
ಮಲಯಾಳಂ ಬಿಗ್ ಬಾಸ್ ನಿರೂಪಕ ಖ್ಯಾತ ನಟ ಮೋಹನ್ ಲಾಲ್
ತಿರುವನಂತಪುರಂ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಮೋಹನ್ ಲಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ಹಿನ್ನೆಲೆ ಮೋಹನ್ಲಾಲ್ಗೆ ಮುಂದಿನ ವಾರ ಕೊಚ್ಚಿಯ ತಮ್ಮ ಕಚೇರಿಯಲ್ಲಿ ಇಡಿ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಪುರಾತನ ಡೀಲರ್ ಮತ್ತು ವಂಚಕ ಮಾನ್ಸನ್ ಮಾವುಂಕಲ್ ಗೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯ ಕಾರಣ ಅಧಿಕಾರಿಗಳು ಅವರನ್ನು ಪ್ರಶ್ನಿಸುವ ನಿರೀಕ್ಷೆಯಿದೆ.
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಜನರಿಗೆ 10 ಕೋಟಿ ರೂ. ವಂಚನೆಗೈದ ಆರೋಪದ ಮೇಲೆ ಕೇರಳ ಪೊಲೀಸರು ಮೋನ್ಸನ್ ನನ್ನು ಬಂಧಿಸಿದ್ದರು. ನಕಲಿ ಪುರಾತನ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಅವರನ್ನು ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ರಾಜ್ಯ ಪೊಲೀಸರು ಬಂಧಿಸಿದ್ದಾರೆ. ಕೇರಳ ಪೊಲೀಸರ ಪ್ರಕಾರ, ಕೇರಳದ ನಿವಾಸಿಯಾದ ಮಾವುಂಕಲ್ ಹಲವಾರು ವರ್ಷಗಳಿಂದ ಕಲಾಕೃತಿಗಳು ಮತ್ತು ಅವಶೇಷಗಳ ಸಂಗ್ರಹಕಾರನಂತೆ ನಟಿಸಿ ಜನರಿಗೆ 10 ಕೋಟಿ ರೂ. ವಂಚಿಸಿದ್ದರು ಎಂದು ತಿಳಿದು ಬಂದಿದೆ.
ಮೋಹನ್ ಲಾಲ್ ಅವರು ಮಾನ್ಸನ್ ಅವರ ಕೇರಳ ನಿವಾಸಕ್ಕೆ ಒಮ್ಮೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ, ಆದರೆ ಅವರ ಭೇಟಿಯ ಕಾರಣ ತಿಳಿದಿಲ್ಲ.