ಬೆಂಗಳೂರು: ಕೃಷ್ಣ ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮ ಪಂಚತಾರಾ ಹೋಟೆಲ್ ನಲ್ಲಿ ಇತ್ತೀಚೆಗೆ ನೆರವೇರಿತು.
ವರ್ಣರಂಜಿತವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಈ ಹಿಂದೆ ಅಜಯ್ ರಾವ್ ಅವರ ಜೊತೆ ಕೃಷ್ಣ ಸೀರೀಸ್ ನಲ್ಲಿ ಚಿತ್ರಗಳನ್ನು ಮಾಡಿದ ನಿರ್ಮಾಪಕರು ಹಾಗೂ ನಿರ್ದೇಶಕರು ಭಾಗವಹಿಸಿದ್ದರು.
ವಿಜಯಾನಂದ್ (ಆನಂದಪ್ರಿಯ) ಅವರ ನಿರ್ದೇಶನದ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದ್ದು, ಹಾಡುಗಳು ಹಾಗೂ ಟೀಸರ್, ಟ್ರೇಲರ್ ಮೂಲಕ ಪೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಗೋವಿಂದರಾಜು ಒಮ್ಮೆ ನಿರಂತ್ ಕಥೆ ಬಗ್ಗೆ ಹೇಳಿದರು. ಅವರ ಮೂಲಕ ಆನಂದಪ್ರಿಯ ಮೀಟ್ ಆಗಿ ಕಥೆ ಕೇಳಿದಾಗ ಈ ಸಿನಿಮಾ ನಾನೇ ಮಾಡಬೇಕು ಎಂದು ಆರಂಭಿಸಿದೆ.
ಅಲ್ಲದೆ ಈ ಚಿತ್ರ ಇಲ್ಲೀವರೆಗೆ ಬರಲು ನಾನೊಬ್ಬನೇ ಕಾರಣನಲ್ಲ, ಆರ್ ಕೆ ಟಾಕೀಸ್ ನ ಕೃಷ್ಣ ಸೇರಿದಂತೆ ಇತರರೆಲ್ಲ ಕೈಜೋಡಿಸಿದ್ದರಿಂದ ಕಂಪ್ಲೀಟ್ ಆಗಿದೆ. ಕೋವಿಡ್ ನಿಂದ ಸ್ವಲ್ಪ ಲೇಟಾದರೂ ಲೇಟೆಸ್ಟಾಗಿ ಬರುತ್ತಿದೇವೆ ಎಂದರು.
Advertisement