ಚಿರಂಜೀವಿ ಸರ್ಜಾ ನಿಧನದ ಶೂನ್ಯವನ್ನು ತುಂಬಲಸಾಧ್ಯ: ಚಿತ್ರ ನಿರ್ಮಾಪಕರ ನೋವಿನ ನುಡಿ

ನಟ ಚಿರಂಜೀವಿ ಸರ್ಜಾ ಅಕಾಲಿಕ ನಿಧನ ಅವರು ಸಧ್ಯ ನಟಿಸುತ್ತಿದ್ದ ಚಿತ್ರದ ನಿರ್ಮಾಪಕರ ಪಾಲಿಗೆ ಹೊಸ ಸವಾಲನ್ನು ಒಡ್ಡಿದೆ. ಇದಾಗಲೇ ಚಿತ್ರೀಕರಣಗೊಂಡ ಚಿತ್ರಗಳ ಭಾಗಗಳನ್ನು ಡಬ್ ಮಾಡಲು ಅತ್ಯುತ್ತಮ ಧ್ವನಿಗಾಗಿ ಶೋಧ ನಡೆದಿದೆ. ಇನ್ನು ಹಾಡುಗಳನ್ನು ಬಿಟ್ಟು ಕಂಪ್ಯೂಟರ್ ಗ್ರಾಫಿಕ್ಸ್ ಅನ್ನು ಶೂಟ್ ಮಾಡದ ಭಾಗಗಳಿಗೆ ಬಳಸಿಕೊಳ್ಳಲು ಅವರು ಯೋಜಿಸುತ್ತಿದ್ದಾರೆ.
ಕ್ಷತ್ರಿಯ ಚಿತ್ರದ ದೃಶ್ಯ
ಕ್ಷತ್ರಿಯ ಚಿತ್ರದ ದೃಶ್ಯ

ನಟ ಚಿರಂಜೀವಿ ಸರ್ಜಾ ಅಕಾಲಿಕ ನಿಧನ ಅವರು ಸಧ್ಯ ನಟಿಸುತ್ತಿದ್ದ ಚಿತ್ರದ ನಿರ್ಮಾಪಕರ ಪಾಲಿಗೆ ಹೊಸ ಸವಾಲನ್ನು ಒಡ್ಡಿದೆ. ಇದಾಗಲೇ ಚಿತ್ರೀಕರಣಗೊಂಡ ಚಿತ್ರಗಳ ಭಾಗಗಳನ್ನು ಡಬ್ ಮಾಡಲು ಅತ್ಯುತ್ತಮ ಧ್ವನಿಗಾಗಿ ಶೋಧ ನಡೆದಿದೆ. ಇನ್ನು ಹಾಡುಗಳನ್ನು ಬಿಟ್ಟು ಕಂಪ್ಯೂಟರ್ ಗ್ರಾಫಿಕ್ಸ್ ಅನ್ನು ಶೂಟ್ ಮಾಡದ ಭಾಗಗಳಿಗೆ ಬಳಸಿಕೊಳ್ಳಲು ಅವರು ಯೋಜಿಸುತ್ತಿದ್ದಾರೆ.

ಕಳೆದ ಕೆಲ ವರ್ಷಗಳಿಂಡ ಅತ್ಯಂತ ಸಕ್ರಿಯ ನಟರಲ್ಲಿ ಒಬ್ಬರೆನಿಸಿದ್ದ ನಟ ಚಿರಂಜೀವಿ ಸರ್ಜಾ ಜೂನ್ 7 ರಂದು ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಏಕಕಾಲದಲ್ಲಿ ಎರಡು ಮೂರು ಚಲನಚಿತ್ರಗಳಲ್ಲಿ ನಟಿಸುತ್ತಿದ್ದ ನಟ 2020 ರಲ್ಲಿ ಖಾಕಿ, ಆದ್ಯಾ, ಮತ್ತು ಶಿವರ್ಜುನ ಸೇರಿದಂತೆ ಮೂರು ಬ್ಯಾಕ್-ಟು-ಬ್ಯಾಕ್ ಚಿತ್ರಗಳ ರಿಲೀಸ್ ಗೆ ಸಾಕ್ಷಿಯಾಗಿದ್ದರು. .

