ನನ್ನನ್ನು ನಾನು ಕಂಡುಕೊಳ್ಳಲು ಯತ್ನಿಸುತ್ತಿದ್ದೇನೆ: ನಟಿ ಸಂಯುಕ್ತಾ ಹೊರನಾಡು!

ನಟನೆ ಮತ್ತು ಇತರೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೂ ನನ್ನನ್ನು ನಾನು ಕಂಡುಕೊಳ್ಳಲು ಯತ್ನಿಸುತ್ತಿದ್ದೇನೆ ಎಂದು ನಟಿ ಸಂಯುಕ್ತ ಹೊರನಾಡು ಹೇಳಿದ್ದಾರೆ.
ನಟಿ ಸಂಯುಕ್ತಾ ಹೊರನಾಡು (ಸಂಗ್ರಹ ಚಿತ್ರ)
ನಟಿ ಸಂಯುಕ್ತಾ ಹೊರನಾಡು (ಸಂಗ್ರಹ ಚಿತ್ರ)

ಬೆಂಗಳೂರು: ನಟನೆ ಮತ್ತು ಇತರೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೂ ನನ್ನನ್ನು ನಾನು ಕಂಡುಕೊಳ್ಳಲು ಯತ್ನಿಸುತ್ತಿದ್ದೇನೆ ಎಂದು ನಟಿ ಸಂಯುಕ್ತ ಹೊರನಾಡು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿರುವ ಅವರು, ಇನ್ನೂ ನನ್ನನ್ನು ನಾನು ಕಂಡುಕೊಳ್ಳಲು ಯತ್ನಿಸುತ್ತಿದ್ದೇನೆ. ಸ್ಟೀಲ್ ಫ್ಲೈ ಓವರ್ ಬೇಡ, ಸೇವ್ ಕಬ್ಬನ್ ಪಾರ್ಕ್, ಪ್ರಾಣಿಗಳ ಕುರಿತ ಹೋರಾಟ ಸೇರಿದಂತೆ ಹಲವು ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ 28 ವರ್ಷದ ಸಂಯುಕ್ತ ಹೊರನಾಡು ಅವರು ಇದೇ ವಿಚಾರದ ಕುರಿತಂತೆ ಕಥಾ ಹಂದರದ ಚಿತ್ರಗಳಲ್ಲಿ ನಾನು ಕಾಣಿಸಿಕೊಂಡರೂ ಅಚ್ಚರಿ ಏನಿಲ್ಲ. ಯಾರು ಬೇಕಾದರೂ ಇಂತಹ ಚಿತ್ರಗಳಿಗೆ ನನ್ನನ್ನು ಕರೆದರೆ ಖಂಡಿತಾ ನಟಿಸುತ್ತೇನೆ. ಪರಿಸರದ ಹೋರಾಟದ ವಿಚಾರ ಬಂದಾಗ ನಾನು ಕೂಡ ಅದರಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

