ನಾನು ರೀಮೇಕ್ ಮುಟ್ಟಲ್ಲ, ಜನ ಮತ್ತೆಮತ್ತೆ ಒಂದೇ ಕಥೆ ನೋಡೋಕೆ ಬಯಸಲ್ಲ: ಶ್ರೇಯಸ್ ಮಂಜು

ಭಾನುವಾರ (ಏ.೫) ಶ್ರೇಯಸ್ ಮಂಜು ಅವರ ಜನ್ಮದಿನ. ಕೊರೋನಾ ಲಾಕ್ ಡೌನ್ ಕಾರಣ ಅವರು ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.ಅಲ್ಲದೆ  ಅಗತ್ಯವಿರುವವರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದ್ದಾರೆ.  ಏತನ್ಮಧ್ಯೆ, ಅವರ ಮುಂದಿನ ಚಿತ್ರ ವಿಷ್ಣು ಪ್ರಿಯಾ  ನಿರ್ಮಾಪಕರು  ಈ ಸಂದರ್ಭದಲ್ಲಿ ಅಧಿಕೃತ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು.
ವಿಷ್ಣು ಪ್ರಿಯಾ
ವಿಷ್ಣು ಪ್ರಿಯಾ

ಭಾನುವಾರ (ಏ.5) ಶ್ರೇಯಸ್ ಮಂಜು ಅವರ ಜನ್ಮದಿನ. ಕೊರೋನಾ ಲಾಕ್ ಡೌನ್ ಕಾರಣ ಅವರು ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.ಅಲ್ಲದೆ  ಅಗತ್ಯವಿರುವವರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದ್ದಾರೆ.  ಏತನ್ಮಧ್ಯೆ, ಅವರ ಮುಂದಿನ ಚಿತ್ರ ವಿಷ್ಣು ಪ್ರಿಯಾ  ನಿರ್ಮಾಪಕರು  ಈ ಸಂದರ್ಭದಲ್ಲಿ ಅಧಿಕೃತ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು.ಪತ್ರಿಕೆಯೊಡನೆ ಮಾತನಾಡಿದ ಪಡ್ಡೆ ಹುಲಿ ನಾಯಕ ಶ್ರೇಯಸ್ ಮಂಜು "ಕೊರೋನಾವೈರಸ್  ಮಧ್ಯೆ, ಮನೆಯಲ್ಲಿ ಲಾಕ್ ಆಗಿರುವ ಜನರಿಗೆ ಮನರಂಜನೆಯನ್ನು ನೀಡಲು ನಾನು ಬಯಸುತ್ತೇನೆ, ಏಕೆಂದರೆ ನಾನು ಅವರ ಆಶಯಗಳನ್ನು ಮತ್ತು ಆಶೀರ್ವಾದಗಳನ್ನು ಬಯಸುತ್ತೇನೆ.” ಎಂದಿದ್ದಾರೆ.

ವಿ ಕೆ ಪ್ರಕಾಶ್ ನಿರ್ದೇಶನದ ವಿಷ್ಣು ಪ್ರಿಯಾ ವಾಸ್ತವಕ್ಕೆ ಹತ್ತಿರವಿರುವ ರೊಮ್ಯಾಂಟಿಕ್ ಡ್ರಾಮಾ ಇದು ಕಣ್ಸನ್ನೆ ಹುಡುಗಿ ಎಂದು  ಜನಪ್ರಿಯವಾಗಿರುವ ಮಲಯಾಳಂ ನಟ ಪ್ರಿಯಾ ವಾರಿಯರ್ ಅವರ ಚೊಚ್ಚಲ ಸ್ಯಾಂಡಲ್ ವುಡ್ ಚಿತ್ರ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಎರಡು ದಿನಗಳ ಕೆಲಸ ಉಳಿದಿದೆ. ಚಲನಚಿತ್ರದ ವಿಷಯವು ನಿಜ ಜೀವನದ ಘಟನೆಯನ್ನು ಆಧರಿಸಿದೆ, ಮತ್ತು ಕಥಾವಸ್ತುವನ್ನು 1990 ರ ದಶಕಕ್ಕೆ ಕೊಂಡೊಯ್ಯಲಿದೆ.

