ಒಂದು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ನಟಿ ರಮ್ಯಾ ಇದೀಗ ಮತ್ತೆ ಫೇಸ್ ಬುಕ್ ನಲ್ಲಿ ಸಕ್ರಿಯರಾಗಿದ್ದು ದೇಶವೇ ಮರಗುತ್ತಿರುವ ಘಟನೆಯೊಂದಕ್ಕೆ ರಮ್ಯಾ ಸಹ ಮರುಕಪಟ್ಟಿದ್ದಾರೆ.
ಕೇರಳದಲ್ಲಿ ಕೀಚಕರು ಗರ್ಭೀಣಿ ಕಾಡಾನೆಗೆ ಅನಾನಸ್ಸಿನಲ್ಲಿ ಸ್ಫೋಟಕ ತುಂಬಿ ಅದರ ಸಾವಿಗೆ ಕಾರಣವಾಗಿದ್ದರು. ಈ ವಿಚಾರವಾಗಿ ಟ್ವೀಟರಿಗರು ತಮ್ಮ ನೋವನ್ನು ವ್ಯಕ್ತಪಡಿಸಿದ್ದರು.
ಇದೀಗ ರಮ್ಯಾ ಸಹ ಫೇಸ್ ಬುಕ್ ನಲ್ಲಿ ಆನೆಗೆ ವಿಷಪೂರಿತ ಆಹಾರ ಕೊಟ್ಟು ಅದರ ಸಾವಿಗೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಕೇಸ್ ಹೂಡವಂತೆ ಪೆಟಿಶನ್ ಮನವಿ ಮಾಡಿದ್ದಾರೆ. ಎಲ್ಲರೂ ಈ ಪೆಟಿಷನ್ ಗೆ ಸಹಿ ಹಾಕುವಂತೆ ಲಿಂಕ್ ವೊಂದನ್ನು ನಟಿ ರಮ್ಯಾ ಶೇರ್ ಮಾಡಿದ್ದಾರೆ.
Advertisement