ದರ್ಶನ್ ರಾಬರ್ಟ್ ಗಾಗಿ ಜೈಶ್ರೀರಾಮ್ ಹಾಡಿದ ಶಂಕರ್ ಮಹಾದೇವನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಜೈ ಶ್ರೀ ರಾಮ್ ಹಾಡಿನ ಇನ್ನೊಂದು ಶೈಲಿಯನ್ನು ಬಿಡುಗಡೆ ಮಾಡಿದ್ದು ರಾಮನನ್ನು ಜಪಿಸುವಂತೆ ಮಾಡಿದೆ.
ಶಂಕರ್ ಮಹಾದೇವನ್
ಶಂಕರ್ ಮಹಾದೇವನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಜೈ ಶ್ರೀ ರಾಮ್ ಹಾಡಿನ ಇನ್ನೊಂದು ಶೈಲಿಯನ್ನು ಬಿಡುಗಡೆ ಮಾಡಿದ್ದು ರಾಮನನ್ನು ಜಪಿಸುವಂತೆ ಮಾಡಿದೆ.

ರಾಬರ್ಟ್.. ಈ ವರ್ಷದ ಮೋಸ್ಟ್ ಎಕ್ಸ್​​ಪೆಕ್ಟೆಡ್ ಸಿನಿಮಾ. ಅಲ್ಲದೇ ‘ಬಾಕ್ಸ್ ಆಫೀಸ್ ಸುಲ್ತಾನ್’ ದರ್ಶನ್ ತುಂಬಾ ಇಂಟರೆಸ್ಟ್ ತೆಗೆದುಕೊಂಡು ನಟಿಸಿರೋ ಸಿನಿಮಾ. ವೈಯಕ್ತಿಕವಾಗಿ ದಚ್ಚುಗೂ ‘ರಾಬರ್ಟ್’ ಮೇಲೆ ದೊಡ್ಡ ನಿರೀಕ್ಷೆಗಳಿವೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೇ.. ಏಪ್ರಿಲ್ 9ರಂದು ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಲಾಕ್​​ಡೌನ್ ಎಫೆಕ್ಟ್​​ನಿಂದಾಗಿ ರಿಲೀಸ್ ಮುಂದೂಡಿಕೆಯಾಗಿದೆ. ಈ ಗ್ಯಾಪ್​​ನಲ್ಲೇ ಚಿತ್ರತಂಡ ಒಂದಷ್ಟು ಬದಲಾವಣೆ ಮಾಡಿಕೊಂಡಿದೆ. 

ಈ ಹಿಂದೆ ರಿಲೀಸ್ ಆಗಿದ್ದ ‘ಶ್ರೀ ರಾಮ’ನ ಹಾಡನ್ನು ಹೊಸ ವರ್ಸನ್​​ನಲ್ಲಿ ಬಿಡುಗಡೆ ಮಾಡ್ತಿದೆ. ಲೆಜೆಂಡರಿ ಸಿಂಗರ್ ಶಂಕರ್ ಮಹಾದೇವನ್ ಹಾಡಿಗೆ ದನಿಯಾಗಿದ್ದಾರೆ. ಶ್ರೀ ರಾಮ ನವಮಿ ಅಂಗವಾಗಿ ಇಂದು ಸಾಂಗ್ ರಿಲೀಸ್ ಆಗ್ತಿದೆ  ಎಂದು ಚಿತ್ರತಂಡ ತಿಳಿಸಿದೆ.

ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಶಂಕರ್ ಮಹದೇವನ್ ಹಾಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದೆ. ರಾಮಾಯ ರಾಮ ಭದ್ರಾಯ, ರಾಮಚಂದ್ರಾಯ ವೇದಸೇ……ರಘುನಾಥಾಯ……ಸೀತಾಯ ಪತಯೇ ನಮಃ ಎಂಬ ಸಾಲುಗಳಿಂದ ಹಾಡು ಪ್ರಾರಂಭವಾಗುತ್ತದೆ. ರಾಮ ನಾಮ ಹಾಡಿರೋ ರಾಮ ಬರುವನು, ಅವನ ಹಿಂದೆ ಹನುಮನು ಇದ್ದೆ ಇರುವನು ಎಂದು ಮತ್ತೆ ಮುಂದುವರಿದಿದೆ.  ತರುಣ್ ನಿರ್ದೇಶನ, ಉಮಾಪತಿ ಶ್ರೀನಿವಾಸ್ ನಿರ್ಮಾಣವಿರೋ ರಾಬರ್ಟ್. ಮೇ 1ರಂದು ರಿಲೀಸ್ ಆಗಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com