social_icon

ತೋತಾಪುರಿ ಸಿನಿಮಾ ಗಂಭೀರ ವಿಷಯವಾಗಿದ್ದು ಸೂಕ್ಷ್ಮವಾಗಿ ಕಥೆಯನ್ನು ಹೆಣೆಯಲಾಗಿದೆ: ನಟಿ ಅದಿತಿ ಪ್ರಭುದೇವ

'ಸಣ್ಣ ಪರದೆಯಿಂದ  ಬೆಳ್ಳಿ ಪರದೆಗೆ ಕೆಲಸ ಮಾಡಲು ಮುಂದಾಗುವಾಗ, ನಾನು ವಿಭಿನ್ನ ಪಾತ್ರಗಳನ್ನು ಮಾಡಲು ಬಯಸಿದ್ದೆ ಮತ್ತು ಸುದೀರ್ಘ ಕಾಯುವಿಕೆಯ ನಂತರ ವಿಜಯ ಪ್ರಸಾದ್ ಅವರ ನಿರ್ದೇಶನದಲ್ಲಿ ನನಗೆ ಒಳ್ಳೆಯ ಪಾತ್ರ ಸಿಕ್ಕಿದೆ' ಎಂದು ಹೇಳುತ್ತಾರೆ ನಟಿ ಅದಿತಿ ಪ್ರಭುದೇವ.

Published: 29th September 2022 01:39 PM  |   Last Updated: 02nd October 2022 10:27 PM   |  A+A-


Aditi Prabhudeva in Totapuri Cinema

ತೋತಾಪುರಿ ಸಿನಿಮಾದಲ್ಲಿ ನಟಿ ಅದಿತಿ ಪ್ರಭುದೇವ

Posted By : ramya
Source : Express News Service

ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಅದಿತಿ ಪ್ರಭುದೇವ ಕೂಡ ಪ್ರಮುಖರು. ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿಯ ಮುಂದಿನ ಸಿನಿಮಾ ತೋತಾಪುರಿ ಬಿಡುಗಡೆಗೆ ಸಿದ್ಧವಾಗಿದೆ. ಶುಕ್ರವಾರದಂದು (ಸೆ.30) ಸಿನಿಮಾ ಬಿಡುಗಡೆಯಾಗಲಿದೆ.

'ಸಣ್ಣ ಪರದೆಯಿಂದ  ಬೆಳ್ಳಿ ಪರದೆಗೆ ಕೆಲಸ ಮಾಡಲು ಮುಂದಾಗುವಾಗ, ನಾನು ವಿಭಿನ್ನ ಪಾತ್ರಗಳನ್ನು ಮಾಡಲು ಬಯಸಿದ್ದೆ ಮತ್ತು ಸುದೀರ್ಘ ಕಾಯುವಿಕೆಯ ನಂತರ ವಿಜಯ ಪ್ರಸಾದ್ ಅವರ ನಿರ್ದೇಶನದಲ್ಲಿ ನನಗೆ ಒಳ್ಳೆಯ ಪಾತ್ರ ಸಿಕ್ಕಿದೆ' ಎಂದು ಹೇಳುತ್ತಾರೆ ನಟಿ ಅದಿತಿ ಪ್ರಭುದೇವ.

'ನಿರ್ದೇಶಕರು ನನ್ನನ್ನು ಆಡಿಷನ್‌ಗೆ ಕರೆದಿದ್ದರು. ಅವರು ಕಥೆಯನ್ನು ಅಥವಾ ನನ್ನ ಪಾತ್ರದ ಬಗ್ಗೆ ಸಂಕ್ಷಿಪ್ತವಾಗಿ ಏನನ್ನು ಹೇಳಲಿಲ್ಲ. ಮೊದಲಿಗೆ ಟೆಸ್ಟ್ ಶೂಟ್ ಮಾಡಿ ನಾನು ಪಾತ್ರಕ್ಕೆ ಹೊಂದಿಕೊಳ್ಳಬಹುದೇ ಎಂದು ಪರೀಕ್ಷಿಸಲು ಅವರು ಬಯಸಿದ್ದರು. ಅದೃಷ್ಟವಶಾತ್, ನಾನು ಆಯ್ಕೆಯಾದೆ ಮತ್ತು ನಂತರವೇ ನನಗೆ ಕಥೆ ಮತ್ತು ನನ್ನ ಪಾತ್ರದ ಬಗ್ಗೆ ವಿವರಿಸಲಾಯಿತು. ನಂತರ, ಮುಸ್ಲಿಂ ಹುಡುಗಿಯ ಪಾತ್ರವನ್ನು ನಿರ್ವಹಿಸುವ ಹ್ಯಾಂಗೋವರ್ ಪಡೆಯಲು ನನಗೆ ಒಂದು ವಾರ ಸಮಯ ನೀಡಿದರು' ಎನ್ನುತ್ತಾರೆ.

