ವಚನ ನಿರ್ದೇಶಿಸಿ ವಸಿಷ್ಠ ಸಿಂಹ ನಟಿಸುತ್ತಿರುವ ದಂತಕಥೆ ಸಿನಿಮಾದಲ್ಲಿ ಯಶ ಶಿವಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸೆಪ್ಟಂಬರ್ ಮಧ್ಯಬಾಗದಲ್ಲಿ ಈ ಸಂಬಂಧ ಚಿತ್ರತಂಡ ಅಧಿಕೃತ ಘೋಷಣೆ ಮಾಡಲಿದೆ. ಒಂದು ಪ್ರಕರಣದಲ್ಲಿ ಕೆಲಸ ಮಾಡಲು ನಿಯೋಜಿಸಲಾಗಿರುವ ಇಬ್ಬರು ಪೊಲೀಸ್ ಅಧಿಕಾರಿಗಳ ಕಥೆ ಇದಾಗಿದೆ.
ಈ ಚಿತ್ರದಲ್ಲಿ ಕಿಶೋರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರವಿಶಂಕರ್, ಚಿಕ್ಕಣ್ಣ ಮತ್ತು ಧರ್ಮಣ್ಣ ಕಡೂರ್ ನಟಿಸಿದ್ದಾರೆ.
ಪದವಿ ಪೂರ್ವ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಯಶ ಶಿವಕುಮಾರ್, ರಾಜ್ ಸೌಂಡ್ಸ್ ಅಂಡ್ ಲೈಟ್ಸ್, ಬೈರಾಗಿ, ಮತ್ತು ಡೆಡ್ಲಿ 3 ನಿರ್ಮಾಣದ ವಿವಿಧ ಹಂತಗಳಲ್ಲಿ ಕೂಡ ಇದ್ದಾರೆ.
ಅವರು ಸೆಪ್ಟೆಂಬರ್ನಲ್ಲಿ ಬಹದ್ದೂರ್ ಗಂಡು ಚಿತ್ರದ ಚಿತ್ರೀಕರಣ ಆರಂಭಿಸಲಿದ್ದಾರೆ. ದಂತಕಥೆಗೆ ಸಿನಿಮಾಗೆ ಅನೂಪ್ ಸೀಳಿನ್ ಸಂಗೀತ ಮತ್ತು ನವೀನ್ ಕುಮಾರ್ ಛಾಯಾಗ್ರಹಣವಿದೆ.
Advertisement