ಯಶ್
ಯಶ್

'ಜನಗಣಮನ' ದಿಂದ ವಿಜಯ್ ದೇವರಕೊಂಡ ಔಟ್: ರಾಕಿ ಬಾಯ್ ಗೆ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್!

ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಜಗನ್ನಾಥ್ ಜನಗಣಮನ ಸಿನಿಮಾ ನಿರ್ದೇಶಿಸುತ್ತಿದ್ದು, ತೆಲುಗು ನಟ ವಿಜಯ ದೇವರಕೊಂಡ ಬದಲಿಗೆ ರಾಕಿ ಬಾಯ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಜಗನ್ನಾಥ್ ಜನಗಣಮನ ಸಿನಿಮಾ ನಿರ್ದೇಶಿಸುತ್ತಿದ್ದು, ತೆಲುಗು ನಟ ವಿಜಯ ದೇವರಕೊಂಡ ಬದಲಿಗೆ ರಾಕಿ ಬಾಯ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಸಿನಿಮಾದಲ್ಲಿ ನಟಿಸುತ್ತಿರುವ ಯಶ್ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ, ಜನಗಣಮನ ಸಿನಿಮಾ ಸಂಬಂಧ ಪುರಿ ಜಗನ್ನಾಥ್ ಮತ್ತು ಈಗಾಗಲೇ ಹಲವು ಸುತ್ತಿನ ಚರ್ಚೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾದಿಂದ ಯಶ್ ಹೊರ ನಡೆದಿದ್ದರು, ಹೀಗಾಗಿ ಡಿಯರ್ ಕಾಮ್ರೆಡ್ ಖ್ಯಾತಿಯ ವಿಜಯ ದೇವರಕೊಂಡ ಜನಗಣಮನ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. 

ಆದರೆ ಇತ್ತೀಚಿನ ಮಾಹಿತಿಗಳ ಪ್ರಕಾರ ಜನಗಣಮನದಲ್ಲಿ ಯಶ್ ನಟಿಸಲಿದ್ದಾರೆ ಎಂಬುದು ಖಚಿತವಾಗಿದೆ. ಇನ್ನೂ ಇಸ್ಮಾರ್ಟ್ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಟಿಸುತ್ತಿದ್ದು,ವಿಭಿನ್ನ ಕಥಾ ಹಂದರ ಹೊಂದಿದೆ.

ಯಶ್ ಅಭಿನಯದ ಈ ಸಿನಿಮಾವನ್ನು ಪುರಿ ಜಗನ್ನಾಥ್ ಬೃಹತ್ ವೆಚ್ಚದ ಬಜೆಟ್ ನಲ್ಲಿ ತಯಾರಿಸಲಿದ್ದಾರೆ.ಪ್ಯಾನ್ ಇಂಡಿಯಾ ಆ್ಯಕ್ಷನ್ ಪ್ಲಿಕ್ ಸಿನಿಮಾ ನಿರ್ಮಾಣ ಮಾಡಲಿದೆ. ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ತಯಾರಾಗಲಿದೆ, ಏಕಕಾಲದಲ್ಲಿ ಹಿಂದಿ ಮತ್ತು ತಮಿಳು ಭಾಷೆಗೂ ಡಬ್ ಆಗಲಿದೆ.

ಈ ಸಿನಿಮಾದಲ್ಲಿ ದೇಶಭಕ್ತಿ ಕಥೆಯನ್ನು ಪುರಿ ತರುತ್ತಿದ್ದಾರಂತೆ, ಕೆಜಿಎಪ್-2 ಸಿನಿಮಾ ಶೂಟಿಂಗ್ ಪೂರ್ಣಗೊಂಡ ನಂತರ ಪುರಿ ಸಿನಿಮಾ ಆರಂಭವಾಗಲಿದೆ. 

Related Stories

No stories found.

Advertisement

X
Kannada Prabha
www.kannadaprabha.com