ಹುಟ್ಟುಹಬ್ಬವೆಂದು ಕೇಕ್, ಹೂವಿನ ಹಾರ ತರಬೇಡಿ ಎಂದ ಉಪ್ಪಿ! ಅಭಿಮಾನಿಗಳಿಗೆ ರಿಯಲ್ ಸ್ಟಾರ್ ಮನವಿ ಹೀಗಿದೆ...

ಸೆಪ್ಟೆಂಬರ್ ಮಾಸ ಬಂತೆಂದರೆ ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳಿಗೆ ಹಬ್ಬದ ಸಂಭ್ರಮ. ಈ ಮಾಸದ 18ಕ್ಕೆ ಸಾಹಸ ಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹಿರಿಯ ನಾಯಕಿ ನಟಿ ಶ್ರುತಿಯವರ ಹುಟ್ಟುಹಬ್ಬ. ಆದರೆ ಈ ಬಾರಿ ತಮ್ಮ ಜನ್ಮ ದಿನಾಚರಣೆಗೆ ಸಜ್ಜಾಗಿರುವ ಅಭಿಮಾನಿಗಳಿಗೆ ರಿಯಲ್ ಸ್ಟಾರ್ ಉಪ್ಪಿ ಒಂದು ಮಹತ್ವದ ಸಂದೇಶ ನೀಡಿದ್ದಾರೆ.
ಉಪೇಂದ್ರ
ಉಪೇಂದ್ರ

ಸೆಪ್ಟೆಂಬರ್ ಮಾಸ ಬಂತೆಂದರೆ ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳಿಗೆ ಹಬ್ಬದ ಸಂಭ್ರಮ. ಈ ಮಾಸದ 18ಕ್ಕೆ ಸಾಹಸ ಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹಿರಿಯ ನಾಯಕಿ ನಟಿ ಶ್ರುತಿಯವರ ಹುಟ್ಟುಹಬ್ಬ. ಆದರೆ ಈ ಬಾರಿ ತಮ್ಮ ಜನ್ಮ ದಿನಾಚರಣೆಗೆ ಸಜ್ಜಾಗಿರುವ ಅಭಿಮಾನಿಗಳಿಗೆ ರಿಯಲ್ ಸ್ಟಾರ್ ಉಪ್ಪಿ ಒಂದು ಮಹತ್ವದ ಸಂದೇಶ ನೀಡಿದ್ದಾರೆ.

ಉಪೇಂದ್ರ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಸಂದೇಸ ನಿಡಿದ್ದು ತಮ್ಮ ಹುಟ್ಟು ಹಬ್ಬವೆಂದು ಯಾರೂ ಕೇಕ್, ಹೂವಿನ ಹಾರ ಹೂಗುಚ್ಛ ಮತ್ತು ಉಡುಗೊರೆಗಳನ್ನು ತರಬೇಡಿ ಎಂದು ಮನವಿ ಮಾಡಿದ್ದಾರೆ.

" ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ...
ಸೆಪ್ಟೆಂಬರ್ 18  "ಅಭಿಮಾನಿಗಳ ದಿನ", ಅಂದು ದಯವಿಟ್ಟು  ತಾವುಗಳು ಯಾರೂ  ಕೇಕ್, ಹೂವಿನ ಹಾರ ಹೂಗುಚ್ಛ ಮತ್ತು ಉಡುಗೊರೆಗಳನ್ನು ತರಬೇಡಿ.. ತರಲೇ ಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅದನ್ನು ಪೋಷಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ...
-ನಿಮ್ಮ ಉಪೇಂದ್ರ"  ಉಪ್ಪಿ ಟ್ವೀಟ್ ಮೂಲಕ ವಿನಂತಿಸಿದ್ದಾರೆ.

‘ಕಬ್ಜಾ’ ಪೋಸ್ಟರ್ ರಿಲೀಸ್

‘ಐ ಲವ್ ಯೂ’ ಚಿತ್ರದ ಶತದಿನೋತ್ಸವ ಆಚರಣೆಯ ಕಾರ್ಯಕ್ರಮ ಶನಿವಾರ (ಸೆ. 14) ನಡೆದಿದ್ದು ಈ ವೇಳೆ ನಟ ಉಪೇಂದ್ರ ಆರ್. ಚಂದ್ರು ಜತೆಗಿನ ತಮ್ಮ ಮುಂದಿನ ಬಹುಭಾಷಾ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. 

ಇದೀಗ ಚಿತ್ರದ ಪೋಸ್ಟರ್ ಬಿಡುಗಡೆಗೊಂಡಿದ್ದು ಚಿತ್ರಕ್ಕೆ ‘ಕಬ್ಜಾ’ ಎಂದು ಹೆಸರಿಡಲಾಗಿದೆ. ಚಿತ್ರವು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ, ಮರಾಠಿ, ಬೆಂಗಾಳಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com