17ನೇ ವಯಸ್ಸಿನಲ್ಲೇ ನಾನು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದೆ. ಲೈಫು ಇಷ್ಟೇನೇ ಚಿತ್ರಕ್ಕಾಗಿ ನಿರ್ದೇಶಕ ಪವನ್ ಒಡೆಯರ್ ನನ್ನನ್ನು ಆಯ್ಕೆ ಮಾಡಿದ್ದರು. ನಾನು ರಸ್ತೆ ದಾಟುತ್ತಿದ್ದಾಗ ನನ್ನನ್ನು ಮೊದಲ ಬಾರಿಗೆ ನಿರ್ದೇಶಕ ಪವನ್ ಕುಮಾರ್ ನೋಡಿದ್ದರು. ಆದ ನನ್ನ ತೆರೆದ ಕೂದಲು ನೋಡಿ ಅವರ ಚಿತ್ರದ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದರು. ಅಲ್ಲಿಯವರೆಗೂ ಡ್ರಾಮಾಗಳಲ್ಲಿ ನಟಿಸುತ್ತಿದ್ದೆ. ಆದರೆ ಏಕಾಏಕಿ ಸಿನಿಮಾದಲ್ಲಿ ನಟಿಸುವುದು ನನಗೆ ಆಗ ಹೊಸದು. ಡ್ರಾಮಾಗಳಲ್ಲಿ ಎಲ್ಲವನ್ನೂ ನಾವು ಜೋರಾಗಿ ಹೇಳಬೇಕಿರುತ್ತದೆ. ಆದರೆ ಚಲನಚಿತ್ರಗಳಲ್ಲಿ ಎಲ್ಲ ವಿಚಾರಗಳನ್ನೂ ಸೂಕ್ಷ್ಮವಾಗಿ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಸ್ತುತ ನಾನು ಮೈಸೂರು ಮಸಾಲ ಯುಎಫ್‌ಒ ಕುರಿತ ಚಿತ್ರ (ಕನ್ನಡ), ಅರಿಷಡ್ವರ್ಗ (ಕನ್ನಡ), ರೆಡ್ ರಮ್ (ತಮಿಳು) ಮತ್ತು ನಾನು ಮತ್ತು ಗುಂಡಾ (ಕನ್ನಡ) ಚಿತ್ರಗಳಲ್ಲಿ ಬಿಸಿ ಇದ್ದು, ಮತ್ತೆ ದೊಡ್ಡ ಪರದೆಗೆ ವಾಪಸ್ ಆಗಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.

ಸಿನಿಮಾ ಹೊರತಾಗಿಯೂ ಸಂಯುಕ್ತ ಹೊರನಾಡು ಅವರ ಕೇಶರಾಶಿಗೆ ಸಾಕಷ್ಟು ಮಂದಿ ಫಿದಾ ಆಗಿದ್ದಾರಂತೆ. ಈ ಕುರಿತ ರೋಚಕ ಮಾಹಿತಿ ನೀಡಿರುವ ನಟಿ ಸಂಯುಕ್ತ ಹೊರನಾಡು, ಈ ಹಿಂದೆ ನನ್ನ ಕರ್ಲಿ ಕೂದಲನ್ನು ನೇರ ಮಾಡಲು ಸಾಕಷ್ಟು ಪ್ರಯತ್ನಿಸಿದ್ದೆ. ಆದರ ಇದರಿಂದ ನನ್ನ ಕೂದಲಿಗೆ ತೊಂದರೆಯಾಗುತ್ತಿತ್ತು. ಹೀಗಾಗಿ ಆ ಪ್ರಯತ್ನ ಕೈ ಬಿಟ್ಟೆ. ಬಹುಶಃ ನನ್ನ ಕೇಶ ರಾಶಿಗೆ ನನ್ನ ಅಮ್ಮ ಕಾರಣ ಇರಬೇಕು. ಅವರಿಗೂ ಕೂಡ ದಟ್ಟವಾದ ಕೂದಲಿದೆ. ನನ್ನ ತಂದೆಗೆ ಕರ್ಲಿ ಕೂದಲಿದೆ ಎಂದು ಹೇಳಿದ್ದಾರೆ. 

ಸಂಯುಕ್ತ ಹೊರನಾಡು ಅವರ ಕುಟುಂಬ ಕೂಡ ಸಿನಿಮಾ ರಂಗಕ್ಕೆ ತುಂಬಾ ಹತ್ತಿರ.. ಖ್ಯಾತ ನಟಿ ಭಾರ್ಗವಿ ನಾರಾಯಣ್ ಅವರು ಸಂಯುಕ್ತಾ ಅವರ ಅಜ್ಜಿ, ಸುದಾ ಬೆಳವಾಡಿ ತಾಯಿ, ಖ್ಯಾತ ನಟ ಪ್ರಕಾಶ್ ಬೆಳವಾಡಿ ಸಂಬಂಧಿಯಾಗಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com