ನಾನು ಕೆಜಿಎಫ್ ಸಿನಿಮಾದ ಹಾರ್ಡ್ ಕೋರ್ ಫ್ಯಾನ್, ಓಟಿಟಿಯಲ್ಲಿ ಸಿನಿಮಾವನ್ನು ಕೊನೆಯವರೆಗೂ ನೋಡಿದ್ದೇನೆ ಎಂದು ಸಿನಿಮಾಟೋಗ್ರಾಫರ್ ತಿರು ಹೇಳಿದ್ದಾರೆ.
ಮಣಿರ್ತನ ನಂತರ ನಾನು ಕಂಡ ಅತ್ಯದ್ಭುತ ನಿರ್ದೇಶಕ ಪ್ರಶಾಂತ್ ನೀಲ್, ಅವರಿಗೆ ತುಂಬಾ ಸಿನಿಮೀಯ ತಿಳುವಳಿಕೆಯಿದೆ.
ನಾನು ಒಂದು ವೇಳೆ ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸದಿದ್ದರೇ ಪ್ರಶಾಂತ್ ಅವರನ್ನು ಭೇಟಿ ಮಾಡುವ ಅವಕಾಶ ಕಳೆದುಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ಮೋಹನ್ ಲಾಲ್ ಅವರ ಪ್ರಿಯದರ್ಶನ್ ಮಾರಕ್ಕರ್ ಅವರ ಸಿನಿಮಾ ಶೂಟಿಂಗ್ ನಲ್ಲಿ ನಾನು ಭಾಗವಹಿಸಿದ್ದೆ, ಶೀಘ್ರದಲ್ಲೇ ಅವರನ್ನು ಭೇಟಿಯಾಗಲು ನಾನು ಎದುರು ನೋಡುತ್ತಿದ್ದೇನೆ.
ಕನ್ನಡ ಸಿನಿಮಾರಂಗದಿಂದ ಪ್ರತಿಭಾನ್ವಿತ ತಂತ್ರಜ್ಞರು ಬರುತ್ತಾರೆ, ಹೀಗಾಗಿ ಸಿನಿಮಾ ಉತ್ತಮಗುಣಮಟ್ಟದಿಂದ ಕೂಡಿರುತ್ತದೆ ಎಂದು ಹೇಳಿದ್ದಾರೆ.
Advertisement