ನಿರ್ದೇಶಕ, ನಟ ರಾಜ್ ಬಿ. ಶೆಟ್ಟಿ ತಮ್ಮ ಮುಂದಿನ ‘ಗರುಡ ಗಮನ ವೃಷಭ ವಾಹನ ಸಿನಿಮಾದ ಚಿತ್ರದ 2 ನೇ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿಸಿದ್ದಾರೆ.
ಬಿಡುಗಡೆಗೊಂಡ ಪೋಸ್ಟರ್ನಲ್ಲಿ ಹುಲಿ ಮುಖವಾಡದ ಫೋಟೋವನ್ನು ಹಾಕಲಾಗಿದೆ. ಜೊತೆಗೆ ಮಂಗಳಾದೇವಿ ಫ್ರೆಂಡ್ಸ್ (ರಿ) ಮಂಗಳೂರು ಮೊದಲ ವರ್ಷದ ಶಾರದಾ ಹುಲಿ ಎಂದು ಬರೆಯಲಾಗಿದೆ.
ಈ ಪೋಸ್ಟರ್ ಗಮನಿಸಿದಾಗ ಇದು ಮಂಗಳೂರಿನ ಸುತ್ತಮುತ್ತಲೂ ನಡೆಯುವ ಕಥೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಜೊತೆಗೆ ತುಳುನಾಡಿನ ಆಚರಣೆಗಳಲ್ಲಿ ಒಂದಾದ ಹುಲಿವೇಷ ಕೂಡ ಇದರಲ್ಲಿ ಇರಲಿದೆ. ಈ ಬಾರಿ ಶೆಟ್ರು ಪ್ರೇಕ್ಷಕರನ್ನು ಮಂಗಳೂರು ಸುತ್ತಲೂ ಸುತ್ತಿಸಲು ರೆಡಿಯಾಗಿದ್ದಾರೆ ಎಂಬುದು ಪೋಸ್ಟರ್ ನೋಡಿದಾಗ ತಿಳಿದುಬರುತ್ತಿದೆ.
ಗರುಡ ಗಮನ ವೃಷಭ ವಾಹನ' ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಕಾಂಬಿನೇಷನ್ನಲ್ಲಿ ಬರುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ ನಿರ್ದೇಶನದ ಜೊತೆಗೆ ಮುಖ್ಯ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಈ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಗರುಡ ಗಮನ ವೃಷಭ ವಾಹನವನ್ನು ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ನಾಟಕದಲ್ಲಿನ ಅಹಂಕಾರದ ಬಗ್ಗೆ ಉಲ್ಲೇಖಿಸಲಾಗಿದೆ. ಲೈಟರ್ ಬುದ್ಧ ಫಿಲ್ಮ್ಸ್ ನಿರ್ಮಿಸಲಾಗತ್ತಿದೆ.
Advertisement