ಮತ್ತೆ ‘ಉದ್ಭವ’ ಕ್ಕೆ ದಚ್ಚು ಬೆಂಬಲ, ಟ್ರೇಲರ್ ಲಾಂಚ್

ಖ್ಯಾತ ನಿರ್ದೇಶಕ ಕೋಡ್ಲು ರಾಮಕೃಷ್ಣ ಸಾರಥ್ಯದಲ್ಲಿ ಮತ್ತೆ ಉದ್ಭವ’ ಚಿತ್ರ ಸಿದ್ಧವಾಗಿದ್ದು, ಮುಂದಿನ ತಿಂಗಳು, ಫೆ 7ರಂದು ಬಿಡುಗಡೆಯಾಗಲಿದೆ 
ಮತ್ತೆ ಉದ್ಧವ ಟ್ರೈಲರ್
ಮತ್ತೆ ಉದ್ಧವ ಟ್ರೈಲರ್

ಖ್ಯಾತ ನಿರ್ದೇಶಕ ಕೋಡ್ಲು ರಾಮಕೃಷ್ಣ ಸಾರಥ್ಯದಲ್ಲಿ ಮತ್ತೆ ಉದ್ಭವ’ ಚಿತ್ರ ಸಿದ್ಧವಾಗಿದ್ದು, ಮುಂದಿನ ತಿಂಗಳು, ಫೆ 7ರಂದು ಬಿಡುಗಡೆಯಾಗಲಿದೆ

ಈ ಹಿಂದೆ ‘ಉದ್ಭವ’ ಚಿತ್ರ ನೋಡಿದ್ದವರು ‘ಮತ್ತೆ ಉದ್ಭವ’ ವೀಕ್ಷಿಸಲು ಕಾತರರಾಗಿದ್ದಾರೆ ಟ್ರೇಲರ್ ಲಾಂಚ್ ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ

ಉದ್ಭವ ಚಿತ್ರದಲ್ಲಿ ಅನಂತನಾಗ ಮಾಡಿದ್ದ ಪಾತ್ರವನ್ನು ‘ಮತ್ತೆ ಉದ್ಭವ’ ದಲ್ಲಿ ರಂಗಾಯಣ ರಘು ಮಾಡಿದ್ದು, ಪ್ರೀಮಿಯರ್ ಪದ್ಮನಿ ಖ್ಯಾತಿಯ ಪ್ರಮೋದ್‍, ನಾಯಕನಾಗಿ ಕಾಣಿಸಿಕೊಂಡಿದ್ದಾರೆ

“ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿದ್ದಂತಹ ಮುಗ್ಧತೆಯ ಪಾತ್ರವಲ್ಲ ಬದಲಿಗೆ ಭಯಂಕರ ತಲೆ ಇರುವ, ಎಲ್ಲರ ತಲೆ ಸವರುವ ಯುವಕನ ಪಾತ್ರ” ಎಂದು ಪ್ರಮೋದ್ ಹೇಳಿದ್ದಾರೆ

ವೈಟ್‍ ಪ್ಯಾಂಥರ್ಸ್ ಕ್ರಿಯೇಟಿವ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಿದ್ದು, ನಿತ್ಯಾನಂದ ಭಟ್‍, ಸತ್ಯ, ಮಹೇಶ್ ಮುದ್ಗಲ್, ರಾಜೇಶ್ ಬಂಡವಾಳ ಹೂಡಿದ್ದಾರೆ

ಪ್ರಮೋದ್ ಗೆ ಜೋಡಿಯಾಗಿ ಮಿಲನ ನಾಗರಾಜ್‍ ಅಭಿನಯಿಸಿದ್ದಾರೆ ಚಿತ್ರಕ್ಕೆ ಸಂಭಾಷಣೆ ಬರೆದಿರುವ ನಟ ಮೋಹನ್, ಕಳ್ಳ ಸ್ವಾಮಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಶುಭ ರಕ್ಷಾ ಜೋಡಿಯಾಗಿದ್ದಾರೆ. ವಿ ಮನೋಹರ್ ಸಂಗೀತ ಸಂಯೋಜಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com