ಜಗ್ಗೇಶ್ -ಗುರುಪ್ರಸಾದ್ ಕಾಂಬಿನೇಶನ್​ನ ರಂಗನಾಯಕ ಏಪ್ರಿಲ್ 2ರಿಂದ ಶೂಟಿಂಗ್ ಆರಂಭ

‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಸಿನಿಮಾಗಳ ನಂತರ ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಶನ್​ನ ‘ರಂಗನಾಯಕ’  ಸಿನಿಮಾ ಶೂಟಿಂಗ್  ಏಪ್ರಿಲ್ 2ರಿಂದ ಆರಂಭವಾಗಲಿದೆ.
ಜಗ್ಗೇಶ್ ಮತ್ತು ಗುರು ಪ್ರಸಾದ್
ಜಗ್ಗೇಶ್ ಮತ್ತು ಗುರು ಪ್ರಸಾದ್

‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಸಿನಿಮಾಗಳ ನಂತರ ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಶನ್​ನ ‘ರಂಗನಾಯಕ’  ಸಿನಿಮಾ ಶೂಟಿಂಗ್  ಏಪ್ರಿಲ್ 2ರಿಂದ ಆರಂಭವಾಗಲಿದೆ.

ರಂಗನಾಯಕ’ ಚಿತ್ರದ ಕುರಿತು ಮಾಹಿತಿ ನೀಡುವ ವಿಖ್ಯಾತ್, ‘ಜಗ್ಗೇಶ್ ಮತ್ತು ಗುರುಪ್ರಸಾದ್ ಅವರ ಜತೆಯಾಟದಲ್ಲಿ ಈ ಹಿಂದೆ ಬಂದಿದ್ದ ಎರಡು ಚಿತ್ರಗಳಿಗೂ, ‘ರಂಗನಾಯಕ’ ಚಿತ್ರಕ್ಕೂ ಬಹಳ ವ್ಯತ್ಯಾಸ ಇದೆ. ಈ ಚಿತ್ರದ ಕಥೆ 90ರ ದಶಕದಲ್ಲಿ ನಡೆಯಲಿದ್ದು, ಬಹುತೇಕ ಚಿತ್ರೀಕರಣ ಸೆಟ್​ನಲ್ಲೇ ನಡೆಯಲಿದೆ.

ನಮ್ಮ ನಿರ್ಮಾಣ ಸಂಸ್ಥೆಯಲ್ಲಿ ಮೊದಲು ನಿರ್ಮಾಣವಾಗಿದ್ದ ‘ಪುಷ್ಪಕ ವಿಮಾನ’ಚಿತ್ರಕ್ಕೆ ಕುಂಬಳಗೋಡಿನ ಬಳಿ ಸೆಟ್ ಹಾಕಿದ್ದೆವು. ಅದೊಂದು ರೀತಿಯಲ್ಲಿ ನಮಗೆ ಲಕ್ಕಿ. ಈಗಲೂ ಅಲ್ಲಿಯೇ ಸೆಟ್ ಹಾಕಲು ಪ್ಲಾನ್ ಮಾಡಿದ್ದೇವೆ ಎಂದು ಹೇಳಿದ್ದಾರೆ,.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com