ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮುಂದಿನ ಚಿತ್ರದಲ್ಲಿ ಸೇನಾಧಿಕಾರಿಯಾಗಿ ಕಂಗೊಳಿಸಲಿದ್ದಾರೆ. ಕನ್ನಡ ಮತ್ತು ತೆಲುಗು ದ್ವಿಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಹೈದಾರಾಬಾದ್ ಮೂಲದ ಉದ್ಯಮಿ ಶ್ರೀಕಾಂತ್ ಧುಲಿಪುಡಿ ಬಂಡವಾಳ ಹಾಕುತ್ತಿದ್ದಾರೆ.
ರಾಮ್ ಧುಲಿಪುಡಿ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದು ಚಿತ್ರದಲ್ಲಿ ಆಕ್ಷನ್, ರೊಮ್ಯಾನ್ಸ್, ಸೆಂಟಿಮೆಂಟ್ ಎಲ್ಲವೂ ಇರುತ್ತದೆ. ಇದೊಂದು ಎಲ್ಲರಿಗೂ ಸಂಬಂಧಪಟ್ಟ ಕಥೆಯಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ದೊಡ್ಡ ಮಟ್ಟದಲ್ಲಿ ತಯಾರಿಸಲು ಮುಂದಾಗಿದ್ದೇವೆ ಎಂದು ಶ್ರೀಕಾಂತ್ ಧುಲಿಪುಡಿ ತಿಳಿಸಿದ್ದಾರೆ.
ಸೇನೆಯ ಯೂನಿಫಾರ್ಮ್ ನಲ್ಲಿ ಶಿವರಾಜ್ ಕುಮಾರ್ ಅವರನ್ನು ನೋಡಿದ ಅವರ ಅಭಿಮಾನಿಗಳು ಖಂಡಿತಾ ಈ ಚಿತ್ರ ವನ್ನು ಇಷ್ಟಪಡುತ್ತಾರೆ ಎಂಬ ನಂಬಿಕೆ ನನಗಿದೆ. ಚಿತ್ರದ ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನವೆಂಬರ್ ನಲ್ಲಿ ಫೋಟೋಶೂಟ್ ನಡೆಯಲಿದೆ ಎಂದರು.
Advertisement