ಬೆಂಗಳೂರು: ಹೆಸರು ಗಳಿಸಿದರೆ ಡಿಬಾಸ್ ರೀತಿ ಹೆಸರು ಮಾಡಬೇಕೆಂದು ನಟಿ ಅಮೂಲ್ಯ ಅವರು ಹೇಳಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ನಟಿ ಅಮೂಲ್ಯ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಜೆಪಿ ಅಭ್ಯರ್ಥಿ ಮುನಿರತ್ನ ಮತಯಾಚನೆ ಮಾಡಿದರು.
ಈ ವೇಳೆ ನಟ ದರ್ಶನ್ ಗೆ ಜನರಿಂದ ದೊರೆತ ಪ್ರತಿಕ್ರಿಯೆಗೆ, ಸ್ವಾಗತಕ್ಕೆ ನಟಿ ಅಮೂಲ್ಯ ಬೆರಗಾಗಿದ್ದಾರೆ. ಹೀಗಂತ ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ
ಬಳಿಕ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅಮೂಲ್ಯ ಅವರು, ಹೆಸರು ಗಳಿಸಿದರೆ ನಿಮ್ಮಂತೆ ಹೆಸರು ಗಳಿಸಬೇಕು ಅನಿಸಿತು ಇಂದು ನಿಮ್ಮೊಂದಿಗೆ ಕ್ಯಾಂಪೇನ್(ಪ್ರಚಾರ) ಮಾಡಿ. ನಿಮ್ಮ ಅಭಿಮಾನಿ ಬಳಗವನ್ನು ನೋಡಿ ನಾನು ಮೂಕವಿಸ್ಮಿತನಾಗಿದ್ದೇನೆ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ನನ್ನ ಮೇಲೆ ಸದಾ ಇರಲಿ ಎಂದು ಹೇಳಿದ್ದಾರೆ.
Advertisement