ಸ್ಯಾಂಡಲ್ ವುಡ್ ಹಿರಿಯ ನಿರ್ಮಾಪಕ ಹೆಚ್‍.ಕೆ. ಶ್ರೀನಿವಾಸ್ ವಿಧಿವಶ

ನಿರ್ಮಾಪಕ ಹೆಚ್. ಕೆ ಶ್ರೀನಿವಾಸ್ ವಿಧಿವಶರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಎಚ್.ಕೆ.ಶ್ರೀನಿವಾಸ್
ಎಚ್.ಕೆ.ಶ್ರೀನಿವಾಸ್

ನಿರ್ಮಾಪಕ ಹೆಚ್. ಕೆ ಶ್ರೀನಿವಾಸ್ ವಿಧಿವಶರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಮೃತರು ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ. ಅನಾರೋಗ್ಯದ ಕಾರಣ ರಂಗದೊರೆ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀನಿವಾಸ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 

"ಮಾಯಾ ಮುಸುಕು", "ಗುಂಡನ ಮದುವೆ", "ಪಟ್ಟಣಕ್ಕೆ ಬಂದ ಪುಟ್ಟ", "ಚಂದನ ಚಿಗುರು", "ಕರುನಾಡು" ಮತ್ತು "ಗುರುಕುಲ" ಚಿತ್ರಗಳ ನಿರ್ಮಾಪಕಾರಾಗಿದ್ದ ಶ್ರೀನಿವಾಸ್ ಅವರ "ಗುರುಕುಲ" ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ರಾಜ್ಯ ಪ್ರಶಸ್ತಿ ಲಭಿಸಿತ್ತು.

ಶ್ರೀನಿವಾಸ್ ಅವರ ಅಂತ್ಯಕ್ರಿಯೆ ಇಂದೇ ನೆರವೇರಲಿದೆ ಎಂದು ಕುಟುಂಬ ಮೂಲಗಳು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com