ಪಿಎಂಟಿ ನಂತರ ನನ್ನ ಅತ್ಯುತ್ತಮ ಪ್ರಾಜೆಕ್ಟ್ 'ಕಾಂತಾರ': ನಟಿ ಸಪ್ತಮಿ ಗೌಡ

ನಿರ್ದೇಶಕ, ಸೂರಿ ಅವರ ಪಾಪ್‌ಕಾರ್ನ್ ಮಂಕಿ ಟೈಗರ್ (ಪಿಎಂಟಿ) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸಪ್ತಮಿ ಗೌಡ ಅವರು ಇದೀಗ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. 
ಸಪ್ತಮಿ ಗೌಡ
ಸಪ್ತಮಿ ಗೌಡ

ನಿರ್ದೇಶಕ, ಸೂರಿ ಅವರ ಪಾಪ್‌ಕಾರ್ನ್ ಮಂಕಿ ಟೈಗರ್(ಪಿಎಂಟಿ) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸಪ್ತಮಿ ಗೌಡ ಅವರು ಇದೀಗ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. 

ಶುಕ್ರವಾರ ನಡೆದ ಮುಹೂರ್ತದಲ್ಲಿ ಈ ಯೋಜನೆಯಲ್ಲಿ ಸಪ್ತಮಿಯ ಸೇರ್ಪಡೆಯ ಕುರಿತು ಅಧಿಕೃತ ಘೋಷಣೆ ಮಾಡಲಾಯಿತು. ಇನ್ನು ಚಿತ್ರದ ಬಗ್ಗೆ ಮಾತನಾಡಿದ ಸಪ್ತಮಿ ಗೌಡ ಅವರು ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದ ನಂತರ ಇದು ನನ್ನ ಜೀವನದಲ್ಲಿ ಉತ್ತಮ ಚಿತ್ರವಾಗಲಿದೆ ಎಂದು ಹೇಳಿದರು. 

ಕುಂದಾಪುರದ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಪೂಜಾ ಸಮಾರಂಭ ನಡೆಯಿತು. ನಿರ್ಮಾಪಕ ವಿಜಯ್ ಕಿರಗಂದೂರು ಅವರ ಹಿರಿಯ ಸಹೋದರ ಮಂಜುನಾಥ್ ಮೊದಲ ಶಾಟ್‌ಗೆ ಕ್ಲಾಪ್ ಮಾಡಿದರು. ಉದ್ಯಮಿ ಉದಯ್ ಶೆಟ್ಟಿ ಕ್ಯಾಮೆರಾ ಆನ್ ಮಾಡಿದರು. ರಿಷಬ್‌ಗೆ ಇದು ಒಂದು ಭಾವನಾತ್ಮಕ ಕ್ಷಣವಾಗಿದ್ದು, ತನ್ನ ತಾಯಿ ಮೊದಲ ಬಾರಿಗೆ ತನ್ನ ಚಿತ್ರದ ಮುಹೂರ್ತದಲ್ಲಿ ಭಾಗಿಯಾಗಿದ್ದರು ಎಂದು ಸಪ್ತಮಿ ಸಂತಸದಿಂದ ಹೇಳಿದರು.

ಪಿಎಂಟಿಯ ನಂತರ ಒಳ್ಳೆಯ ಚಿತ್ರಕ್ಕಾಗಿ ತಾಳ್ಮೆಯಿಂದ ಕಾಯುತ್ತಿದ್ದೆ. ಅದರಂತೆ ನಾನು ಒಂದು ಉತ್ತಮ ಯೋಜನೆಯ ಭಾಗವಾಗಿದ್ದೇನೆ. ನಟ ರಿಷಬ್ ಶೆಟ್ಟಿಯವರ ನಿರ್ದೇಶನದಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದು, ಮಹಿಳಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಂತಹ ಪ್ರಮುಖ ನಿರ್ಮಾಣ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿರುವುದು ಖುಷಿಯ ಸಂಗತಿ ಎಂದರು.

ಕಾಂತಾರ ಚಿತ್ರದಲ್ಲಿ ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾದ್ ಮತ್ತು ಗುರು ಸೇರಿದಂತೆ ಪ್ರಮುಖ ತಾರಾಗಣವನ್ನು ಒಳಗೊಂಡಿದೆ. ಕಾಸರಗೋಡು ಸ ಪ್ರ ಹಿ ಶಾಲೆಯಲ್ಲಿ ಪ್ರವೀಣನ ಪಾತ್ರವನ್ನು ನಿರ್ವಹಿಸಿದ ನಂತರ ಜನಪ್ರಿಯತೆ ಗಳಿಸಿದ ರಂಜನ್ ಕೂಡ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಕಾಂತಾರದಲ್ಲಿ ಅಜನೀಶ್ ಲೋಕನಾಥ್ ಸಂಗೀತ ಮತ್ತು ಅರವಿಂದ ಕಶ್ಯಪ್ ಅವರ ಛಾಯಾಗ್ರಹಣವಿದ್ದು, ರಿಷಬ್ ಶೆಟ್ಟಿಯವರ ಪತ್ನಿ ಪ್ರಗತಿ ಕಾಸ್ಟ್ಯೂಮ್ ಗಳನ್ನು ವಿನ್ಯಾಸಗೊಳಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com