ಸಾಹಸಸಿಂಹ ವಿಷ್ಣುವರ್ಧನ್ ಕುರಿತಂತೆ ತೆಲುಗು ನಟರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದು ಇದರಿಂದ ವಿಷ್ಣು ಅಭಿಮಾನಿಗಳು ಕೆರಳಿದ್ದಾರೆ.
ತೆಲುಗು ನಟ ವಿಜಯ್ ರಂಗರಾಜು ಎಂಬುವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ಈ ವೇಳೆ ವಿಷ್ಣುವರ್ಧನ್ ಅವರಿಗೆ ಲೇಡಿಸ್ ವೀಕ್ ನೆಸ್ ಇದೆ ಎಂದು ಹೇಳಿದ್ದಾರೆ. ಇದು ವಿಷ್ಣು ಅಭಿಮಾನಿಗಳು ಕೆರಳುವಂತೆ ಮಾಡಿದೆ. ಈ ಸಂಬಂಧ ನ್ಯಾಯಕ್ಕಾಗಿ ವಿಷ್ಣು ಅಭಿಮಾನಿಗಳು ವಾಣಿಜ್ಯ ಮಂಡಳಿ ಮೆಟ್ಟಿಲೇರಿ ದೂರು ನೀಡಿದ್ದಾರೆ.
ಕನ್ನಡದ ಮುತ್ತೈದೆ ಭಾಗ್ಯ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಾನು ಆ ಚಿತ್ರದಲ್ಲಿ ಅಭಿನಯಿಸಿದ್ದೆ. ಈ ವೇಳೆ ಸೆಟ್ ಗೆ ಹೋದಾಗ ಅಲ್ಲಿ ನಟಿ ಜಯಮಾಲಿನಿ ಅವರು ನನ್ನನ್ನು ನೋಡಿ ಅಪ್ಪಿಕೊಂಡರು. ಇದರಿಂದ ಬೇಸರಗೊಂಡ ವಿಷ್ಣುವರ್ಧನ್ ಅವರು ನಮ್ಮಿಬ್ಬರನ್ನು ಸೆಟ್ ನಿಂದ ಹೊರಗೆ ಕಳಿಸಿ ಎಂದು ನಿರ್ದೇಶಕರಿಗೆ ಹೇಳಿದ್ದರು.
ಅವರನ್ನು ಯಾಕೆ ಸೆಟ್ ನಿಂದ ಕಳುಹಿಸಬೇಕು ಎಂದು ಕೇಳಿದ್ದಕ್ಕೆ ನನಗೆ ಡಿಸ್ಟರ್ಬ್ ಆಗುತ್ತದೆ ಅಂದಿದ್ದರು. ವಿಷ್ಣುವರ್ಧನ್ ಅವರಿಗೆ ಕೆಲವು ವೀಕ್ ನೆಸ್ ಇತ್ತು ಎಂದು ಹೇಳಿದ್ದಾರೆ.
Advertisement