ಮದುವೆಯಾಗಲು ನಿರಾಕರಿಸಿದ ನಟಿಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿ ಪತ್ತೆ: ಮುಂಬೈ ಪೊಲೀಸರು

ಫೇಸ್‌ಬುಕ್‌ನಲ್ಲಿ ಸ್ನೇಹಿತನಾದ ವ್ಯಕ್ತಿಯನ್ನು ಮದುವೆಯಾಗಲು ನಿರಾಕರಿಸಿದ ನಟಿ ಮಾಳ್ವಿ ಮಲ್ಹೋತ್ರಾ ಚಾಕುವಿನಿಂದ ಇರಿದಿದ್ದಾನೆ. ಮುಂಬೈನ ವರ್ಸೋವಾದ ಫಿಶರೀಸ್ ಯುನಿವರ್ಸಿಟಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಮಾಳ್ವಿ ಮಲ್ಹೋತ್ರಾ
ಮಾಳ್ವಿ ಮಲ್ಹೋತ್ರಾ

ಮುಂಬೈ: ಫೇಸ್‌ಬುಕ್‌ನಲ್ಲಿ ಸ್ನೇಹಿತನಾದ ವ್ಯಕ್ತಿಯನ್ನು ಮದುವೆಯಾಗಲು ನಿರಾಕರಿಸಿದ ನಟಿ ಮಾಳ್ವಿ ಮಲ್ಹೋತ್ರಾ ಚಾಕುವಿನಿಂದ ಇರಿದಿದ್ದಾನೆ. ಮುಂಬೈನ ವರ್ಸೋವಾದ ಫಿಶರೀಸ್ ಯುನಿವರ್ಸಿಟಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಕುಮಾರ್ ಮಹಿಪಾಲ್ ಸಿಂಗ್ ಎಂಬ ವ್ಯಕ್ತಿ ಮಾಳ್ವಿ ಅವರನ್ನು ಚಾಕುವಿನಿಂದ ಇರಿದು ತನ್ನ ಕಾರಿನಲ್ಲಿ   ಪರಾರಿಯಾಗಿದ್ದಾನೆ.

2019ರಿಂದ ಫೇಸ್‌ಬುಕ್‌ನಲ್ಲಿ ಮಾಧವಿ ಅವರಿಗೆ ಸ್ನೇಹಿತನಾಗಿದ್ದ ಆತ, ಸಿನಿಮಾ ನಿರ್ಮಾಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ. ಅವರಿಬ್ಬರೂ ಕೆಲವು ಬಾರಿ ಭೇಟಿಯಾಗಿದ್ದರು.

ಕುಮಾರ್ ಮಹಿಪಾಲ್ ಸಿಂಗ್ ತನ್ನನ್ನು ವಿವಾಹವಾಗುವಂತೆ ಪ್ರಸ್ತಾಪಿಸಿದ್ದ. ಅದಕ್ಕೆ ಮಾಳ್ವಿ ನಿರಾಕರಿಸಿದ್ದರು. ಇದರಿಂದ ಕೋಪಗೊಂಡಿದ್ದ ಆತ ಈ ದಾಳಿ  ನಡೆಸಿದ್ದಾನೆ. ಈ ಬಗ್ಗೆ ಮಾಳ್ವಿ ದೂರು ಸಲ್ಲಿಸಿದ್ದಾರೆ.

ಸದ್ಯ ಮಾಳ್ವಿ ಪ್ರಾಣಾಪಾಯದಿಂದ ಪಾರಾಗಿದ್ದು, ಮುಂಬಯಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,  ಇನ್ನೂ ಆರೋಪಿ ಮಹಿಪಾಲ್ ಸಿಂಗ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಇನ್ನೂ ಆತನನ್ನು ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಪೊಲೀಸರ ತಂಡ ಆರೋಪಿ ದಾಖಲಾಗಿರುವ ಆಸ್ಪತ್ರೆಗೆ ತೆರಳಿ ಆತನ ವಿಚಾರಣೆ ನಡೆಸಿದ್ದಾರೆ. ಆತನ ವಿರುದ್ಧ ವಿವಿಧ ಸೆಕ್ಷನ್ ಅಡಿ ಎಫ್ ಐ ಆರ್ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com