ಎಪಿ ಅರ್ಜುನ್ ನಿರ್ದೇಶನದ 'ಅದ್ಧೂರಿ ಲವರ್ 'ನಿಂದ ಹೊರಬಂದ ನಟಿ ಸಂಜನಾ ಆನಂದ್!

ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶ ಮಾಡಿದ ಸಂಜನಾ ಆನಂದ್‌, ಸದ್ಯ ಗಮನ ಸೆಳೆಯುತ್ತಿರುವ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ.
ಸಂಜನಾ ಆನಂದ್
ಸಂಜನಾ ಆನಂದ್

'ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶ ಮಾಡಿದ ಸಂಜನಾ ಆನಂದ್‌, ಸದ್ಯ ಗಮನ ಸೆಳೆಯುತ್ತಿರುವ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ. 'ಸಲಗ' ಸಿನಿಮಾ ಬಿಡುಗಡೆಗಾಗಿ ಕಾಯುತ್ತಿರುವ ಅವರನ್ನು ತೆಲುಗು ಚಿತ್ರರಂಗದಿಂದಲೂ ಕಥೆಗಳು ಹುಡುಕಿಕೊಂಡು ಬರುತ್ತಿವೆ.

'ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಸಿನಿಮಾ ಕಥೆ ಮತ್ತುನಿರೂಪಣೆಯಿಂದ ಗಮನ ಸೆಳೆದಿತ್ತು. ಆ ಸಿನಿಮಾದ ನಾಯಕಿ ಸಂಜನಾ ಆನಂದ್‌ ಕೂಡ ನಾಲ್ಕೈದು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. 

ಆದರೆ ಸದ್ಯದ ಮಾಹಿತಿ ಪ್ರಕಾರ ಡೇಟ್ಸ್ ಹೊಂದಾಣಿಕಯಾಗದ ಕಾರಣ ಎಪಿ ಅರ್ಜುನ್ ನಿರ್ದೇಶನದ ಅದ್ಧೂರಿ ಲವರ್ ಸಿನಿಮಾದಿಂದ ನಟಿ ಸಂಜನಾ ಆನಂದ್ ಹೊರಬಂದಿದ್ದಾರೆ. ಅದ್ಧೂರಿ  ಲವರ್ ಸಿನಿಮಾ ಜುಲೈ 21 ರಿಂದ ಸೆಟ್ಟೇರಬೇಕಿತ್ತು. 

ಎಪಿ ಅರ್ಜುನ್ ಎರಡು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ, ಅದ್ಧೂರಿ ಲವರ್ ಮತ್ತು ಇನ್ನೂ ಹೆಸರಿಡದ ಸಿನಿಮಾದಲ್ಲಿ ಧ್ರುವ ಸರ್ಜಾ ನಟನೆಯ ಸಿನಿಮಾವನ್ನು  ನಿರ್ದೇಶಿಸುತ್ತಿದ್ದಾರೆ. ಆದರೆ ಅವರ ಎರಡು ಸಿನಿಮಾಗಳ ನಡುವೆ ನನಗೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಸಿನಿಮಾದಿಂದ ಹೊರಬಂದಿರುವುದಾಗಿ ಸಂಜನಾ  ಸ್ಫಷ್ಟ ಪಡಿಸಿದ್ದಾರೆ.

ಪರಸ್ಪರ ಒಪ್ಪಿಗೆ ಮೇಲೆ ನಾನು ಹೊರಬಂದಿದ್ದೇನೆ, ಸಲಗ ಸಿನಿಮಾ ರಿಲೀಸ್ ಗಾಗಿ ಸಂಜನಾ ಕಾಯುತ್ತಿದ್ದಾರೆ, ಅದರ ಜೊತೆ ವಿಂಡೋ ಸೀಟ್, ಶೋಕಿವಾಲಾ, ಶಶಾಂಕ್ ನಿರ್ದೇಶನದ ಮತ್ತೊಂದು ಸಿನಿಮಾದಲ್ಲೂ ಸಂಜನಾ ಬ್ಯುಸಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com