ರವಿಚಂದ್ರನ್ ನಟನೆಯ ರವಿ ಬೋಪಣ್ಣ ಫಸ್ಟ್ ಲುಕ್ ರಿಲೀಸ್

‘ಅಪೂರ್ವ’ ನಂತರ ‘ಕ್ರೇಜಿ ಸ್ಟಾರ್’ ರವಿಚಂದ್ರನ್, ‘ರಾಜೇಂದ್ರ ಪೊನ್ನಪ್ಪ’ ಚಿತ್ರದ ನಿರ್ದೇಶನಕ್ಕೆ ಕೈಹಾಕಿದ್ದರು. ಅದರ ಕೆಲಸಗಳು ಪೂರ್ಣಗೊಳ್ಳುವುದರೊಳಗೆ ‘ರವಿ ಬೋಪಣ್ಣ’ ಬಿರುಸಿನ ಚಿತ್ರೀಕರಣ ಆರಂಭಿಸಿದ್ದಾರೆ. ಸದ್ಯ ಅದರ ಫಸ್ಟ್​ಲುಕ್ ರಿಲೀಸ್ ಆಗಿದೆ.
ರವಿ ಚಂದ್ರನ್
ರವಿ ಚಂದ್ರನ್

‘ಅಪೂರ್ವ’ ನಂತರ ‘ಕ್ರೇಜಿ ಸ್ಟಾರ್’ ರವಿಚಂದ್ರನ್, ‘ರಾಜೇಂದ್ರ ಪೊನ್ನಪ್ಪ’ ಚಿತ್ರದ ನಿರ್ದೇಶನಕ್ಕೆ ಕೈಹಾಕಿದ್ದರು. ಅದರ ಕೆಲಸಗಳು ಪೂರ್ಣಗೊಳ್ಳುವುದರೊಳಗೆ ‘ರವಿ ಬೋಪಣ್ಣ’ ಬಿರುಸಿನ ಚಿತ್ರೀಕರಣ ಆರಂಭಿಸಿದ್ದಾರೆ. ಸದ್ಯ ಅದರ ಫಸ್ಟ್​ಲುಕ್ ರಿಲೀಸ್ ಆಗಿದೆ.

 ರವಿ ಬೋಪಣ್ಣ ಶೀರ್ಷಿಕೆ ಕೆಳಗೆ  ‘ದೃಶ್ಯ 2’ ಎಂಬ ಅಡಿಬರಹ ಗಮನಸೆಳೆಯುತ್ತಿದೆ. ರವಿಚಂದ್ರನ್ ನಟನೆಯ ‘ದೃಶ್ಯ’ 2014ರಲ್ಲಿ ತೆರೆಕಂಡು ಸೂಪರ್ ಹಿಟ್ ಎನಿಸಿಕೊಂಡಿತ್ತು. ಈಗ ‘ರವಿ ಬೋಪಣ್ಣ ಸಿನಿಮಾದಲ್ಲೂ ಅದು ಕಾಣಿಸಿಕೊಂಡಿದೆ. ಅಲ್ಲಿಗೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ ಎಂಬುದು ಖಾತ್ರಿಯಾಗಿದೆ. ಇನ್ನು, ಫಸ್ಟ್​ಲುಕ್ ಮೇಲೆ ಮೀಸೆ ಮೇಲೆ ಕೈ, ಸವಾಲಿಗೆ ಸೈ , ಸಿಡಿಯೋಕಿಡಿಗಳು ಎಷ್ಟೇ ಇದ್ರು, ಬೆಂಕಿ ಬೆಂಕಿನೇ ಎಂಬ ಡೈಲಾಗ್​ಗಳು ಕುತೂಹಲ ಮೂಡಿಸಿವೆ.

ರವಿ ಬೋಪಣ್ಣಗೆ ನಿರ್ದೇಶನ ಮಾಡುವುದರ ಜತೆಗೆ ಸಂಗೀತ, ಸಾಹಿತ್ಯ, ಚಿತ್ರಕಥೆ, ಸಂಕಲನ ಎಲ್ಲವನ್ನೂ ರವಿಚಂದ್ರನ್ ಅವರೇ ನಿಭಾಯಿಸುತ್ತಿದ್ದಾರೆ. ಅಜಿತ್ ಈ ಚಿತ್ರದ ನಿರ್ವಪಕರು. ಬಹುಮುಖ್ಯವಾದ ಅತಿಥಿ ಪಾತ್ರದಲ್ಲಿ ‘ಕಿಚ್ಚ’ ಸುದೀಪ್ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ರಾಮಕೃಷ್ಣ, ಜೈಜಗದೀಶ್, ರವಿಶಂಕರ್ ಗೌಡ, ಮೋಹನ್ ಮುಂತಾದವರು ಕಾಣಿಸಿಕೊಂಡಿದ್ದು, ನಾಯಕಿಯಾಗಿ ಕಾವ್ಯಾ ಶೆಟ್ಟಿ ನಟಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com