ಚಂದ್ರ ಕೀರ್ತಿ ನಿರ್ದೇಶನದ ಹಾಸ್ಯ-ಥ್ರಿಲ್ಲರ್ 'ತೂತು ಮಡಿಕೆ' ಈ ವಾರ ತೆರೆಗೆ

ನಟ-ನಿರ್ಮಾಪಕ ಚಂದ್ರ ಕೀರ್ತಿ ಅವರ ಮುಂಬರುವ ಹಾಸ್ಯ-ಥ್ರಿಲ್ಲರ್ ತೂತು ಮಡಿಕೆ ಹಾಡುಗಳ ಮೂಲಕ ಚಿತ್ರದ ಕುರಿತ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.
ತೂತು ಮಡಿಕೆ ಚಿತ್ರ
ತೂತು ಮಡಿಕೆ ಚಿತ್ರ

ಬೆಂಗಳೂರು: ನಟ-ನಿರ್ಮಾಪಕ ಚಂದ್ರ ಕೀರ್ತಿ ಅವರ ಮುಂಬರುವ ಹಾಸ್ಯ-ಥ್ರಿಲ್ಲರ್ ತೂತು ಮಡಿಕೆ ಹಾಡುಗಳ ಮೂಲಕ ಚಿತ್ರದ ಕುರಿತ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.

ಹೌದು.. ತೂತು ಮಡಿಕೆ ಎಂಬ ಶೀರ್ಷಿಕೆ ಮೂಲಕವೇ ಸಾಕಷ್ಟು ಕುತೂಹಲ ಕೆರಳಿಸಿದ್ದ ಈ ಚಿತ್ರ ಹಾಡುಗಳ ಮೂಲಕ ಮತ್ತಷ್ಟು ಬಝ್ ಸೃಷ್ಟಿಸಿದೆ. ಚಿತ್ರ ಇದೇ ವಾರ ತೆರೆಗೆ ಬರಲಿದ್ದು, ಚಿತ್ರದ ಹಾಡುಗಳ ತುಣುಕುಗಳು ಚಿತ್ರದ ಕುರಿತ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ. 

ಈ ಕುರಿತು ಮಾತನಾಡಿರುವ ಚಿತ್ರದ ನಟ-ನಿರ್ಮಾಪಕ ಚಂದ್ರ ಕೀರ್ತಿ ಅವರು, 'ನಟನಾಗಿ ಮತ್ತು 7 ವರ್ಷಗಳಿಂದ ಚಿತ್ರರಂಗದಲ್ಲಿದ್ದ ನನಗೆ ಸರಿಯಾದ ರೀತಿಯ ಪಾತ್ರಗಳು ಸಿಗಲಿಲ್ಲ. ಪೋಷಕ ಪಾತ್ರಗಳು ನನ್ನ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಯಾರೂ ನನ್ನನ್ನು ನಾಯಕನನ್ನಾಗಿ ಮಾಡಲು ಬಯಸದ ಕಾರಣ, ನಾನು ನಾಯಕರಲ್ಲಿ ಒಬ್ಬನಾಗಲು ನಿರ್ದೇಶಕನಾಗಬೇಕಾಯಿತು ಎಂದು ಹೇಳಿದ್ದಾರೆ.

ಈ ಚಿತ್ರಕ್ಕೆ ರಘು ನಿಡುವಳ್ಳಿ ಅವರ ಸಂಭಾಷಣೆ ಇದ್ದು, ತೂತು ಮಡಿಕೆಯು ಕೊಳೆಗೇರಿಯ ಹಿನ್ನೆಲೆಯಲ್ಲಿ ನಡೆಯುತ್ತದೆ ಮತ್ತು ಪುರಾತನ ಪ್ರತಿಮೆ ಸುತ್ತ ಈ ಕಥೆ ಸುತ್ತುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ. ನಂತರ ಕೆಲವು ಉಲ್ಲಾಸದ ಘಟನೆಗಳು ತಿರುವುಗಳಿಗೆ ಕಾರಣವಾಗುತ್ತದೆ. ಮಧುಸೂಧನ್ ರಾವ್ ಮತ್ತು ಶಿವಕುಮಾರ್ ಕೆಬಿ ನಿರ್ಮಿಸಿರುವ ಈ ಚಿತ್ರದಲ್ಲಿ ಪವನ ಗೌಡ ನಾಯಕಿಯಾಗಿ ನಟಿಸಿದ್ದಾರೆ. ತೂತು ಮಡಿಕೆ ಚಿತ್ರದಲ್ಲಿ ಗಿರೀಶ್ ಶಿವ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com