ವಿರುದ್ಧ ಜೀವಹರಣ ಮಾಡಲು ಪ್ರಯತ್ನಿಸಿದ ಆರೋಪ ಕೇಳಿಬಂದಿದ್ದು, ಹಣ ಕೊಟ್ಟಿದ್ದನ್ನು ವಾಪಸ್ ಕೇಳಿದ್ದಕ್ಕೆ ಹುಡುಗರನ್ನು ಬಿಟ್ಟು ಈ ಯತ್ನಕ್ಕೆ ಮುಂದಾಗಿದ್ದಾರೆನ್ನಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಯೋಗ್ಯ ಚಿತ್ರದ ಸಹನಟಿ ವಿರುದ್ಧ ಜೀವಹರಣ ಮಾಡಲು ಪ್ರಯತ್ನಿಸಿದ ಆರೋಪ ಕೇಳಿಬಂದಿದ್ದು, ಹಣ ಕೊಟ್ಟಿದ್ದನ್ನು ವಾಪಸ್ ಕೇಳಿದ್ದಕ್ಕೆ ಹುಡುಗರನ್ನು ಬಿಟ್ಟು ಈ ಯತ್ನಕ್ಕೆ ಮುಂದಾಗಿದ್ದಾರೆನ್ನಲಾಗಿದೆ.

ದೃಶ್ಯ ಎಂಬ ನಟಿ ಈ ಕೃತ್ಯಕ್ಕೆ ಮುಂದಾಗಿದ್ದು, ಈಕೆ ಅಯೋಗ್ಯ ಚಿತ್ರದಲ್ಲಿ ಸಹನಟಿಯಾಗಿ ನಟಿಸಿದ್ದಳು. ರಾಜೇಶ್ ಎಂಬುವವರ ಜೀವಹರಣಕ್ಕೆ ಯತ್ನಿಸಿದ್ದು, ರಾಜೇಶ್ ದೃಶ್ಯಳಿಗೆ ಹಣ ನೀಡಿದ್ದನಂತೆ. ಆ ಹಣವನ್ನು ವಾಪಸ್ ಕೇಳಲು ಆಕೆಯ ಮನೆ ಬಳಿ ಹೋದಾಗ ದೃಶ್ಯ ಹುಡುಗರನ್ನು ಬಿಟ್ಟು ರಾಜೇಶ್ ಜೀವಹರಣಕ್ಕೆ ಯತ್ನಿಸಿದ್ದಾಳೆಂದು ಆರೋಪಿಸಲಾಗಿದೆ.

ಬಲಮುರಿ ಸಮೀಪ ರಾಜೇಶ್‌ ಮೇಲೆ ನಾಲ್ವರಿಂದ ಹಲ್ಲೆಯಾಗಿತ್ತು. ಈ ವೇಳೆ ರಾಜೇಶ್​ ದೇಹವನ್ನು ರೇಜರ್​ನಿಂದ ಕೊರೆದು ಹಾಕಲಾಗಿತ್ತು. ಈ ವೇಳೆ 'ದೃಶ್ಯ ಬಳಿ ಹಣ ಕೇಳ್ತೀಯಾ' ಎಂದು ಹಲ್ಲೆ ನಡೆಸುವವರು ಕೂಗಾಡಿರುವುದಾಗಿ ರಾಜೇಶ್​ ದೂರಿನಲ್ಲಿ ತಿಳಿಸಿದ್ದಾರೆ. ಗಾಯಗೊಂಡ ರಾಜೇಶ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರು. 

ಪ್ರಕರಣಕ್ಕೆ ಸಂಬಂಧಿಸಿ ನಟಿ ದೃಶ್ಯ ವಿರುದ್ಧ ಮೈಸೂರಿನ ಕೆಆರ್​ಎಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ.  ದೂರು ದಾಖಲಾಗುತ್ತಿದ್ದಂತೆ ದೃಶ್ಯ ಮತ್ತು ಆಕೆಯ ತಂದೆ ಎಸ್ಕೇಪ್ ಆಗಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com