ಫೆಬ್ರವರಿ 21 ರಂದು ಬಿಡುಗಡೆಗೊಂಡ ಬಳಿಕ ಉತ್ತಮ ರೆಸ್ಪಾನ್ಸ್ ಸಿಗುತ್ತಿರುವ ಹಿನ್ನೆಲೆಯಲ್ಲಿ ದೇಶ ವಿದೇಶಗಳಲ್ಲಿ ಶಿವಾಜಿ ಸುರತ್ಕಲ್ ರಿಲೀಸ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ.
ನಿರ್ದೇಶಕ ಆಕಾಸ್ ಶ್ರೀವತ್ಸ ಸಿನಿಮಾದ ಮುಂದಿನ ಪಯಣ ತೆರೆದಿಟ್ಟರು. ‘ಸದ್ಯಕ್ಕೀಗ ಸಿನಿಮಾಕ್ಕೆ ಸಿಕ್ಕ ಒಳ್ಳೆಯ ಪ್ರತಿಕ್ರಿಯೆ ಬೇರೆ ಬೇರೆ ಅವಕಾಶಗಳು ತೆರೆದುಕೊಳ್ಳುವಂತೆ ಮಾಡಿದೆ.
ತೆಲುಗು ಹಾಗೂ ತಮಿಳು ರಿಮೇಕ್ ಹಕ್ಕಿನ ಮಾರಾಟಕ್ಕೆ ಬೇಡಿಕೆ ಬಂದಿದೆ. ಒಂದಷ್ಟುಮಾತುಕತೆಗಳು ನಡೆದಿವೆ. ಅವೆಲ್ಲ ಈಗ ಪ್ರಾಥಮಿಕ ಹಂತದಲ್ಲಿವೆ. ಅದರ ಜತೆಗೀಗ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ.
ರಾರಯಡಿಕಲ್ ಪ್ರೇಮ್ಸ್ ಎನ್ನುವ ಸಂಸ್ಥೆ ಚಿತ್ರವನ್ನು ಚೆನ್ನೈ,ಕೊಯಮತ್ತೂರು, ಹೈದರಾಬಾದ್, ಮುಂಬೈ, ಪೂನಾ ಹಾಗೂ ದೆಹಲಿಯಲ್ಲಿ ರಿಲೀಸ್ ಮಾಡಲು ಮುಂದೆ ಬಂದಿದೆ. ಇನ್ನು ಮಾಚ್ರ್ 6 ರಿಂದ ವಿಶ್ವದಾದ್ಯಂತ ತೆರೆ ಕಾಣುತ್ತಿದೆ.
ನಿರ್ಮಾಪಕ ರಮೇಶ್ ಕಶ್ಯಪ್ ಅಲ್ಲಿ ವಿತರಣೆಯ ಹೊಣೆ ಹೊತ್ತುಕೊಂಡಿದ್ದಾರೆ. ಇವೆಲ್ಲವೂ ಈಗ ಇಡೀ ಚಿತ್ರತಂಡಕ್ಕೆ ಖುಷಿ ತಂದಿದೆ’ ಎಂದರು. ನಿರ್ಮಾಪಕ ಅನೂಪ್ ಒಂದೊಳ್ಳೆಯ ಚಿತ್ರ ಮಾಡಿದ ಖುಷಿಯಿದೆ. ಹಾಕಿದ ಬಂಡವಾಳ ಕೂಡ ವಾಪಾಸ್ ಬರುವ ನಂಬಿಕೆ ಹುಟ್ಟಿದೆ’ ಎಂದು ನಗು ಬೀರಿದರು
Advertisement