ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಭೇಟಿಯಾದ ಕಿಚ್ಚ ಸುದೀಪ್!

ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ ಅವರನ್ನು ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭೇಟಿಯಾಗಿದ್ದಾರೆ
ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಭೇಟಿಯಾದ ಕಿಚ್ಚ ಸುದೀಪ್!

ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ ಅವರನ್ನು ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭೇಟಿಯಾಗಿದ್ದಾರೆ

ಪವನ್ ಕಲ್ಯಾಣ್ ಅವರನ್ನು ಹೈದರಾಬಾದ್ ನ ಜನಸೇನಾ  ಕಚೇರಿಯಲ್ಲಿ ನಟ ಸುದೀಪ್ ಭೇಟಿ ಮಾಡಿದರು.

ಇದೊಂದು ಔಪಚಾರಿಕ ಭೇಟಿಯಾಗಿದ್ದು ಸುದೀಪ್ ತಮ್ಮ ಚಿತ್ರದ ಶೂಟಿಂಗ್ ಸಲುವಾಗಿ ಹೈದರಾಬಾದ್ ನಲ್ಲಿದ್ದಾರೆ.

ಈ ಭೇಟಿಯ ವೇಳೆ ಪವನ್ ಕಲ್ಯಾಣ್ ಅವರು ಸೆಟ್‌ಗಳಲ್ಲಿ ಅನುಸರಿಸಿದ ಕೋವಿಡ್ 19 ಪ್ರೋಟೋಕಾಲ್‌ಗಳ ಬಗ್ಗೆ ಸುದೀಪ್ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಕಿಚ್ಚ ಪವನ್ ಕಲ್ಯಾಣ್ ಗೆ ಸಸಿ ಕೊಟ್ಟು ಅಭಿನಂದಿಸಿದ್ದಾರೆ.

ಇನ್ನು ಪವನ್ ಕಲ್ಯಾಣ್ ಶೀಘ್ರದಲ್ಲೇ ‘ವಕೀಲ್ ಸಾಬ್’ ಚಿತ್ರದ ಚಿತ್ರೀಕರಣ ಪುನರಾರಂಭಿಸಲಿದ್ದಾರೆ. ಕೊರೋನಾವೈರಸ್ ಲಾಕ್ ಡೌನ್ ನಂತರ ಅವರು ಯಾವ ಚಿತ್ರ್ದ ಶೂಟಿಂಗ್ ನಲ್ಲಿ ಭಾಗವಹಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com