 ಸತ್ಯ ರಾಯಲಾ ಅವರ ಏಪ್ರಿಲ್, ಮತ್ತು ಇರುವುದೆಲ್ಲವ ಬಿಟ್ಟುನಿರ್ದೇಶಕ ಕಾಂತರಾಜ್ ಕನಳ್ಳಿಯವರ ಕಮರ್ಷಿಯಲ್ ಎಂಟರ್ಟೈನರ್ ಸೇರಿದಂತೆ ಕೆಲವು ಯೋಜನೆಗಳಿಗೆ ಚಿತ್ರೀಕರಣ ಪ್ರಾರಂಭಿಸಲು ನಟ ಸಜ್ಜಾಗಿದ್ದರು ಅಲ್ಲದೆ ಇನ್ನೂ ಮೂರು ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯುತ್ತಿದೆ.  . ಲಾಕ್‌ಡೌನ್‌ಗೆ ಒಂದು ದಿನ ಮೊದಲು ಬಿಡುಗಡೆಯಾದ ಶಿವ ತೇಜಸ್ ನಿರ್ದೇಶನದ ಶಿವರ್ಜುನ ಚಿತ್ರವನ್ನು ನಿರ್ಮಾಪಕರು ರೀ ರಿಲೀಸ್ ಗೆ ತಯಾರಿ ನಡೆಸಿದ್ದಾರೆ.

ಇನ್ನು ನಟರಾದ ಚೇತನ್ ಮತ್ತು ಚಿರಂಜೀವಿ ಸರ್ಜಾ ಅವರನ್ನು ಒಟ್ಟಿಗೆ ತೆರೆ ಮೇಲೆ ತರಲಿದ್ದ ರಣಂ ಚಿತ್ರದಲ್ಲಿ ನಟ ಎನ್‌ಕೌಂಟರ್ ಸ್ಪೆಷಲಿಸ್ಟ್ ಪಾತ್ರವನ್ನು ನಿರ್ವಹಿಸಿದ್ದರು. ಸಮುದ್ರ ನಿರ್ದೇಶನದ ಮತ್ತು ಆರ್ಎಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ನಿರ್ಮಾಪಕ ಆರ್ ಶ್ರೀನಿವಾಸ್ ಫ್ಸಟ್ ಕಾಪಿಯೊಂದಿಗೆ ಸಿದ್ದವಿದ್ದಾರೆ.ಚಿತ್ರಮಂದಿರಗಳನ್ನು ತೆರೆಯಲು ಅನುಮತಿಸಿದಾಗ ಅದನ್ನು ದೊಡ್ಡ ಪರದೆಯ ಮೇಲೆ ತರಲು ಯೋಜಿಸುತ್ತಿದ್ದಾರೆ. ಚಿತ್ರವನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮಾಡಲಾಗಿದೆ. ಇದು ಗುರುಕಿರಣ್ ಸಂಗೀತ ಮತ್ತು ನಿರಂಜನ್ ಬಾಬು ಅವರ ಛಾಯಾಗ್ರಹಣ ಹೊಂದಿದೆ.

ಗೀತರಚನೆಕಾರ-ನಿರ್ದೇಶಕ ರಾಮ್ ನಾರಾಯಣ್ ನಿರ್ದೇಶನದ ರಾಜಮಾರ್ತಾಂಡ ಚಿತ್ರದ ಚಿತ್ರೀಕರಣ ಸಹ ಪೂರ್ಣಗೊಂಡಿದ್ದು  ಯುಗಳ ಗೀತೆ ಮತ್ತು ಡಬ್ಬಿಂಗ್ ಚಿತ್ರೀಕರಣ ಮಾತ್ರ ಬಾಕಿ ಇದೆ.“ಲಾಕ್‌ಡೌನ್ ನಮಗೆ ಚಲನಚಿತ್ರವನ್ನು ಸಮಯಕ್ಕೆ ಪೂರ್ಣಗೊಳಿಸಲು ಬಿಡಲಿಲ್ಲ, ಮತ್ತು ಚಿರಂಜೀವಿ ಈ ತಿಂಗಳಲ್ಲಿ ಡಬ್ಬಿಂಗ್ ಪ್ರಾರಂಭಿಸುವ ಯೋಜನೆಯನ್ನು ಹೊಂದಿದ್ದರು. ಅದರ ಬಗ್ಗೆ ಚರ್ಚಿಸಲು ಅವರು ಕೆಲವು ದಿನಗಳ ಹಿಂದೆ ನನ್ನನ್ನು ಕರೆದಿದ್ದರು. ನಾವು ಒಂದು ಯುಗಳ ಗೀತೆಯನ್ನು ವಿದೇಶಿ ಸ್ಥಳದಲ್ಲಿ ಚಿತ್ರೀಕರಿಸಲು ಯೋಜಿಸಿದ್ದೆವು, ಆದರೆ ಅದು ಸಾಧ್ಯವಾಗಿಲ್ಲ" ರಾಮ್ ನಾರಾಯಣ್ ಹೇಳುತ್ತಾರೆ. ನಿರ್ದೇಶಕರು ಈಗ ಹಾಡಿನ ಚಿತ್ರೀಕರಣ ಕೈಬಿಡಲು ತೀರ್ಮಾನಿಸಿದ್ದು  ಡಬ್ಬಿಂಗ್ ಹೇಗೆ ಮಾಡಬೇಕೆಂದು ಯೋಚಿಸುತ್ತಿದ್ದಾರೆ.

