ಪುನೀತ್ ಫ್ಯಾನ್ಸ್ ಗೆ ಸಿಹಿ ಸುದ್ದಿ; ಹೊಂಬಾಳೆ ಫಿಲ್ಮ್ಸ್ ನಡಿ ಯುವ ರಾಜ್- ಸಂತೋಷ್ ಆನಂದ್ ರಾಮ್ ಹೊಸ ಚಿತ್ರ ಘೋಷಣೆ!
‘ಕೆ.ಜಿ.ಎಫ್ ಚಾಪ್ಟರ್–2’ ಯಶಸ್ಸಿನ ಹೊಳೆಯಲ್ಲಿ ತೇಲುತ್ತಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಇದೀಗ ಪುನೀತ್ ಮತ್ತು ರಾಜ್ ಕುಟುಂಬದ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ರಾಜ್ ಕುಟುಂಬದ ಕುಡಿ ಯುವ ರಾಜ್- ನಿರ್ದೇಶಕ ಸಂತೋಷ್ ಆನಂದ್ ರಾಮ್ ಜುಗಲ್ ಬಂದಿಯ ಹೊಸ ಚಿತ್ರ ಘೋಷಣೆ ಮಾಡಿದೆ.
Published: 27th April 2022 12:52 PM | Last Updated: 27th April 2022 01:06 PM | A+A A-

ಸಂತೋಷ್ ಆನಂದ್ ರಾಮ್ ಮತ್ತು ಯುವ ರಾಜ್ಕುಮಾರ್
ಬೆಂಗಳೂರು: ‘ಕೆ.ಜಿ.ಎಫ್ ಚಾಪ್ಟರ್–2’ ಯಶಸ್ಸಿನ ಹೊಳೆಯಲ್ಲಿ ತೇಲುತ್ತಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಇದೀಗ ಪುನೀತ್ ಮತ್ತು ರಾಜ್ ಕುಟುಂಬದ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ರಾಜ್ ಕುಟುಂಬದ ಕುಡಿ ಯುವ ರಾಜ್- ನಿರ್ದೇಶಕ ಸಂತೋಷ್ ಆನಂದ್ ರಾಮ್ ಜುಗಲ್ ಬಂದಿಯ ಹೊಸ ಚಿತ್ರ ಘೋಷಣೆ ಮಾಡಿದೆ.
ಅಭಿಮಾನದಿಂದ ಅಭಿಮಾನಿಗಳಿಗೆ ಅರ್ಪಣೆ. #YuvaRajKumar
— Raghavendra Rajkumar (@RRK_Official_) April 27, 2022
.@yuva_rajkumar @SanthoshAnand15 @VKiragandur @hombalefilms pic.twitter.com/tYqP2Djzr5
ಹೌದು.. ‘ಕೆ.ಜಿ.ಎಫ್ ಚಾಪ್ಟರ್–2’ ಯಶಸ್ಸಿನ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್ ಇದೀಗ ದೊಡ್ಮನೆಯ ಕುಡಿ ಯುವ ರಾಜ್ಕುಮಾರ್ ಅವರನ್ನು ನಾಯಕನಟನಾಗಿ ಬೆಳ್ಳಿಪರದೆಗೆ ಪರಿಚಯಿಸಲು ಸಜ್ಜಾಗಿದೆ. ಕೆಲ ವರ್ಷಗಳ ಹಿಂದೆಯೇ ಯುವ ರಾಜ್ಕುಮಾರ್ ಅವರ ಚೊಚ್ಚಲ ಸಿನಿಮಾ ‘ಯುವ ರಣಧೀರ ಕಂಠೀರವ’ ಸೆಟ್ಟೇರಿತ್ತು. ಆದರೆ ಈ ಸಿನಿಮಾ ಸದ್ಯಕ್ಕೆ ಮುಂದೂಡಲ್ಪಟ್ಟಿದೆ. ಬದಲಾಗಿ ಸಂತೋಷ್ ಆನಂದರಾಮ್ ನಿರ್ದೇಶಿಸಲಿರುವ ಹೊಸ ಸಿನಿಮಾ ಮುಖಾಂತರ ಹೀರೊ ಆಗಿ ಯುವ ರಾಜ್ಕುಮಾರ್ ಬೆಳ್ಳಿಪರದೆಗೆ ಹೆಜ್ಜೆ ಇಡಲಿದ್ದಾರೆ.
ಅಭಿಮಾನದಿಂದ ಅಭಿಮಾನಕ್ಕಾಗಿ ಈ ನಮ್ಮ ಪಯಣ.
— Hombale Films (@hombalefilms) April 27, 2022
ಇರಲಿ ನಿಮ್ಮ ಅಪ್ಪುಗೆ
The legacy continues..@yuva_rajkumar @SanthoshAnand15 @VKiragandur @hombalefilms#IntroducingYuvaRajKumar #YuvaRajKumar pic.twitter.com/c4vsklAYFj
ಈ ಕುರಿತು ಟ್ವೀಟ್ ಮಾಡಿರುವ ಹೊಂಬಾಳೆ ಫಿಲ್ಮ್ಸ್, ‘ಹೊಂಬಾಳೆ ಸಂಸ್ಥೆಗೂ ಡಾ.ರಾಜ್ಕುಮಾರ್ ಕುಟುಂಬದ ನಡುವೆ ಇರುವ ಸಂಬಂಧದ ಮುಂದುವರಿದ ಭಾಗವಾಗಿ ನಾವು ನಮ್ಮ ಹೊಂಬಾಳೆ ಫಿಲ್ಮ್ಸ್ನಲ್ಲಿ ದೊಡ್ಮನೆಯ ಮೂರನೇ ತಲೆಮಾರಿನ ಯುವ ರಾಜ್ಕುಮಾರ್ರನ್ನು ನಾಯಕನಟನಾಗಿ ಬೆಳ್ಳಿಪರದೆಗೆ ಪರಿಚಯಿಸಲು ಹೆಮ್ಮೆ ಪಡುತ್ತೇವೆ. ಈ ಪ್ರಯತ್ನದಲ್ಲಿ ನಮ್ಮ ಸಂಸ್ಥೆಯಲ್ಲಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಸಂತೋಷ್ ಆನಂದರಾಮ್ರವರ ಸಾರಥ್ಯದಲ್ಲಿ ಈ ಚಿತ್ರವನ್ನು ನಿರ್ಮಿಸಲಿದ್ದೇವೆ’ ಎಂದು ಟ್ವೀಟ್ನಲ್ಲಿ ತಿಳಿಸಿದೆ.
