ಹಿರಿಯ ನಿರ್ದೇಶಕ ಸುನೀಲ್ ಕುಮಾರ್ ಜೊತೆ ಕೆಲಸ ಮಾಡಲು ಅನಿಲ್ ಸಿದ್ದು ರೆಡಿ

ಕನ್ನಡ ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಅನಿಲ್ ಸಿದ್ದು, ಬಹುತೇಕ ವಿಲನ್ ಪಾತ್ರಗಳಲ್ಲಿ ನಟಿಸಿರುವ ಅನಿಲ್ ಸಿದ್ಧು ವಿಷಯಾಧಾರಿತ ಕತೆಯಲ್ಲಿ ನಟಿಸಲು ಆಸಕ್ತಿ ತೋರಿದ್ದಾರೆ.
ಸುನೀಲ್ ಕುಮಾರ್ ದೇಸಾಯಿ ಮತ್ತು ಅನಿಲ್ ಸಿದ್ಧು
ಸುನೀಲ್ ಕುಮಾರ್ ದೇಸಾಯಿ ಮತ್ತು ಅನಿಲ್ ಸಿದ್ಧು

ಕನ್ನಡ ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಅನಿಲ್ ಸಿದ್ದು, ಬಹುತೇಕ ವಿಲನ್ ಪಾತ್ರಗಳಲ್ಲಿ ನಟಿಸಿರುವ ಅನಿಲ್ ಸಿದ್ಧು ವಿಷಯಾಧಾರಿತ ಕತೆಯಲ್ಲಿ ನಟಿಸಲು ಆಸಕ್ತಿ ತೋರಿದ್ದಾರೆ.

ಹಿರಿಯ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ ಜೊತೆ ಕೆಲಸ ಮಾಡುವ ತಮ್ಮ ಕನಸು ನನಸಾಗಿದೆ ಎಂದು ಹೇಳಿದ್ದಾರೆ.

ಧರ್ಮ ಕೀರ್ತಿರಾಜ್ ಚಿತ್ರದಲ್ಲಿ ಖಳನಾಯಕನಾಗಿ ಪಾದಾರ್ಪಣೆ ಮಾಡಿದ ಈ ನಟ, ಸಿಲಿಕಾನ್ ಸಿಟಿ, ಪಡ್ಡೆ ಹುಲಿ, ಮತ್ತು ಇನ್ನೂ ಬಿಡುಗಡೆಯಾಗಬೇಕಾದ ವರದ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಉಪೇಂದ್ರ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ವಿಜಯ್ ಸೂರ್ಯ ನಿರ್ದೇಶನದ ಚಿತ್ರ ಎ ++ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು.

ವಿರಾಟ ಪರ್ವ ರಿಲೀಸ್ ಗಾಗಿ ಕಾಯುತ್ತಿದ್ದಾರೆ, ಬ್ರೇಕ್ ಗಾಗಿ ಹಂಬಲಿಸುತ್ತಿರುವ ನಟ ಅನಿಲ್ ಸಿದ್ಧು ಸುನೀಲ್ ಕುಮಾರ್ ದೇಸಾಯಿ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.

ನಮ್ಮ ಹೊಸ ಸ್ಟುಡಿಯೊ 'ಗಾಡ್ ಕಿಸ್ ಯು ಕ್ರಿಯೇಷನ್ಸ್'ಗೆ ನಾವು ನಿರ್ದೇಶಕರನ್ನು ಆಹ್ವಾನಿಸಿದ್ದೆವು, ಅವರು ನನ್ನ ಕೆಲವು ಫೋಟೋಗಳನ್ನು ನೋಡುವಾಗ, ನನಗಾಗಿ ಒಂದು ವಿಶಿಷ್ಟ ಕತೆ ಮಾಡುವುದಾಗಿ ತಿಳಿಸಿದ್ದಾರೆ.

ಪ್ರಾಜೆಕ್ಟ್ ಇನ್ನೂ ಆರಂಭದ ಹಂತದಲ್ಲಿದೆ. ಎಲ್ಲಾ ಸಿದ್ದವಾದ ಮೇಲೆ ನಿರ್ದೇಶಕರೇ ಸ್ವತಃ ಸಿನಿಮಾ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ. ತಮಿಳಿನ ಕಥಾತಿ, ನಾನು, ಕಾಟ್ರು ವೆಲಿಯಿದೈ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕಿತು. ಭವಿಷ್ಯದಲ್ಲಿ ವಿವಿಧ ಭಾಷೆಗಳಲ್ಲಿ ಪ್ರಸಿದ್ಧ ನಿರ್ದೇಶಕರೊಂದಿಗೆ ಕೆಲಸ ಮಾಡಲು ನಾನು ಆಶಿಸುತ್ತೇನೆ" ಎಂದು ಅನಿಲ್ ಸಿದ್ಧು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com