ವಿಷ್ಣು ಪ್ರಿಯಾ ಚಿತ್ರವನ್ನು ಚಿಕ್ಕಮಗಳೂರು  ಬೆಂಗಳೂರು, ಮೈಸೂರು ಮತ್ತು ಕೇರಳದ ನಾನಾ ಕಡೆ ಚಿತ್ರೀಕರಿಸಿಅಳಾಗಿದೆ. . ಇದನ್ನು ಕೆ ಮಂಜು ನಿರ್ಮಿಸಿದ್ದಾರೆ ಮತ್ತು ಗೋಪಿ ಸುಂದರ್ ಅವರ ಸಂಗೀತ ಚಿತ್ರಕ್ಕಿದೆ.  ವಿಷ್ಣು ಪ್ರಿಯಾಚಿತ್ರವನ್ನು  ಜೂನ್‌ನಲ್ಲಿ ಬಿಡುಗಡೆ ಮಾಡಬೇಕೆಂದು ಪ್ರಾರಂಭದಲ್ಲಿ ಹೇಳಿದ್ದರೂ  ಈಗ ವೇಳಾಪಟ್ಟಿ ಬದಲಾಗಬಹುದು. "ಲಾಕ್ಡೌನ್ ಅವಧಿ ಮುಗಿದ ನಂತರ ಚಿತ್ರೋದ್ಯಮ ಚಿತ್ರಗಳ ರಿಲೀಸ್ ಅನ್ನು ಹೇಗೆ ತೀದುಕೊಳ್ಳಲಿದೆ ಎನ್ನುವುದನ್ನು ನೋಡಿದ ನಂತರ ನಮ್ಮ ಚಿತ್ರದ ಬಿಡುಗಡೆ ಬಗೆಗೆ ತೀರ್ಮಾನಿಸಲಾಗುತ್ತದೆ. ಎಂದು ಶ್ರೇಯಸ್ ಹೇಳುತ್ತಾರೆ, ಕೆಲವು ನಿರ್ದೇಶಕರು ತಮ್ಮ ಮುಂದಿನ ಚಿತ್ರದಲ್ಲಿ ನಟಿಸಲು ಸಂಪರ್ಕಿಸಿದ್ದಾರೆ. ಆದರೆ ಶ್ರೇಯಸ್ ಕೆಲವಷ್ಟು ಕಥೆಗಳನ್ನು ರಿಜೆಕ್ಟ್ ಮಾಡಿದ್ದಾರೆ."ರೀಮೇಕ್‌ ಚಿತ್ರಗಳನ್ನು ಮುಟ್ಟದಿರಲು ನಾನು ನಿರ್ಧರಿಸಿದ್ದೇನೆ. ಬದಲಾಗಿ, ಮೂಲ ಸ್ಕ್ರಿಪ್ಟ್‌ನೊಂದಿಗೆ ಬರಲು ನಾನು ಅವರನ್ನು ವಿನಂತಿಸಿದ್ದೇನೆಉದ್ಯಮದ ಬಗ್ಗೆ ಅಧ್ಯಯನ ಮಾಡುವುದಕ್ಕಿಂತ ಹೆಚ್ಚಾಗಿ, ನಾನು ಜನರನ್ನು ಮತ್ತು ಅವರ ಅಭಿರುಚಿಗಳನ್ನು ಗಮನಿಸಿದ್ದೇನೆ.ರೀಮೇಕ್‌ಗಳ ಬಗೆಗೆ ಪ್ರೇಕ್ಷಕರಲ್ಲಿ  ಅಭಿಪ್ರಾಯಗಳು ಬದಲಾಗಿದೆ. ಈಗ ನಾವು ಡಿಜಿಟಲ್ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ, ಜಗತ್ತಿನಾದ್ಯಂತದ ವೀಕ್ಷಕರು ವಿವಿಧ ಪ್ರಕಾರಗಳು ಮತ್ತು ಭಾಷೆಗಳ ಎಲ್ಲಾ ರೀತಿಯ ಚಲನಚಿತ್ರಗಳನ್ನು ವೀಕ್ಷಿಸುತ್ತಾರೆ. ಅವರು ಈಗಾಗಲೇ ಅನುಭವಿಸಿರುವ ಅದೇ ವಿಷಯವನ್ನು ವೀಕ್ಷಿಸಲು ಅವರಿಗೆ ಹೇಳುವುದು ತುಂಬಾ ಕಷ್ಟಕರವಾಗುತ್ತದೆ. ಮಿಲಿಯನ್ ಗಟ್ತಲೆ ರೀಮೇಕ್‌ಗಳಲ್ಲಿ ಒಂದು ಸೆಕ್ಸಸ್ ಆಗಬಹುದು.  ಆದ್ದರಿಂದ ನಾವು ಸ್ಥಳೀಯ ಪ್ರಾಧಾನ್ಯತೆ ಉಳ್ಳ ಕಥೆಯೊಂದಿಗೆ ಹೋಗುತ್ತೇನೆ/

"ನನ್ನ ಕೈಯಲ್ಲಿ ಒಂದು ಕಥೆ ಇದೆ, ಅದನ್ನು ಚೆನ್ನೈ ಮೂಲದ ಬರಹಗಾರ ಬರೆದಿದ್ದಾರೆ, ಅದೊಂದು ರೊಮ್ಯಾಂಟಿಕ್ ಕಾಮಿಡಿ. ನಾನು ಈ ಚಿತ್ರವನ್ನು ನಮ್ಮ ಹೋಮ್ ಬ್ಯಾನರ್ ಅಡಿಯಲ್ಲಿ ಮಾಡಬಹುದು, ಇದಕ್ಕಾಗಿ ನಾನು ಈಗ ಸರಿಯಾದ ನಿರ್ದೇಶಕರನ್ನು ಹುಡುಕುತ್ತಿದ್ದೇನೆ. ಅದೇ ಸಮಯದಲ್ಲಿ, ನನ್ನ ತಂದೆ (ನಿರ್ಮಾಪಕ ಕೆ ಮಂಜು) ಸಹ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರೆ, ಅದು ಸಂಪೂರ್ಣವಾಗಿ ಆಕ್ಷನ್ ಆಧಾರಿತವಾಗಿದೆ, ಮತ್ತು ಅವರು ವಿವಿಧ ನಿರ್ದೇಶಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ನಾಯಕನಾಗಿ ನಾನು ಜನಸಾಮಾನ್ಯರನ್ನು ತಲುಪಬೇಕು ಎಂದು ಅವರು ಬಯಸಿದ್ದಾರೆ." ಶ್ರೇಯಸ್ ಮಂಜು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com