ಗುರು ದೇಶಪಾಂಡೆ 'ಪೆಂಟಗನ್‌'ನಲ್ಲಿ ದುನಿಯಾ ಕಿಶೋರ್, ಪೃಥ್ವಿ ಅಂಬರ್

ನಿರ್ದೇಶಕರಾಗಿ ಬದಲಾದ ನಿರ್ಮಾಪಕ ಗುರು ದೇಶಪಾಂಡೆ ಅವರು ಪೆಂಟಗನ್ ಹೆಸರಿನಲ್ಲಿ ಐದು ಕತೆಗಳನ್ನು ಒಳಗೊಂಡ ಸಿನಿಮಾ ನಿರ್ಮಿಸುತ್ತಿದ್ದು, ಈ ಪೈಕಿ ಒಂದು ಕತೆಗೆ ದುನಿಯಾ ಕಿಶೋರ್ ಹಾಗೂ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪೆಂಟಗನ್‌ನಲ್ಲಿ ದುನಿಯಾ ಕಿಶೋರ್
ಪೆಂಟಗನ್‌ನಲ್ಲಿ ದುನಿಯಾ ಕಿಶೋರ್

ನಿರ್ದೇಶಕರಾಗಿ ಬದಲಾದ ನಿರ್ಮಾಪಕ ಗುರು ದೇಶಪಾಂಡೆ ಅವರು ಪೆಂಟಗನ್ ಹೆಸರಿನಲ್ಲಿ ಐದು ಕತೆಗಳನ್ನು ಒಳಗೊಂಡ ಸಿನಿಮಾ ನಿರ್ಮಿಸುತ್ತಿದ್ದು, ಈ ಪೈಕಿ ಒಂದು ಕತೆಗೆ ದುನಿಯಾ ಕಿಶೋರ್ ಹಾಗೂ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದಲ್ಲಿ ಕಿಶೋರ್ ಅವರ ಫಸ್ಟ್ ಲುಕ್ ಪೋಸ್ಟರ್ ನ್ನು ಗುರುದೇಶಪಾಂಡೆಯವರು ಬಿಡುಗಡೆ ಮಾಡಿದ್ದು, ಈ ಪೋಸ್ಟರನ್ನು ಗಮನಿಸಿದರೆ, ಕಿಶೋರ್ ಅವರು ಚಿತ್ರದಲ್ಲಿ ಕನ್ನಡಪರ ಹೋರಾಟಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆಂಬುದು ತಿಳಿದುಬರುತ್ತಿದೆ. ಆದರೆ, ಈ ಬಗ್ಗೆ ನಿರ್ದೇಶಕರು ಯಾವುದೇ ರೀತಿಯ ಸ್ಪಷ್ಟನೆಗಳನ್ನೂ ನೀಡಿಲ್ಲ.

ನೈಜ ಕಥೆಗಳನ್ನು ಆಧರಿಸಿ ಪೆಂಟಗನ್ ಚಿತ್ರವನ್ನು ನಿರ್ಮಿಸಲಾಗುತ್ತಿದ್ದು, ಚಿತ್ರದ ಕಥೆ ಕುರಿತು ನಿರ್ದೇಶಕರು ಯಾವುದೇ ರೀತಿಯ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಚಿತ್ರದಲ್ಲಿ ಕಿಶೋರ್ ಅವರು ನಾಯಕರಾಗಿ ಅಭಿನಯಿಸಿದ್ದಾರೆಯೇ ಅಥವಾ ವಿಲನ್ ಆಗಿ ಅಭಿನಯಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. 

ಜಿ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಪೆಂಟಗನ್‌ ಚಿತ್ರವನ್ನು ರಘು ಶಿವಮೊಗ್ಗ, ಆಕಾಶ್ ಶ್ರೀವಾತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಮತ್ತು ಗುರು ದೇಶಪಾಂಡೆ ನಿರ್ದೇಶಿಸಿದ್ದಾರೆ. 

ಈಗಾಗಲೇ ನಾಲ್ಕು ಕಥೆಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಗುರು ದೇಶಪಾಂಡೆ ನಿರ್ದೇಶನದ ಕಥೆ ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ. ಮಣಿಕಾಂತ್‌ ಕದ್ರಿ ಈ ಸಿನಿಮಾಗೆ ಸಂಗೀತ ಸಂಯೋಜಿಸಿದ್ದು, ಅಭಿಲಾಷ್ ಕಲತಿಯವರು ಚಿತ್ರದ ಛಾಯಾಗ್ರಾಹಕರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com