ಗರುಡ ಗಮನ ವೃಷಭ ವಾಹನದಲ್ಲಿ ಹುಲಿ ಪೋಸ್ಟರ್: ಹೆಚ್ಚಿದ ಕುತೂಹಲ

ನಿರ್ದೇಶಕ, ನಟ ರಾಜ್​ ಬಿ. ಶೆಟ್ಟಿ ತಮ್ಮ ಮುಂದಿನ ‘ಗರುಡ ಗಮನ ವೃಷಭ ವಾಹನ ಸಿನಿಮಾದ  ಚಿತ್ರದ 2 ನೇ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿಸಿದ್ದಾರೆ.
ಸಿನಿಮಾ ಪೋಸ್ಟರ್
ಸಿನಿಮಾ ಪೋಸ್ಟರ್

ನಿರ್ದೇಶಕ, ನಟ ರಾಜ್​ ಬಿ. ಶೆಟ್ಟಿ ತಮ್ಮ ಮುಂದಿನ ‘ಗರುಡ ಗಮನ ವೃಷಭ ವಾಹನ ಸಿನಿಮಾದ  ಚಿತ್ರದ 2 ನೇ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿಸಿದ್ದಾರೆ.

ಬಿಡುಗಡೆಗೊಂಡ ಪೋಸ್ಟರ್​ನಲ್ಲಿ ಹುಲಿ ಮುಖವಾಡದ ಫೋಟೋವನ್ನು ಹಾಕಲಾಗಿದೆ. ಜೊತೆಗೆ ಮಂಗಳಾದೇವಿ ಫ್ರೆಂಡ್ಸ್​ (ರಿ) ಮಂಗಳೂರು ಮೊದಲ ವರ್ಷದ ಶಾರದಾ ಹುಲಿ ಎಂದು ಬರೆಯಲಾಗಿದೆ.

ಈ ಪೋಸ್ಟರ್​ ಗಮನಿಸಿದಾಗ ಇದು ಮಂಗಳೂರಿನ ಸುತ್ತಮುತ್ತಲೂ ನಡೆಯುವ ಕಥೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಜೊತೆಗೆ ತುಳುನಾಡಿನ ಆಚರಣೆಗಳಲ್ಲಿ ಒಂದಾದ ಹುಲಿವೇಷ ಕೂಡ ಇದರಲ್ಲಿ ಇರಲಿದೆ. ಈ ಬಾರಿ ಶೆಟ್ರು ಪ್ರೇಕ್ಷಕರನ್ನು ಮಂಗಳೂರು ಸುತ್ತಲೂ ಸುತ್ತಿಸಲು ರೆಡಿಯಾಗಿದ್ದಾರೆ ಎಂಬುದು ಪೋಸ್ಟರ್​ ನೋಡಿದಾಗ ತಿಳಿದುಬರುತ್ತಿದೆ.

ಗರುಡ ಗಮನ ವೃಷಭ ವಾಹನ' ರಾಜ್​ ಬಿ ಶೆಟ್ಟಿ ಮತ್ತು ರಿಷಬ್ ಕಾಂಬಿನೇಷನ್​ನಲ್ಲಿ ಬರುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ  ನಿರ್ದೇಶನದ ಜೊತೆಗೆ ಮುಖ್ಯ ಪಾತ್ರದಲ್ಲಿ ರಾಜ್​ ಬಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ನಿರ್ದೇಶಕ ರಿಷಬ್​​​ ಶೆಟ್ಟಿ ಕೂಡ ಈ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಗರುಡ ಗಮನ ವೃಷಭ ವಾಹನವನ್ನು ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ನಾಟಕದಲ್ಲಿನ ಅಹಂಕಾರದ ಬಗ್ಗೆ  ಉಲ್ಲೇಖಿಸಲಾಗಿದೆ.  ಲೈಟರ್ ಬುದ್ಧ ಫಿಲ್ಮ್ಸ್ ನಿರ್ಮಿಸಲಾಗತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com