ರಂಗಿತರಂಗ ಮತ್ತು ಅವನೇ ಶ್ರೀಮನ್ನಾರಾಯಣ ಸಿನಿಮಾ ಸಹಾಯಕ ನಿರ್ಮಾಪಕ ಕೆ.ಎಚ್ ಪ್ರಕಾಶ್ ಶ್ರೀದೇವಿ ಎಂಟರ್ಟೈನರ್ಸ್ ಬ್ಯಾನರ್ ಅಡಿ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.
ಜಿ ಭರತ್ ಈ ಸಿನಿಮಾ ನಿರ್ದೇಶಕರಾಗಿದ್ದಾರೆ. ನಿರ್ದೇಶಕ ಭರತ್ ಈ ಹಿಂದೆ ರೇಡಿಯೋ ಮತ್ತು ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಇದೊಂದು ಕಾಮಿಡಿ ಹಾರರ್ ಸಿನಿಮಾವಾಗಿದ್ದು ಶೂಟಿಂಗ್ ಗಾಗಿ ಸಿದ್ಧತೆ ನಡೆಸಲಾಗುತ್ತಿದೆ.
ಕಾಡಿನಲ್ಲಿರುವ 103 ವರ್ಷದ ಹಳೇಯ ಬ್ರಿಟಿಷ್ ಪ್ರಾಚ್ಯ ಸಂಶೋಧನಾ ಕಟ್ಟಡದಲ್ಲಿ ನಡೆಯುವ ರಹಸ ಘಟನಾವಳಿಗಳ ಕುರಿತ ಕಥೆ ಇದಾಗಿದೆ. ಭಯ ಮತ್ತು ಹಾಸ್ಯ ಮಿಶ್ರಿತ ಸಿನಿಮಾ ಇದಾಗಿದೆ, ದೆವ್ವದ ಇರುವಿಕೆ ಕುರಿತಂತೆ ಪ್ರಶ್ನೆಗಳನ್ನು ಹುಟ್ಟುಹಾಕಲಿದೆ ಎನ್ನುತ್ತಾರೆ ಭರತ್, ಸಿನಿಮಾ ಶೂಟಿಂಗ್ ಗಾಗಿ ಈಗಾಗಲೇ ಲೋಕೇಶನ್ ಗುರುತಿಸಲಾಗಿದೆ.
ಸಿನಿಮಾಗಾಗಿ ಅಗತ್ಯವಿರುವ ಗ್ರೌಂಡ್ ವರ್ಕ್ ಮಾಡುತ್ತಿದ್ದೇವೆ, ಸದ್ಯ ತಂತ್ರಜ್ಞರು ಮತ್ತು ಕಲಾವಿದರ ಆಯ್ಕೆ ಮಾಡಬೇಕಾಗಿದೆ. ಇಂದಿನಿಂದ ಈ ಸಿನಿಮಾಗಾಗಿ ಆಡಿಶನ್ ಆರಂಭವಾಗಲಿದೆ,
Advertisement