ನಾಳೆಯಿಂದ ಥಿಯೇಟರ್ ಓಪನ್ ಆದರೆ ಮರುದಿನದಿಂದಲೇ ಶೂಟಿಂಗ್ ಗೆ ನಾನು ಸಿದ್ದ: ನಟ ದರ್ಶನ್

ತನ್ನ ಪ್ರಾಜೆಕ್ಟ್‌ಗಳ ಚಿತ್ರೀಕರಣದಲ್ಲಿ ಸದಾ ನಿರತರಾಗಿರುವ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಕ್ ಡೌನ್ ಕಾರಣ ತಮ್ಮ ನಿಗದಿತ ಶೂಟಿಂಗ್ ಸೆಟ್ ಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ.
ದರ್ಶನ್
ದರ್ಶನ್

ತನ್ನ ಪ್ರಾಜೆಕ್ಟ್‌ಗಳ ಚಿತ್ರೀಕರಣದಲ್ಲಿ ಸದಾ ನಿರತರಾಗಿರುವ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಕ್ ಡೌನ್ ಕಾರಣ ತಮ್ಮ ನಿಗದಿತ ಶೂಟಿಂಗ್ ಸೆಟ್ ಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ.  ಇದನ್ನು ಸ್ವತಃ ದರ್ಶನ್ ಒಪ್ಪಿಕೊಂಡಿದ್ದಾರೆ.  "ನಾನು ಮನೆಯಲ್ಲಿ ತಿನ್ನುವ ಉಪಹಾರಕ್ಕಿಂತ  ಭಿನ್ನವಾಗಿ, ಸೆಟ್‌ಗಳಲ್ಲಿನ ಊಟ  ಒಂದು ದೊಡ್ಡ ವೈವಿಧ್ಯತೆಯನ್ನು ಹೊಂದಿರುತ್ತದೆ - ಇಡ್ಲಿ-ವಡಾ, ಉಪ್ಪಿಟ್ಟು, ದೋಸೆ ಇತ್ಯಾದಿ..."  ದರ್ಶನ್ ಹೇಳಿದ್ದಾರೆ. ಅದೇ ವೇಳೆ ತನ್ನ ಅಭಿಮಾನಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಜೀವನ ನಡೆಸುತ್ತಿದ್ದಾರೆ. ಇದಕ್ಕಾಗಿ ಸಂತಸವಾಗಿದೆ ಎಂದಿದ್ದಾರೆ. 

"ರಾಬರ್ಟ್" ಚಿತ್ರದ ಹೀರೋ ಇದೀಗ ಸರ್ಕಾರ ಶೂಟಿಂಗ್ ಪುನಾರಂಭಕ್ಕೆ ಅನುಮತಿಸಿದ್ದರೂ  ಚಿತ್ರಮಂದಿರ ಪುನಾರಂಬವಾಗುವುದು ಅವರ ಆದ್ಯತೆ ಆಗಿದೆ ಎಂದಿದ್ದಾರೆ. "ನನಗೆ ಇತರರ ಬಗ್ಗೆ ಗೊತ್ತಿಲ್ಲ. ಆದರೆ ಶೂಟಿಂ ಪ್ರಾರಂಭಿಸುವುದಕ್ಕೆ ಮುನ್ನ ಸಿನಿಮಾ ಥಿಯೇಟರ್ ಗಳನ್ನು ತೆರೆಯುವುದು ಬಹಳ ಮುಖ್ಯ ಎಂದು ನಾನು ನಂಬುತ್ತೇನೆ. ನಾವು ಚಿತ್ರಗಳನ್ನು ನಿರ್ಮಿಸಲು ಪ್ರಾರಂಭಿಸಿದರೆ ಹಾಗೂ ಚಿತ್ರಮಂದಿರ ತೆರೆಯುವ ಮುನ್ನ ಅದು ಬಿಡುಗಡೆಗೆ ಸಿದ್ದವಾದರೆ ಆಗ ಸಮಸ್ಯೆ ಆಗಲಿದೆ. ಒಂದೊಮ್ಮೆ ಥಿಯೇಟರ್ ತೆರೆದರೆ ಆಗ ನಿಯಮಿತವಾಗಿ ಚಿತ್ರಗಳ ರಿಲೀಸ್ ಆಗುವುದು ಸುಗಮವಾಗಲಿದೆ.  ಮತ್ತು ಈಗಾಗಲೇ ಪೂರ್ಣಗೊಂಡಿರುವ ಚಿತ್ರಗಳು  ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣಲಿದೆ." ಅವರು ಹೇಳಿದ್ದಾರೆ.

“ನಾಳೆಯಿಂದ ಚಿತ್ರಮಂದಿರಗಳು ತೆರೆದರೆ, ಮರುದಿನವೇ ಚಿತ್ರೀಕರಣ ಪ್ರಾರಂಭಿಸಲು ನಾನು ಸಿದ್ಧ” ಪ್ರಸ್ತುತ ತರುಣ್ ಕಿಶೋರ್ ಸುಧೀರ್ ಅವರ ರಾಬರ್ಟ್ಚಿತ್ರದ ರಿಲೀಸ್ ಗಾಗಿ ಕಾಯುತ್ತಿರುವ ನಟ, ತಮ್ಮ ಐತಿಹಾಸಿಕ ಚಿತ್ರ "ರಾಜ ವೀರ ಮಡಕರಿ ನಾಯಕ" ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಲು ಕಾಯುತ್ತಿದ್ದಾರೆ. ರಾಕ್ಲೈನ್ ​​ಪ್ರೊಡಕ್ಷನ್ ಅಡಿಯಲ್ಲಿ ತಯಾರಿಸಿದ  ಈ ಚಿತ್ರಕ್ಕೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶಕರಾಗಿದ್ದಾರೆ.