Wishing you all success that you richly deserve.
— Ashwini Puneeth Rajkumar (@ashwinipuneet) April 27, 2022
The legacy continues..@yuva_rajkumar @SanthoshAnand15 @VKiragandur @hombalefilms#IntroducingYuvaRajKumar #YuvaRajKumar pic.twitter.com/7X1KEp8jwO
‘ಅಭಿಮಾನದಿಂದ ಅಭಿಮಾನಕ್ಕಾಗಿ ಈ ನಮ್ಮ ಪಯಣ. ಇರಲಿ ನಿಮ್ಮ ಅಪ್ಪುಗೆ ಮಿಸ್ ಯೂ ಚಿಕ್ಕಪ್ಪ’ ಎಂದು ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ಯುವ ರಾಜ್ಕುಮಾರ್ ಟ್ವೀಟ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಅಭಿಮಾನದಿಂದ ಅಭಿಮಾನಕ್ಕಾಗಿ ಈ ನಮ್ಮ ಪಯಣ
— YuvaRajkumar (@yuva_rajkumar) April 27, 2022
ಇರಲಿ ನಿಮ್ಮ ಅಪ್ಪುಗೆ#MissYou ಚಿಕ್ಕಪ್ಪ ...
.
.
.
Thank you @SanthoshAnand15 sir @VKiragandur sir and @HombaleFilms pic.twitter.com/6h7QZrxrXM
ಶುಭ ಕೋರಿದ ಪುನೀತ್ ಪತ್ನಿ ಅಶ್ವಿನಿ
ಇನ್ನು ಯುವ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಜೋಡಿಯ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಶುಭ ಕೋರಿದ್ದು, ಈ ಕುರಿತು ಟ್ವೀಟ್ ಮಾಡಿರುವ ಅಶ್ವಿನಿ ಅವರು, 'ನಿಮ್ಮ ಸಮೃದ್ಧ ಅರ್ಹ ಎಲ್ಲಾ ಯಶಸ್ಸನ್ನು ಬಯಸುತ್ತೇವೆ. ಪರಂಪರೆ ಮುಂದುವರೆಯುತ್ತದೆ.. ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ಯುವ ರಾಜ್ ಕುಮಾರ್ ತಂದ ನಟ ರಾಘವೇಂದ್ರ ರಾಜ್ ಕುಮಾರ್ ಕೂಡ ಶುಭ ಕೋರಿದ್ದಾರೆ.
ಅಭಿಮಾನದಿಂದ ಅಭಿಮಾನಕ್ಕಾಗಿ ಈ ನಮ್ಮ ಪಯಣ.
— Hombale Films (@hombalefilms) April 27, 2022
ಇರಲಿ ನಿಮ್ಮ ಅಪ್ಪುಗೆ
The legacy continues..@yuva_rajkumar @SanthoshAnand15 @VKiragandur @hombalefilms#IntroducingYuvaRajKumar #YuvaRajKumar pic.twitter.com/Yp3bofVgZO
ಸಿನಿಮಾ ಶೀರ್ಷಿಕೆ, ಇತರೆ ಮಾಹಿತಿ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ. ಆದರೆ ಸಂತೋಷ್ ಆನಂದರಾಮ್ ಆ್ಯಕ್ಷನ್ ಕಟ್ ಹೇಳುತ್ತಿರುವ ಕಾರಣ ವಿಭಿನ್ನವಾದ ಕಥಾಹಂದರವನ್ನೇ ಸಿನಿಮಾ ಹೊಂದಿರಲಿದೆ ಎನ್ನಲಾಗಿದೆ.
ಹೊಂಬಾಳೆ ಫಿಲ್ಮ್ಸ್ ಜೊತೆ ಸಂತೋಷ್ ಆನಂದರಾಮ್ ಅವರ ನಾಲ್ಕನೇ ಚಿತ್ರ ಇದಾಗಿದ್ದು, ಈ ಹಿಂದೆ ಪುನೀತ್ ರಾಜ್ಕುಮಾರ್ ನಟನೆಯ ‘ರಾಜಕುಮಾರ’, ‘ಯುವರತ್ನ’ ಹೊಂಬಾಳೆ ಫಿಲ್ಮ್ಸ್ನಡಿ ಮೂಡಿಬಂದಿತ್ತು. ನವರಸ ನಾಯಕ ಜಗ್ಗೇಶ್ ಅವರ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾವನ್ನೂ ಹೊಂಬಾಳೆ ನಿರ್ಮಾಣ ಮಾಡುತ್ತಿದ್ದು, ಇದರ ಚಿತ್ರೀಕರಣ ಅಂತಿಮ ಹಂತದಲ್ಲಿದೆ.