ತೋತಾಪುರಿ ಚಿತ್ರಕ್ಕೆ ನಿರ್ದೇಶಕ ವಿಜಯ ಪ್ರಸಾದ್ ರಾಜ್ಯ ಪ್ರಶಸ್ತಿ ಸಿಗುತ್ತೆ: ಜಗ್ಗೇಶ್ ಅಭಿಮತ

ನಟನೆ ಹಾಗೂ ರಾಜಕೀಯ ಜರ್ನಿಯಲ್ಲಿ ಪಳಗಿರುವ ನಟ ಜಗ್ಗೇಶ್, ತೋತಾಪುರಿ ಚಿತ್ರದ ಕೆಲಸಗಳನ್ನು ಪುನರಾರಂಭಿಸಿದ್ದಾರೆ. ಸದ್ಯ ಅವರು ವಿಜಯ ಪ್ರಸಾದ್ ನಿರ್ದೇಶನದ ಚಿತ್ರಕ್ಕೆ ಡಬ್ಬಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.
ತೋತಾಪುರಿ ಚಿತ್ರದಲ್ಲಿ ನಟ ಜಗ್ಗೇಶ್
ತೋತಾಪುರಿ ಚಿತ್ರದಲ್ಲಿ ನಟ ಜಗ್ಗೇಶ್

ಬೆಂಗಳೂರು: ನಟನೆ ಹಾಗೂ ರಾಜಕೀಯ ಜರ್ನಿಯಲ್ಲಿ ಪಳಗಿರುವ ನಟ ಜಗ್ಗೇಶ್, ತೋತಾಪುರಿ ಚಿತ್ರದ ಕೆಲಸಗಳನ್ನು ಪುನರಾರಂಭಿಸಿದ್ದಾರೆ. ಸದ್ಯ ಅವರು ವಿಜಯ ಪ್ರಸಾದ್ ನಿರ್ದೇಶನದ ಚಿತ್ರಕ್ಕೆ ಡಬ್ಬಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಟುಡಿಯೋದಿಂದಲೇ ಮಾತನಾಡಿರುವ ಜಗ್ಗೇಶ್, ತೋತಾಪುರಿ ವಿಷಯ ಆಧಾರಿತ ಸಿನಿಮಾವಾಗಿರುವುದಾಗಿ ತಿಳಿಸಿದರು.

ಇದೊಂದು ಎ-ಗ್ರೇಡ್ ಸಿನಿಮಾವಾಗಿದೆ. ತೋತಾಪುರಿ ನೀರ್ ದೋಸೆಗಿಂತ ಹತ್ತು ಪಟ್ಟು ಉತ್ತಮ ಸಿನಿಮಾವಾಗಿದೆ. ಈ ಚಿತ್ರದೊಂದಿಗೆ ವಿಜಯ ಪ್ರಸಾದ್ ಖಂಡಿತವಾಗಿ ರಾಜ್ಯ ಪ್ರಶಸ್ತಿ ಪಡೆಯಲಿದ್ದಾರೆ. ಕಾಲ ಬದಲಾಗಿದೆ. ಇಂದಿನ ಸಿನಿ ಪ್ರಿಯರು ಹೆಚ್ಚಾಗಿ ವಿಷಯ ಆಧಾರಿತ ಸಿನಿಮಾದ ಕಡೆಗೆ ಒಲವು ಹೊಂದಿದ್ದಾರೆ. ತೋತಾಪುರಿ ಅವರ ಇಷ್ಟಗಳನ್ನು ಪೂರೈಸಲಿದೆ ಎಂದರು. 

  ಕೆಎ ಸುರೇಶ್ ನಿರ್ಮಾಣದ ಈ ಚಿತ್ರ ಇದೀಗ ಪೋಸ್ಟ್ ಪ್ರೊಢಕ್ಷನ್ ಹಂತದಲ್ಲಿದೆ. ಎರಡು ಭಾಗಗಳಲ್ಲಿ ಹೊರಬರಲಿದೆ. ಜಗ್ಗೇಶ್ ಅವರೊಂದಿಗೆ ಆದಿತಿ ಪ್ರಭುದೇವಾ, ವೀಣಾ ಸುಂದರ್, ಧನಂಜಯ್, ಸುಮನ್ ರಂಗನಾಥ್ ಮತ್ತಿತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಜಗ್ಗೇಶ್ ಈ ಚಿತ್ರದಷ್ಟೇ ಮುಂದಿನ ಸಿನಿಮಾ ರಂಗನಾಯಕ ಸಿನಿಮಾ ಬಗ್ಗೆಯೂ ಕುತೂಹಲ ಹೊಂದಿದ್ದಾರೆ. ಎ ಆರ್ ವಿಕ್ಯಾತ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗುರುಪ್ರಸಾದ್ ಆಕ್ಷನ್ ಕಟ್ ಹೇಳಲಿದ್ದಾರೆ. ರಂಗನಾಯಕ ಮತ್ತೊಂದು ಆಸಕ್ತಿದಾಯಕ ಕಥೆಯಾಗಿದ್ದು, ಆಗಸ್ಟ್ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಜಗ್ಗೇಶ್ ತಿಳಿಸಿದರು.

ಸದ್ಯ ಜಗ್ಗೇಶ್ ಕೈಯಲ್ಲಿ ಐದು ಪ್ರಮುಖ ಕಥೆಗಳಿದ್ದು, ನಟ ಆತುರ ಬೀಳುತ್ತಿಲ್ಲ. ಈ ವರ್ಷ ತೋತಾಪುರಿ ಪ್ರಚಾರ ಮತ್ತು ರಂಗನಾಯಕ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತೇನೆ. ಈ ಎರಡು ಪ್ರಾಜೆಕ್ಟ್ ಮುಗಿಸಿದ ನಂತರ ಮುಂದಿನ ಚಿತ್ರದ ಬಗ್ಗೆ ನಿರ್ಧರಿಸುತ್ತೇನೆ. ಈ ಎಲ್ಲಾ ಪ್ರಾಜೆಕ್ಟ್ ಗಳ ಮಧ್ಯೆ, ಆರೋಗ್ಯದ ಕಡೆಗೆ ಗಮನ ನೀಡಿ, ಕುಟುಂಬದೊಂದಿಗೆ ಕಾಲ ಕಳೆಯುವುದಾಗಿ ಜಗ್ಗೇಶ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com