ನಿರ್ದೇಶಕರ ಪ್ರಕಾರ, ರಾಜಮಾರ್ತಾಂಡ  ಚಿರಂಜೀವಿ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಂಡ ಕೊನೆಯ ಚಿತ್ರವಾಗಿದೆ."ರಣಮ್ ನಲ್ಲಿ ಇನ್ನೊಬ್ಬ ನಟನೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿರುವ ನಟ ಕ್ಷತ್ರಿಯ ಚಿತ್ರೀಕರಣದ ಶೇ. 70  ಭಾಗವನ್ನಷ್ಟೇ ಪೂರ್ತಿ ಮಾಡಿದೆ. ಹಾಗಾಗಿ ನಮ್ಮ ಚಿತ್ರ ಚಿರು ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಂಡ ಕಡೆಯ ಚಿತ್ರ." ಎಂದು ನಿರ್ದೇಶಕರು ಹೇಳುತ್ತಾರೆ, ಅವರು ಈ ಯೋಜನೆಯ ಬಗ್ಗೆ ಮೂರು ವರ್ಷಗಳ ಕಾಲ ನಟರೊಂದಿಗೆ ಮಾತುಕತೆ ನಡೆಸಿದ್ದರು.

<strong>ರಾಜಮಾರ್ತಾಂಡ ಚಿತ್ರದಲ್ಲಿ ನಟ ಚಿರಂಜೀವಿ ಸರ್ಜಾ</strong>
ರಾಜಮಾರ್ತಾಂಡ ಚಿತ್ರದಲ್ಲಿ ನಟ ಚಿರಂಜೀವಿ ಸರ್ಜಾ

ಅನಿಲ್ ಮಂಡ್ಯ ನಿರ್ದೇಶನದ ಚೊಚ್ಚಲ ಚಿತ್ರಣವಾದ ಕ್ಷತ್ರಿಯ ನಾಲ್ಕು ದಿನಗಳ ಟಾಕಿ ಭಾಗಗಳ ಚಿತ್ರೀಕರಣ ಮತ್ತು ಒಂದೆರಡು ಹಾಡುಗಳನ್ನು ಹೊರತು ಎಲ್ಲ ಶೂಟಿಂಗ್ ಮುಗಿದಿದೆ. "ನಾವು 70 ಪ್ರತಿಶತದಷ್ಟು ಚಿತ್ರೀಕರಣಮುಗಿಸಿದ್ದೇವೆ, ಅದನ್ನು ಮುಂದಿನ ಪ್ರಕ್ರಿಯೆಗೆ ತೆಗೆದುಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ನಾನು ನಿರ್ಮಾಪಕರೊಂದಿಗೆ ಚರ್ಚಿಸಿ ಉಳಿದವುಗಳನ್ನು ಯೋಜಿಸಲಾಗುವುದು" ಎಂದು ನಿರ್ದೇಶಕರು ಹೇಳುತ್ತಾರೆ, ಉಳಿದ ಭಾಗಗಳನ್ನು ಪೂರ್ತ್ ಮಾಡಲು ಕಂಪ್ಯೂಟರ್ ಗ್ರಾಫಿಕ್ಸ್ ಸಹಾಯದಿಂದ ಹಾಡುಗಳ ತಯಾರಿಗೆ ನಿರ್ಧರಿಸಲಾಗಿದೆ. ಕೊರೋನಾವೈರಸ್ ಹರಡುವಿಕೆ ಇಲ್ಲದಿದ್ದ;ಲ್ಲಿ ನಮ್ಮ ಶೂಟಿಂಗ್ ಪೂರ್ಣವಾಗಿರುತ್ತಿತ್ತು. ಎಂದ ನಿರ್ದೇಶಕ ರಂಜೀವಿ ಸರ್ಜಾ ಅವರ ಸಹೋದರ ಧ್ರುವ ಸರ್ಜಾ ಅವರೊಂದಿಗೆ ಯೋಜನೆಯನ್ನು ಚರ್ಚಿಸಿದ ನಂತ ಒಪ್ಪಿದ ಚಿತ್ರವಿದಾಗಿತ್ತು. ಈ ಚಿತ್ರದಲ್ಲಿ ಸರ್ಜಾ ಜತೆಗೆಸಂಜಾನಾ ಆನಂದ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಸುಧರಾಣಿ ಮತ್ತು ಸಾಧು ಕೋಕಿಲಾ ಪ್ರಮುಖ ಪಾತ್ರದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com