ಬೆಂಗಳೂರು: ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ ಹೊಸ ಸಿನಿಮಾ 'ತಾಯಿ ಕಸ್ತೂರ್ ಗಾಂಧಿ' ಚಿತ್ರೀಕರಣ ಪೂರ್ತಿಯಾಗಿದೆ. ಆ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ನಟಿ ಹರಿಪ್ರಿಯ ಪ್ರಶಸ್ತಿ ವಿಜೇತ ನಿರ್ದೇಶಕ ಮತ್ತು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಹರಿಪ್ರಿಯ ಅವರು ಬರಗೂರು ರಾಮಚಂದ್ರಪ್ಪ ಅವರ ಅಮೃತಮತಿ ಸಿನಿಮಾದಲ್ಲಿ ನಟಿಸಿದ್ದರು.
ಸಿನಿಮಾ ಈ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ನಟಿ ಹರಿಪ್ರಿಯ ಅವರು ಕಸ್ತೂರ್ಬಾ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಕಸ್ತೂರ್ಬಾ ಅವರ ಜೀವನವನ್ನು ಅವರ ಮೂರು ಘಟ್ಟಗಳಲ್ಲಿ ಹೇಳುವ ಪ್ರಯತ್ನವನ್ನು ಮಾಡಲಾಗಿದೆ.
ಈ ಸಿನಿಮಾ ಬರಗೂರು ಅವರೇ ರಚಿಸಿದ ಕಾದಂಬರಿಯನ್ನು ಆಧರಿಸಿದೆ. ಸಿನಿಮಾ ಶುರುವಾಗುವುದಕ್ಕೂ ಮೊದಲು ಬರಗೂ ಅವರು ಅವರ ಕಾದಂಬರಿಯ ಪ್ರತಿಯನ್ನು ತಮ್ಮ ಕೈಗಿತ್ತು ಓದು ಎಂದರು. ಪುಸ್ತಕ ನನಗೆ ತುಂಬಾ ಇಷ್ಟವಾಯಿತು. ಅದನ್ನು ಅವರಿಗೆ ಹೇಳಿದೆ. ಆಗಲೇ ಬರಗೂರು ರಾಮಚಂದ್ರಪ್ಪ ಅವರು ತಮ್ಮ ಕಾದಂಬರಿಯನ್ನು ಸಿನಿಮಾ ಮಾಡಲು ಹೊರಟಿರುವ ಸುದ್ದಿ ತಿಳಿದಿದ್ದು ಎಂದು ಹರಿಪ್ರಿಯ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಜನ್ಮದಿನದಂದು ಹೊಸ ಚಿತ್ರ ಘೋಷಣೆ ಮಾಡಿದ ಅನುಷ್ಕಾ ಶೆಟ್ಟಿ
ಇಡೀ ಪ್ರಪಂಚಕ್ಕೆ ಗಾಂಧಿ ಯಾರು ಎಂಬುದು ಗೊತ್ತಿದೆ ಆದರೆ ಕಸ್ತೂರ್ಬಾ ಅವರ ಬಗ್ಗೆ ಹೆಚ್ಚಿನ ಮಂದಿಗೆ ಹೆಚ್ಚು ತಿಳಿದಿಲ್ಲ. ಅವರನ್ನು ಗಾಂಧಿ ಪತ್ನಿ ಎಂದಷ್ಟೇ ಗುರುತಿಸಲಾಗುತ್ತದೆ. ಆಕೆ ಎಂಥ ಶ್ರೇಷ್ಠ ಹೆಣ್ಣುಮಗಳು ಎಂಬುದನ್ನು ನಾನು ಈ ಸಿನಿಮಾ ಮಾಡುವ ಪ್ರಕ್ರಿಯೆಯಲ್ಲಿ ಕಂಡುಕೊಂಡೆ ಎನ್ನುತ್ತಾರೆ ಹರಿಪ್ರಿಯ.
ಅಲ್ಲದೆ ತಮ್ಮ ಸಿನಿಮಾದಿಂದ ಎಲ್ಲರಿಗೂ ಕಸ್ತೂರ್ಬಾ ಗಾಂಧಿ ಬಗ್ಗೆ ತಿಳಿದುಕೊಳ್ಳುವಂತಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಸಿನಿಮಾಗೆ ಗಾಯಕಿ ಶಮಿತಾ ಮಲ್ನಾಡ್ ಅವರು ಸಂಗೀತ ನೀಡಿದ್ದು ನಾಗರಾಜ್ ಅವಧಾನಿ ಸಿನಿಮೆಟೊಗ್ರಫಿ ಹೊಣೆ ಹೊತ್ತಿದ್ದಾರೆ.
ಜನ್ಮದಿನದಂದು ಹೊಸ ಚಿತ್ರ ಘೋಷಣೆ ಮಾಡಿದ ಅನುಷ್ಕಾ ಶೆಟ್ಟಿ
'ಬೆಳಕು ಹೋದ ಮೇಲೆ ಕತ್ತಲು ಬರಲೇ ಬೇಕು, ಅದೇ ಜೀವನ, ಅದೇ ಅಲ್ವ ಸರ್ ವೈರಾಗ್ಯ ಅಂದಿದ್ದರು ಅಪ್ಪು': ರಮೇಶ್ ಅರವಿಂದ್
ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಸಾರಾ ಅಲಿ ಖಾನ್ ವಿರುದ್ಧ ನೆಟ್ಟಿಗರ ಟ್ರೋಲ್
'ಟಾಮ್ ಅಂಡ್ ಜೆರ್ರಿ' ನಾಯಕಿ ಪಾತ್ರ ನಿಜಜೀವನದಲ್ಲಿ ನನ್ನನ್ನು ಹೋಲುತ್ತದೆ: ಚೈತ್ರಾ ರಾವ್
ಶರಣ್-ಸುನಿ ಕಾಂಬಿನೇಷನ್ 'ಅವತಾರ ಪುರುಷ' ಬಿಡುಗಡೆ ದಿನಾಂಕ ಫಿಕ್ಸ್!
Advertisement