ಮತ್ತೆ ಒಂದಾದ 'ಯಜಮಾನ' ಜೋಡಿ: ದರ್ಶನ್ 55ನೇ ಸಿನಿಮಾಗೆ ವಿ.ಹರಿಕೃಷ್ಣ ನಿರ್ದೇಶನ

ದರ್ಶನ್‌ ಅಭಿನಯದ ‘ಯಜಮಾನ’ ಚಿತ್ರವು 2019ರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ಇದೀಗ ಇದೇ ಚಿತ್ರತಂಡ ಮತ್ತೆ ಒಂದಾಗಿದೆ.
ದರ್ಶನ್ 55 ನೇ ಸಿನಿಮಾಗೆ ಹರಿಕೃಷ್ಣ ನಿರ್ದೇಶನ
ದರ್ಶನ್ 55 ನೇ ಸಿನಿಮಾಗೆ ಹರಿಕೃಷ್ಣ ನಿರ್ದೇಶನ

ದರ್ಶನ್‌ ಅಭಿನಯದ ‘ಯಜಮಾನ’ ಚಿತ್ರವು 2019ರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ಇದೀಗ ಇದೇ ಚಿತ್ರತಂಡ ಮತ್ತೆ ಒಂದಾಗಿದೆ.

ದರ್ಶನ್‌ ನಟನೆಯ 55ನೇ ಸಿನಿಮಾವನ್ನು ಶೈಲಜಾ ನಾಗ್‌ ಹಾಗೂ ಬಿ.ಸುರೇಶ್‌ ನಿರ್ಮಾಣ ಮಾಡುತ್ತಿದ್ದು, ವಿ.ಹರಿಕೃಷ್ಣ ನಿರ್ದೇಶಿಸಲಿದ್ದಾರೆ. 

ಈ ಕುರಿತು ಶೈಲಜಾ ನಾಗ್‌ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ನೀಡಿದ್ದು, ‘ಅಭಿಮಾನದಿಂದ ಡಿ55 ಟೇಕ್‌ಆಫ್‌ ಆಗಿದೆ’ ಎಂದು ಉಲ್ಲೇಖಿಸಿದ್ದಾರೆ. ಇದರ ಜೊತೆಗೆ ದರ್ಶನ್‌ ಅವರ ಜೊತೆಗಿನ ಸೆಲ್ಫಿಯನ್ನೂ ಶೈಲಜಾ ನಾಗ್‌ ಅಪ್‌ಲೋಡ್‌ ಮಾಡಿದ್ದಾರೆ. ಚಿತ್ರದ ಹೆಸರು ಇನ್ನೂ ಘೋಷಣೆಯಾಗಿಲ್ಲ.

ಹರಿಕೃಷ್ಣ ಮತ್ತು ಪ್ರೊಡಕ್ಷನ್ ಹೌಸ್ ಮತ್ತೆ ದರ್ಶನ್ ಜೊತೆ ಸೇರಿಕೊಳ್ಳಲು ಸಂತೋಷವಾಗಿದೆ. ಇಂದು ಅಧಿಕೃತ ಘೋಷಣೆ ಮಾಡಲಾಗಿದ್ದು, ಸಿನಿಮಾ ತಯಾರಿಕಾ ಕಾರ್ಯ ಪ್ರಗತಿಯಲ್ಲಿದೆ. ನಿರ್ದೇಶನದ ಜೊತೆಗೆ ಹರಿಕೃಷ್ಣ ಸಿನಿಮಾಗೆ ಸಂಗೀತ ನೀಡಿದ್ದಾರೆ. ಇನ್ನೆರೆಡು ವಾರಗಳಲ್ಲಿ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ಶೈಲಜಾ ನಾಗ್ ತಿಳಿಸಿದ್ದಾರೆ. 

ನಟ ದರ್ಶನ್ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರಲ್ಲಿ ಒಬ್ಬರು. ಅವರ ಕಾಲ್‌ಶೀಟ್‌ಗಾಗಿ ನಿರ್ಮಾಪಕರು ಕಾದುಕುಳಿತಿರುತ್ತಾರೆ. 'ರಾಬರ್ಟ್' ಆದಮೇಲೆ 'ರಾಜಾ ವೀರ ಮದಕರಿ ನಾಯಕ' ಸಿನಿಮಾವನ್ನು ದರ್ಶನ್ ಕೈಗೆತ್ತಿಕೊಳ್ಳಬೇಕಿತ್ತು. ಆದರೆ, ಕೊರೊನಾ ಎಫೆಕ್ಟ್‌ನಿಂದಾಗಿ ಅದು ತಡವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com