ಸೀಮಂತದ ನಂತರ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿಕೊಟ್ಟ ಮೇಘನಾ ರಾಜ್

ಮೊನ್ನೆ ಮೊನ್ನೆಯಷ್ಟೇ ಸೀಮಂತ ಆಚರಿಸಿಕೊಂಡಿದ್ದ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಸೀಮಂತದ ನಂತರ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿಕೊಟ್ಟ ಮೇಘನಾ ರಾಜ್

ಮೊನ್ನೆ ಮೊನ್ನೆಯಷ್ಟೇ ಸೀಮಂತ ಆಚರಿಸಿಕೊಂಡಿದ್ದ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಲಾಕ್ ಡೌನ್ ಘೋಷಣೆಗೆ ಮುನ್ನ ತೆರೆ ಕಂಡಿದ್ದ ಪತಿ ಚಿರಂಜೀವಿಯವರ ಚಿತ್ರ "ಶಿವಾರ್ಜುನ" ಇದೇ ಅಕ್ಟೋಬರ್ 16ಕ್ಕೆ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಬಗ್ಗೆ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದು "ಚಿರು ಮತ್ತೊಮ್ಮೆ ಉದಯಿಸುತ್ತಿದ್ದಾರೆ. ಅದಕ್ಕೆ ಕಾರಣವೆಂದರೆ ಅಕ್ಟೋಬರ್ 16ರಂದು ಅವರ ನಟನೆಯ "ಶಿವಾರ್ಜುನ" ಚಿತ್ರ ಮತ್ತೊಮ್ಮೆ ಬಿಡುಗಡೆಯಾಗುತ್ತಿದೆ. " ಎಂದು ಬರೆದಿದ್ದಾರೆ. ಜತೆಗೆ ಚಿತ್ರದ ಪೋಸ್ಟರ್ ಸಹ ಪ ಲೋಡ್ ಮಾಡಿದ್ದಾರೆ.

ಅಕ್ಟೋಬರ್ 17ರಂದು  ಚಿರಂಜೀವಿ ಸರ್ಜಾ ಅವರ ಬರ್ತಡೇ ಆಗಿದ್ದು ಈ ಹಿನ್ನೆಲೆಯಲ್ಲಿ ಅವರ ಅಭಿನಯದ ಕಡೆಯ ಚಿತ್ರವನ್ನು ಮತ್ತೊಮ್ಮೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ಶಿವತೇಜಸ್ ನಿರ್ದೇಶನದ ಈ ಚಿತ್ರಕ್ಕೆ ಶಿವಾರ್ಜುನ್ ಬಂಡವಾಳ ತೊಡಗಿಸಿದ್ದರು. ಕಿಶೋರ್, ಸಾಧುಕೋಕಿಲಾ, ನಯನಾ, ಕುರಿ ಪ್ರತಾಪ್ ಮೊದಲಾದ ನಟ ನಟಿಯರು ಪ್ರಮುಖ ತಾರಾಂಗಣದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com