ಏತನ್ಮಧ್ಯೆ, ದರ್ಶನ್ ನಿರ್ದೇಶಕ ಪ್ರಕಾಶ್ ಜಯರಾಮ್ ಅವರೊಂದಿಗೆ ಸಂವಾದ ನಡೆಸಿದ್ದು  “ನನ್ನ ಮುಂದಿನ ಗಮನ ಈ ಎರಡು ಚಿತ್ರಗಳ ಮೇಲೆ ಇರುತ್ತದೆ. ರಾಜ ವೀರ ಮದಕರಿ ನಾಯಕ ಚಿತ್ರೀಕರಣವನ್ನು ನಾವು ಹೇಗೆ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎನ್ನುವುದರ ಮೇಲೆ  ಎಲ್ಲವೂ ಅವಲಂಬಿತವಾಗಿರುತ್ತದೆ. ಸೆಟ್‌ಗಳಲ್ಲಿ ಒಂದು ಸಮಯದಲ್ಲಿ ಕನಿಷ್ಠ 500-600 ಸಿಬ್ಬಂದಿ ಅಗತ್ಯವಿರುತ್ತದೆ, ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಕಾರ್ಯಸಾಧ್ಯವಲ್ಲ. ರಾಕ್‌ಲೈನ್ ವೆಂಕಟೇಶ್ ಮತ್ತು ರಾಜೇಂದ್ರ ಸಿಂಗ್ ಬಾಬು ಅವರು ಯೋಜನೆಯನ್ನು ರೂಪಿಸುತ್ತಿದ್ದಾರೆ, ಮತ್ತು ನಾವು ಶೂಟಿಂಗ್ ಪ್ರಕ್ರಿಯೆಯ ಬಗ್ಗೆ ಚರ್ಚಿಸುತ್ತೇವೆ. ಪ್ರಕಾಶ್ ಅವರ ಚಿತ್ರದ ಸ್ಕ್ರಿಪ್ಟಿಂಗ್ ಸಹ ಮುಗಿದಿದೆ, ಮತ್ತು ನಾವು ಫ್ಲೋರ್ ಗೆ ಹೋಗಲು ಸಿದ್ಧರಿದ್ದೇವೆ ”ಎಂದು ದರ್ಶನ್ ಹೇಳುತ್ತಾರೆ.

ಲಾಕ್ ಡೌನ್ ಅವಧಿಯಲ್ಲಿ ದರ್ಶನ್ ತನ್ನ ಸಾಕು ಪ್ರಾಣಿಗಳೊಂದಿಗೆ ತನ್ನ ತೋಟದ ಮನೆಯಲ್ಲಿ ಸಮಯ ಕಳೆಯುವುದನ್ನುಅಭ್ಯಾಸ ಮಾಡಿಕೊಂಡಿದ್ದಾರೆ. ಕುದುರೆ ಪೋಷಣೆ ಬಗೆಗಿನ ನಟನ ಇತ್ತೀಚಿನ ವಿಡಿಯೋ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. . ಪ್ರಸ್ತುತ ಮೇಕೆ ಸಾಕಾಣಿಕೆ ಬಗ್ಗೆ ಆಸಕ್ತರಾಗಿರುವ ನಟ ತನ್ನ ತೋಟದ ಮನೆಯ ಸುತ್ತಲೂ ಸಾಕಷ್ಟು ಖಾಲಿ ಜಮೀನುಗಳಿದ್ದ ಕಾಲವಿತ್ತು. ಈಗ ಸಾಕಷ್ಟು ಕೃಷಿಕರನ್ನು ಹೊಂದಿದ್ದಾರೆ.  “ಅವರಲ್ಲಿ ಹೆಚ್ಚಿನವರು ನಗರಗಳ ಬಿಟ್ಟು ಹಳ್ಳಿಯ ಜೀವನಕ್ಕೆ ಮರಳಿದ್ದಾರೆ. ಇದು ನನಗೆ ಅಚ್ಚರಿಯನ್ನು ತಂದಿದೆ. ಈ ಲಾಕ್‌ಡೌನ್ ಸಮಯದಲ್ಲಿ ಎಲ್ಲರು ಬಯಸಿದ ಮೂರು ಹೊತ್ತಿನ ಊಟಕ್ಕೆ ನಾನು ಸಹ ತಯಾರಾಗಿದ್ದೇನೆ. ಒಬ್ಬ ಕೃಷಿಕನ ಮೌಲ್ಯವನ್ನು ಅನೇಕರು ಅರ್ಥಮಾಡಿಕೊಂಡಿದ್ದಾರೆ. ಜನರು ತಮ್ಮ ಮೂಲವೃತ್ತಿಗೆ ಮರಳಿರುವುದು ನನಗೆ ಖುಷಿ" ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com