'ದಂಡುಪಾಳ್ಯ' ನಿರ್ದೇಶಕ ಶ್ರೀನಿವಾಸ್ ರಾಜು ಹೊಸ ವೆಬ್ ಸಿರೀಸ್ 'ಗರಡಿ ಮನೆ'

ದಂಡುಪಾಳ್ಯ ಸಿನಿಮಾ ನಿರ್ದೇಶಕ ಶ್ರೀನಿವಾಸ್ ರಾಜು ಗರಡಿ ಮನೆ ಎಂಬ ವೆಬ್ ಸಿರೀಸ್ ನಿರ್ದೇಶಿಸುತ್ತಿದ್ದಾರೆ. 
ನಿರ್ದೇಶಕ ಶ್ರೀನಿವಾಸ ರಾಜು
ನಿರ್ದೇಶಕ ಶ್ರೀನಿವಾಸ ರಾಜು

ದಂಡುಪಾಳ್ಯ ಸಿನಿಮಾ ನಿರ್ದೇಶಕ ಶ್ರೀನಿವಾಸ್ ರಾಜು ಗರಡಿ ಮನೆ ಎಂಬ ವೆಬ್ ಸಿರೀಸ್ ನಿರ್ದೇಶಿಸುತ್ತಿದ್ದಾರೆ. 

ರೌಡಿಗಳ ಕಥೆಯಿರುವ ವೆಬ್ ಸಿರೀಸ್ ಇದಾಗಿದೆ. ಕನ್ನಡ ಭಾಷೆಯಲ್ಲಿ ಬರುಲಿರುವ ಈ ವೆಬ್ ಸಿರೀಸ್ ನೂರು ಸೀಸನ್ ನಲ್ಲಿ ಪ್ರಸಾರವಾಗಲಿದೆ, 1960 ರಿಂದ 1990ರ ವರೆಗೆ ನಡೆಯುವ ಭೂಹತ ಲೋಕದ ನೈಜ ಘಟನೆ ಆಧಾರಿತ ವೆಬ್ ಸಿರೀಸ್ ಇದಾಗಿದೆ.

ಈ ವೆಬ್ ಸಿರೀಸ್ ಇತರೆ ದಕ್ಷಿಣ ಬಾರತೀಯ ಭಾಷೆಗಳಿಗೆ ಡಬ್ ಆಗಲಿದೆ ಎಂದು ಹೇಳಲಾಗುತ್ತಿದೆ, ಆದರೆ ಇದುವೆರೆಗೂ ತಂಡ ಅಧಿಕೃತ ಪ್ರಕಟಣೆ ಮಾಡಿಲ್ಲ,  ವೆಬ್ ಸಿರೀಸ್ ಗಾಗಿ ಮುಂಬಯಿ ಮತ್ತು ದಕ್ಷಿಣ ಭಾರತದ ನರುಗಳನ್ನು ಕರೆತರುವ  ಸಾಧ್ಯತೆಯಿದೆ. ಸದ್ಯ ನಿರ್ದೇಶಕ ಶ್ರೀನಿವಾಸ್ ರಾಜು 18+ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com