25 ವರ್ಷಗಳ ನಂತರ ಕನ್ನಡಕ್ಕೆ ಮರಳಿದ ಅರ್ಚನಾ: ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ದಲ್ಲಿ ನಟನೆ

ನಟ ರಿಷಬ್ ಶೆಟ್ಟಿ ತಮ್ಮ ಮುಂಬರುವ ನಿರ್ದೇಶನದ 'ಕಾಂತಾರ - ಒಂದು ದಂತಕಥೆ' ಚಿತ್ರದ ಚಿತ್ರೀಕರಣವನ್ನು ಆರಂಭಿಸಲು ತಯಾರಿ ನಡೆಸಿದ್ದಾರೆ, ನಟನೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ.
ಅರ್ಚನಾ ಮತ್ತು ರಿಷಬ್ ಶೆಟ್ಟಿ
ಅರ್ಚನಾ ಮತ್ತು ರಿಷಬ್ ಶೆಟ್ಟಿ

ನಟ ರಿಷಬ್ ಶೆಟ್ಟಿ ತಮ್ಮ ಮುಂಬರುವ ನಿರ್ದೇಶನದ 'ಕಾಂತಾರ - ಒಂದು ದಂತಕಥೆ' ಚಿತ್ರದ ಚಿತ್ರೀಕರಣವನ್ನು ಆರಂಭಿಸಲು ತಯಾರಿ ನಡೆಸಿದ್ದಾರೆ, ನಟನೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ಕಾಂತಾರ ಚಿತ್ರದ ಮುಹೂರ್ತ ಆಗಸ್ಟ್ 27 ರಂದು ನಡೆಯಲಿದೆ.

ಕಾಂತಾರ ಸಿನಿಮಾದಲ್ಲಿ ಅರ್ಚನಾ ನಟಿಸುತ್ತಿದ್ದಾರೆ. 1990 ರಲ್ಲಿ ಹುಲಿಯಾ ಸಿನಿಮಾದಲ್ಲಿ ದೇವರಾಜ್ ಜೊತೆ ನಾಯಕಿಯಾಗಿ ನಟಿಸಿದ್ದ ಅರ್ಚನಾ 25 ವರ್ಷಗಳ ನಂತರ ಕನ್ನಡಕ್ಕೆ ಮರಳುತ್ತಿದ್ದಾರೆ.

ತೆಲುಗು, ತಮಿಳು, ಮಲಯಾಳಂ ಸಿನಿಮಾ ರಂಗದಲ್ಲಿ ಜನಪ್ರಿಯವಾಗಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಅರ್ಚನಾ ಕನ್ನಡದಲ್ಲಿಯೂ ಚಿರಪರಿಚಿತರು. ಪ್ರೇಮಿಗಳ ಸವಾಲ್, ಬೆಳ್ಳಿ ನಾಗ, ಗುರಿ. ಹಾಗೂ ಡಾ. ರಾಜ್ ಕುಮಾರ್ ನಟನೆಯ ಒಂದು ಮುತ್ತಿನ ಕಥೆ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ.

ಈ ವಿಷಯವನ್ನು ನಿರ್ದೇಶಕರು ಶೀಘ್ರದಲ್ಲೆ ಖಚಿತ ಪಡಿಸಲಿದ್ದಾರೆ. ವಿಜಯ ಕಿರಂಗದೂರು ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ಅಚ್ಯುತಕುಮಾರ್, ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಸಿನಿಮಾಗೆ ಅರವಿಂದ್ ಕಶ್ಯಪ್ ಛಾಯಾಗ್ರಾಹಣವಿದೆ, ನಾಲ್ಕು ವರ್ಷಗಳ ನಂತರ ರಿಷಬ್ ಶೆಟ್ಟಿ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com