ಉಪೇಂದ್ರ ನಟನೆಯ ರವಿಚಂದ್ರ ಸಿನಿಮಾ ಶೂಟಿಂಗ್ ಪುನಾರಂಭ

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಕ ಆರ್ ಚಂದ್ರು ಅವರ ಕಬ್ಜಾ ಸಿನಿಮಾ ಸೆಪ್ಟಂಬರ್ ಮೊದಲ ವಾರದಲ್ಲಿ ಆರಂಭವಾಗಲಿದೆ. ಉಪೇಂದ್ರ ಸೋಮವಾರ ಮತ್ತು ಮಂಗಳವಾರ ರವಿಚಂದ್ರ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ರವಿಚಂದ್ರ ಸಿನಿಮಾ ಶೂಟಿಂಗ್
ರವಿಚಂದ್ರ ಸಿನಿಮಾ ಶೂಟಿಂಗ್

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಕ ಆರ್ ಚಂದ್ರು ಅವರ ಕಬ್ಜಾ ಸಿನಿಮಾ ಸೆಪ್ಟಂಬರ್ ಮೊದಲ ವಾರದಲ್ಲಿ ಆರಂಭವಾಗಲಿದೆ. ಉಪೇಂದ್ರ ಸೋಮವಾರ ಮತ್ತು ಮಂಗಳವಾರ ರವಿಚಂದ್ರ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಓಂ ಪ್ರಕಾಶ್ ರಾವ್ ಅವರ ನಿರ್ದೇಶನದ ರವಿಚಂದ್ರ ಸಿನಿಮಾ ಶೂಟಿಂಗ್ ಗಾಗಿ ಯೋಜನೆ ಮಾಡಲಾಗಿದೆ. ಲಲಿತ್ ಅಶೋಕ್ ಹೋಟೆಲ್ ಡೆಕೋರೇಷನ್ ಗಾಗಿ ದಿನಕ್ಕೆ 20 ಲಕ್ಷ ರು ಖರ್ಚು ಮಾಡಲಾಗಿದೆ, ನಟ ಉಪೇಂದ್ರ ಮತ್ತು ನಿಮಿಕಾ ರತ್ನಾಕರ್ ಮತ್ತು ಅದಿತಿ ಆರ್ಯ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.

ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪತ್ನಿ ಉತ್ತರೆಯಾಗಿ ಕನ್ನಡದ ಮೊದಲ ಸಿನಿಮಾದಲ್ಲಿ ನಟಿಸಿದ್ದ ಅದಿತಿ ಆರ್ಯ ರವಿಚಂದ್ರ ಮೂಲಕ ಕನ್ನಡಕ್ಕೆ ಮತ್ತೆ ಬರುತ್ತಿದ್ದಾರೆ.

ಜೊತೆಗೆ ಇದೇ ಮೊದಲ ಬಾರಿಗೆ ಉಪೇಂದ್ರ ಜೊತೆ ರವಿಚಂದ್ರನ್ ಕೂಡ ಕೆಲಸ ಮಾಡುತ್ದಿದ್ದಾರೆ. ತೆಲುಗಿನ ಬಳಾಪು ಸಿನಿಮಾದ ಸ್ಫೂರ್ತಿಯಿಂದ ರವಿಚಂದ್ರ ತಯಾರಾಗುತ್ತಿದೆ. ಉಪೇಂದ್ರ ಮತ್ತು ರವಿಚಂದ್ರನ್ ಸಹೋದರರಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಶಾನ್ವಿ ಶ್ರೀವಾತ್ಸವ ಕೂಡ ಚಿತ್ರದಲ್ಲಿದ್ದಾರೆ, ಪ್ರದೀಪ್ ರಾವತ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಈಗಾಗಲೇ ಅರ್ಧ ಭಾಗ ಶೂಟಿಂಗ್ ಮುಗಿಸಿದ್ದು, 16 ದಿನಗಳ ಚಿತ್ರೀಕರಣ ಬಾಕಿಯಿದೆ, ಎಷ್ಟು ಸಾಧ್ಯವೇ ಅಷ್ಟು ಬೇಗ ಮುಗಿಸಲು ಚಿತ್ರತಂಡ ಸಿದ್ಧವಾಗಿದೆ. 

ಆರ್ ಎಸ್ ಬ್ಯಾನರ್ ನಲ್ಲಿ ಸಿನಿಮಾ ತಯಾರಾಗುತ್ತಿದ್ದು, ಚಂದ್ರಮೌಳಿ ಸಂಭಾಷಣೆ ಬರೆದಿದ್ದಾರೆ,  ಶ್ರೀಕಾಂತ್ ಸಂಕಲನವಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com