ಬೆಂಗಳೂರು: ಇತ್ತೀಚಿಗೆ ರಕ್ಷಿತ್ ಶೆಟ್ಟಿ ಅವರ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಅಭಿನಯಿಸಿರುವ ರಿಷಬ್ ಶೆಟ್ಟಿ ಮುಂದಿನ ಚಿತ್ರದಲ್ಲಿ ಕೌಬಾಯ್ ಕೃಷ್ಣನಾಗಿ ಕಾಣಿಸಿಕೊಳ್ಳಲಿದ್ದಾರೆ.
ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಯಾವುದೇ ಸಂಭಾಷಣೆ ಇಲ್ಲದೆ ವಿಶಿಷ್ಠ ರೀತಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಿರ್ದೇಶಕ ಹಾಗೂ ನಟ ನಟ ರಿಷಬ್ ಶೆಟ್ಟಿ, ಕೌ ಬಾಯ್ ಕೃಷ್ಣನ ಪಾತ್ರಕ್ಕೆ ಹೊಸ ರೂಪ ನೀಡಲಿದ್ದಾರೆ.
ದುಬಾರಿ ವೆಚ್ಚದ ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ, ರಿಷಬ್ ಶೆಟ್ಟಿ ಅವರೊಂದಿಗೆ ರಂಗಿತರಂಗ ಚಿತ್ರದ ನಿರ್ಮಾಪಕ ಹೆಚ್. ಕೆ ಪ್ರಕಾಶ್ ನಿರ್ಮಿಸುತ್ತಿದ್ದಾರೆ. ಅವನ್ನೆ ಶ್ರೀಮನ್ನಾನಾರಾಯಣದ ಏಳು ಕಥೆಗಾರರನ್ನೊಳಗೊಂಡ ತಂಡ ಈ ಚಿತ್ರ ಕಥೆ ರಚಿಸುವಲ್ಲಿ ನಿರತವಾಗಿದೆ.
ರಿಷಬ್ ಶೆಟ್ಟಿ ನಿರ್ದೇಶನದ ರುದ್ರ ಪ್ರಯಾಗದ ಕಡೆಗೆ ಸದ್ಯ ಗಮನ ನೀಡಿದ್ದು, ಈ ಚಿತ್ರ ಪೂರ್ಣ ಗೊಂಡ ಬಳಿಕ ಕೌ ಬಾಯ್ ಕೃಷ್ಣ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂದು ತಿಳಿದುಬಂದಿದೆ.
ಇದಲ್ಲದೇ ಬೆಲ್ ಬಾಟಂ-2, ಆಂಟ್ಗೊನಿ ಶೆಟ್ಟಿ ಹಾಗೂ ಇನ್ನೂ ಹೆಸರಿಡದ ಚಿತ್ರವೊಂದನ್ನು ರಿಷಬ್ ಶೆಟ್ಟಿ ನಿರ್ದೇಶಿಸಲಿದ್ದಾರೆ.
Advertisement