ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ಸ್ಯಾಂಡಲ್ ವುಡ್ ನಟನ ಮದುವೆ ರದ್ದು?

ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರಿವ ಕೆಲ ನಟ ನಟಿಯರು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ ಎಂದು ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿದ್ದ ಆರೋಪ ಸ್ಯಾಂಡಲ್ ವುಡ್ ನಟನೊಬ್ಬನ ಮದುವೆ ಮುರಿದು ಬೀಳಲು ಕಾರಣವಾಗಿದೆ! 
ಪವನ್ ಶೌರ್ಯ
ಪವನ್ ಶೌರ್ಯ

ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರಿವ ಕೆಲ ನಟ ನಟಿಯರು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ ಎಂದು ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿದ್ದ ಆರೋಪ ಸ್ಯಾಂಡಲ್ ವುಡ್ ನಟನೊಬ್ಬನ ಮದುವೆ ಮುರಿದು ಬೀಳಲು ಕಾರಣವಾಗಿದೆ! 

ಯುನ ನಟ ಪವನ್ ಶೌರ್ಯ ಇಂದ್ರಜಿತ್ ಲಂಕೇಶ್ ಅವರ ಹೇಳಿಕೆಗೆ ಆಕ್ಷೇಪವೆತ್ತಿದ್ದು "ಅವರ ಹೇಳಿಕೆಯಿಂಡಾಗಿ ನನ್ನ ವೈಯುಕ್ತಿಕ ಜೀವನಕ್ಕೆ ತೊಂದರೆಯಾಗಿದೆ. ನನಗೆ ನಿಶ್ಚಯವಾಗಿದ್ದ ವಧುವುನ ಮನೆಯವರು ನೀನು ಚಿತ್ರರಂಗದಲ್ಲಿರುವ ಕಾರಣ ನಿನಗೆ ಹೆಣ್ಣು ನೀಡುವುದಿಲ್ಲ ಎಂದು ಮದುವೆ ಮುರಿದಿದ್ದಾರೆ" ಎಂದು ಅಲವತ್ತುಕೊಂಡಿದ್ದಾರೆ.

ಹಾಲು ತುಪ್ಪ, ಉಡುಂಬಾ, ಗೂಳಿಹಟ್ಟಿ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಪವನ್ ಶೌರ್ಯ ಇಂದ್ರಜಿತ್ ಲಂಕೇಶ್ ಅವರ ಮಾತಿಗೆ ಆಕ್ಷೇಪಿಸಿದ್ದು "ಅವರ ಹೇಳಿಕೆಯಿಂದ ನನ್ನ ವಿವಾಹ ಮಾತುಕತೆ ಮುರಿದಿದೆ" ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com