ಕೆಜಿಎಫ್ ಚಿತ್ರದಲ್ಲಿ ಗರುಡ ಪಾತ್ರದ ಮೂಲಕ ಪ್ರಸಿದ್ದರಾಗಿರುವ ರಾಮಚಂದ್ರ ರಾಜುವಿಗೆ ಬಂಪರ್ ಆಫರ್ ಸಿಕ್ಕಿದೆ. ಈ ಮೂಲಕ ಮತ್ತೂಮ್ಮೆ ತೆರೆಮೇಲೆ ಮಿಂಚಲಿದ್ದಾರೆ.
ಗರುಡ ಅವರು ಈಗ “ಬಂಪರ್’ ತಂಡ ಸೇರಿಕೊಂಡಿದ್ದಾರೆ. ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿಬರಲಿರುವ “ಬಂಪರ್’ ಚಿತ್ರದಲ್ಲಿ ವಿಲನ್ ಆಗಿ ಗರುಡ ನಟಿಸಲಿದ್ದಾರೆ.
ಖಡಕ್ ವಿಲನ್ ಆಗಿ ಸಿನಿಮಾದುದ್ದಕ್ಕೂ ಸಾಗಿಬರಲಿದ್ದಾರೆ. ಈ ಮೂಲಕ
ಬಂಪರ್ ಒಂದು ಹೈವೋಲ್ಟೆಜ್ ಆ್ಯಕ್ಷನ್ ಸಿನಿಮಾವಾಗಿ ಮೂಡಿಬರುವುದು ಖಚಿತ.
ಧನ್ವೀರ್ ಈ ಚಿತ್ರದ ನಾಯಕ. ಸುನಿ ನಿರ್ದೇಶನದ “ಬಜಾರ್’ ಚಿತ್ರದ ಮೂಲಕ ಲಾಂಚ್ ಆದ ಧನ್ವೀರ್ ನಾಯಕರಾಗಿರುವ ನಟಿಸುತ್ತಿರುವ ಎರಡನೇ ಚಿತ್ರವಿದು. ಚಿತ್ರವನ್ನು ಸುಪ್ರೀತ್ ನಿರ್ಮಿಸುತ್ತಿದ್ದಾರೆ.
ಈ ನಡುವೆಯೇ ಸುಪ್ರೀತ್ ನಿರ್ಮಾಣದಲ್ಲಿ ಗಣೇಶ್ ನಾಯಕರಾಗಿರುವ “ಸಖತ್’ ಚಿತ್ರವೂ ಚಿತ್ರೀಕರಣದಲ್ಲಿದೆ. “ಬಂಪರ್’ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಇದ್ದು, ಶಿವಸೇನಾ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ, ಕೆ.ಎಂ. ಪ್ರಕಾಶ್ ಸಂಕಲನವಿದೆ.
Advertisement