ಅನಿತಾ ಭಟ್ ನಿರ್ಮಾಣದ ' ಸಮುದ್ರಂ' ಟೈಟಲ್ ಬಿಡುಗಡೆಗೊಳಿಸಿದ ನಟ ಶ್ರೀ ಮುರುಳಿ

ಅನಿತಾ ಭಟ್ ಕ್ರಿಯೇಷನ್ಸ್ ಹಾಗೂ ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್ ನಿರ್ಮಾಣದ 'ಸಮುದ್ರಂ' ಚಿತ್ರದ ಟೈಟಲ್ ನ್ನು ರೋರಿಂಗ್ ಸ್ಟಾರ್  ಶ್ರೀ ಮುರುಳಿ ಗಣೇಶ ಚತುರ್ಥಿ ಶುಭ ದಿನದಂದು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಸಮುದ್ರಂ ಚಿತ್ರದ ಟೈಟಲ್ ಬಿಡುಗಡೆ ಸಮಾರಂಭದಲ್ಲಿ ನಟ ಶ್ರೀಮುರುಳಿ, ನಟಿ ಹಾಗೂ ನಿರ್ಮಾಪಕಿ ಅನಿತಾ ಭಟ್ ಮತ್ತಿತರರು
ಸಮುದ್ರಂ ಚಿತ್ರದ ಟೈಟಲ್ ಬಿಡುಗಡೆ ಸಮಾರಂಭದಲ್ಲಿ ನಟ ಶ್ರೀಮುರುಳಿ, ನಟಿ ಹಾಗೂ ನಿರ್ಮಾಪಕಿ ಅನಿತಾ ಭಟ್ ಮತ್ತಿತರರು

ಬೆಂಗಳೂರು: ಅನಿತಾ ಭಟ್ ಕ್ರಿಯೇಷನ್ಸ್ ಹಾಗೂ ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್ ನಿರ್ಮಾಣದ 'ಸಮುದ್ರಂ' ಚಿತ್ರದ ಟೈಟಲ್ ನ್ನು ರೋರಿಂಗ್ ಸ್ಟಾರ್  ಶ್ರೀ ಮುರುಳಿ ಗಣೇಶ ಚತುರ್ಥಿ ಶುಭ ದಿನದಂದು ಬಿಡುಗಡೆ ಮಾಡಿ ಶುಭ ಹಾರೈಸಿದರು. 

ಹೆಸರೇ ಹೇಳುವಂತೆ ಇದೊಂದು ಕಡಲ ಕಿನಾರೆಯಲ್ಲಿನ ಭಾವನಾತ್ಮಕ ಕಥಾ ಹಂದರವನ್ನು ಹೊಂದಿರುವ ಚಿತ್ರವಾಗಿದೆ. ಈ ಚಿತ್ರದ ಮೂಲಕ ಪ್ರತಿಭಾನ್ವಿತ ನಟಿ ಅನಿತಾ ಭಟ್ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ. ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್  ನಿರ್ಮಾಣ ಮಾಡಿರುವ ಚಿತ್ರಕ್ಕೆ ಅನಿತಾ ಭಟ್ ಕ್ರಿಯೇಷನ್ಸ್, ಡಾಟ್ ಟಾಕೀಸ್ ಸಹಯೋಗವಿದೆ.

ಅನಿತಾ ಭಟ್ ಮತ್ತು ಶಿವಧ್ವಜ್ ಲೀಡ್  ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜ್ ಕಿಶೋರ್ ಹಾಗೂ ಸ್ವಾತಿ ಬಂಗೇರ ಜೋಡಿ ಕೂಡಾ ಮತ್ತೆರಡು ಪ್ರಧಾನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಾಘವ ಮಹರ್ಷಿ ಈ ಚಿತ್ರದ ನಿರ್ದೇಶನ ಮಾಡಿದ್ದು, ಆಕಾಶ್ ಪರ್ವ ಸಂಗೀತ ಸಂಯೋಜಿಸಿದ್ದಾರೆ. ರಿಷಿಕೇಶ್ , ಛಾಯಾಗ್ರಹಣ, ಸಂಕಲನ ಮತ್ತು ಚಿತ್ರಕಥೆ, ಸಂಭಾಷಣೆಯನ್ನು ಬರೆದಿದ್ದಾರೆ.  

ಸದಾ ಸವಾಲಿನ ಪಾತ್ರಗಳಿಗೆ ಹುಡುಕಾಡುವ ಅನಿತಾ ಭಟ್ ಈ ಚಿತ್ರದಲ್ಲಿ ಓರ್ವ ಗೃಹಿಣಿಯಾಗಿ ಸಂದರ್ಭಾನುಸರ ರೆಬೆಲ್ ಆಗಿ ಸಮಾಜದೆದೆರು ನಿಲ್ಲುವ ದಿಟ್ಟ ಹೆಣ್ಣಾಗಿಯೂ ಅವರು ನಟಿಸಿದ್ದಾರೆ. ಉಡುಪಿ, ಮಲ್ಪೆ, ಬ್ರಹ್ಮಾವರ, ಸಕಲೇಶಪುರ, ಮತ್ತಿತರ ಕಡೆಗಳಲ್ಲಿ ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರ ಶೀಘ್ರದಲ್ಲಿಯೇ ತೆರೆ ಮೇಲೆ ಬರಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com