ಪ್ರಜ್ವಲ್ ದೇವರಾಜ್
ಪ್ರಜ್ವಲ್ ದೇವರಾಜ್

ಮೊಟ್ಟಮೊದಲ ಬಾರಿಗೆ ಪ್ರಜ್ವಲ್ ದೇವರಾಜ್- ನಂದ ಕಿಶೋರ್ ಕಾಂಬಿನೇಷನ್: ಶೀಘ್ರವೇ ಸಿನಿಮಾಗೆ ಮುಹೂರ್ತ

ಮಾಸ್ ಬರ್ಕ್ಲಿ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ ಕಾಲಚಕ್ರ ನಿರ್ದೇಶನ ಮಾಡಿದ್ದ ಸುಮಂತ್ ಕ್ರಾಂತಿ ಅವರೀಗ ಪಕ್ಕಾ ಆ್ಯಕ್ಷನ್ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ಕಾಲಚಕ್ರ, ನಾನಿ ಸಿನಿಮಾ ನಿರ್ದೇಶಕ ಸುಮಂತ್ ಕ್ರಾಂತಿ ಈಗ ನಿರ್ಮಾಪಕರಾಗಿದ್ದಾರೆ. ಮಾಸ್ ಬರ್ಕ್ಲಿ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ ಕಾಲಚಕ್ರ ನಿರ್ದೇಶನ ಮಾಡಿದ್ದ ಸುಮಂತ್ ಕ್ರಾಂತಿ ಅವರೀಗ ಪಕ್ಕಾ ಆ್ಯಕ್ಷನ್ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. 

ಸುಮಂತ್ ಕ್ರಾಂತಿ ಅವರ ರಶ್ಮಿಫಿಲಂಸ್ ಬ್ಯಾನರ್ ಮೂಲಕ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರ ಇದಾಗಿದ್ದು,  ಪೊಗರು ಖ್ಯಾತಿಯ ನಂದ ಕಿಶೋರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿದ್ದಾರೆ.

ಇದೇ  ಮೊದಲ ಬಾರಿಗೆ ನಂದ ಕಿಶೋರ್ ಮತ್ತು ಪ್ರಜ್ವಲ್ ಕಾಂಬಿನೇಷನ್ ನಲ್ಲಿ ಸಿನಿಮಾ ಬರುತ್ತಿದ್ದು, ಎಲ್ಲವೂ ಅಂದಕೊಂಡಂತೆ ಆದರೆ ಶೀಘ್ರವೇ ಮುಹೂರ್ತ ನೆರವೇರಲಿದ್ದು, ಆ ಸಮಯದಲ್ಲಿ ಉಳಿದ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಸೆಪ್ಟಂಬರ್ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಆರಂಭಿಸುವ ಸಾಧ್ಯತೆಯಿದೆ ಎಂದು ನಿರ್ಮಾಪಕ ಸುಮಂತ್ ಕ್ರಾಂತಿ ತಿಳಿಸಿದ್ದಾರೆ. ನಂದ ಕಿಶೋರ್ ಶ್ರೇಯಸ್ ಮಂಜು ನಟನೆಯ ರಾಣಾ ಸಿನಿಮಾ ಶೂಟಿಂಗ್ ಮುಗಿದ ನಂತರ ಹೊಸ ಚಿತ್ರಕ್ಕೆ ಕೈ ಹಾಕಲು ನಿರ್ಧರಿಸಿದ್ದಾರೆ. ರಾಣಾ ಸಿನಿಮಾ ಜುಲೈ 3ನೇ ವಾರದಲ್ಲಿ ಶೂಟಿಂಗ್ ಆರಂಭವಾಗಲಿದೆ.

ಸದ್ಯ ಪ್ರಜ್ವಲ್ ದೇವರಾಜ್ ಕೈಯ್ಯಲ್ಲಿ ಹಲವು ಸಿನಿಮಾಗಳಿದ್ದು, ಅರ್ಜುನ್ ಗೌಡ ಮತ್ತು ಆಭಾರ ರಿಲೀಸ್ ಗೆ ರೆಡಿಯಾಗಿವೆ. ವೀರಂ ಶೂಟಿಂಗ್ ಜುಲೈ 12 ರಿಂದ ಆರಂಭವಾಗಲಿದೆ. ಅದಾದ ನಂತರ ಗುರುದತ್ತ ಗಾಣಿಗ ನಿರ್ದೇಶನದ ಮಾಫಿಯಾ ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೋಳ್ಳಲಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com