'ನಾವು ಯಾವ ಧರ್ಮಕ್ಕೆ ಸೇರಿದವರು, ಯಾವ ಆಚಾರಗಳನ್ನು ಅನುಸರಿಸುತ್ತೇವೆ ಮತ್ತು ಆಚರಿಸುತ್ತೇವೆ ಎಂಬುದು ಏನೇ ಆಗಿದ್ದರೂ, ಮೊದಲಿಗೆ ನಾವು ಕೇವಲ ಮನುಷ್ಯರು ಮತ್ತು ನಮ್ಮೊಳಗೆ ಇರುವ ಮಾನವೀಯತೆ ನಮ್ಮನ್ನು ಒಂದುಗೂಡಿಸುತ್ತದೆ. ನಾವು ಮಾಡುವ ಒಳ್ಳೆಯದು ಮತ್ತು ಕೆಟ್ಟದ್ದು ಧರ್ಮದ ಆಧಾರದ ಮೇಲೆ ನಿರ್ಧಾರವಾಗುವುದಿಲ್ಲ; ಶಾಂತಿಯುತ ಸಹಬಾಳ್ವೆ ಎಲ್ಲಕ್ಕಿಂತ ಮೇಲಿದೆ' ಎಂದು ಅವರು ತಿಳಿಸಿದರು.

'ಇದೊಂದು ಗಂಭೀರವಾದ ವಿಷಯವನ್ನು ಒಳಗೊಂಡಿದ್ದರೂ, ಹಾಸ್ಯ ಮತ್ತು ಪ್ರೀತಿಯ ಅಂಶಗಳೊಂದಿಗೆ ಸೂಕ್ಷ್ಮವಾಗಿ ಹೆಣೆಯಲಾಗಿದೆ. ಇದೊಂದು ಕಮರ್ಷಿಯಲ್ ಎಂಟರ್‌ಟ್ರೈನರ್ ಆಗಿದ್ದು, ಉತ್ತಮ ಸಂದೇಶವಿದೆ. ನಟ ಜಗ್ಗೇಶ್, ಸುಮನ್ ರಂಗನಾಥ್, ವೀಣಾ ಸುಂದರ್, ದತ್ತಣ್ಣ ಅವರ ಪಾತ್ರಗಳಲ್ಲಿ ಹಾಸ್ಯ ಮತ್ತು ಗಂಭೀರ ದೃಶ್ಯಗಳು ಸಮತೋಲನವಾಗಿದ್ದು, ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸಲಾಗಿದೆ. ತೋತಾಪುರಿ ಎನ್ನುವುದು ಒಂದು ನೆಚ್ಚಿನ ಹಣ್ಣು, ಇದು ಸಿಹಿ, ಹುಳಿ ಮತ್ತು ಕಹಿ ರುಚಿಯನ್ನು ಹೊಂದಿರುತ್ತದೆ. ಇದಕ್ಕೆ ಉಪ್ಪು ಮತ್ತು ಖಾರ ಸೇರಿಸಿ ಸೇವಿಸಲಾಗುತ್ತದೆ. ಇದುವೇ ನಿರ್ದೇಶಕ ವಿಜಯ ಪ್ರಸಾದ್ ಅವರ ಕಥೆಯ ಸಾರ' ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ನನ್ನ ಜೀವನದ ಅನುಭವಗಳಿಂದಲೇ ನನ್ನ ಸಿನಿಮಾದ ಕಥೆಗಳನ್ನು ರಚಿಸಲಾಗಿದೆ: ವಿಜಯ್ ಪ್ರಸಾದ್

ತೋತಾಪುರಿ ಮಾವಿನಲ್ಲಿ ಪರಿಣಿತಿ ಹೊಂದಿರುವ ಮಾವಿನ ಹಣ್ಣಿನ ವ್ಯಾಪಾರ ನಡೆಸುತ್ತಿರುವ ದೊಡ್ಡ ಕುಟುಂಬದಲ್ಲಿನ ಮುಸ್ಲಿಂ ಯುವತಿಯ ಪಾತ್ರವನ್ನು ನಿರ್ವಹಿಸುತ್ತಿದ್ದು, ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುತ್ತೇನೆ. ಇದು ಆಕರ್ಷಕ ಶೀರ್ಷಿಕೆಯಾಗಿದ್ದು, ಚಿತ್ರಕ್ಕೆ ಮೌಲ್ಯವನ್ನು ತುಂಬುತ್ತದೆ. ವಿಜಯ ಪ್ರಸಾದ್ ಅವರೊಂದು ಅದ್ಭುತ ಆತ್ಮ. ನಟರು ಮತ್ತು ಕಿರಿಯ ಕಲಾವಿದರನ್ನು ಸಮಾನವಾಗಿ ಕಾಣುತ್ತಾರೆ. ಸ್ಥಳೀಯ ಭಾಷೆಯ ಬಗ್ಗೆ ತಿಳಿವಳಿಕೆ ಹೊಂದಿರುವ ಕೆಲವೇ ಕೆಲವು ನಿರ್ದೇಶಕರಲ್ಲಿ ಅವರು ಒಬ್ಬರು ಎಂದು ಹೇಳುತ್ತಾರೆ.

'ಚಿತ್ರಗಳಲ್ಲಿ ಉತ್ತಮ ಹಾಸ್ಯ ಪ್ರಜ್ಞೆ ಹೊಂದಿರುವ ಚಲನಚಿತ್ರ ನಿರ್ದೇಶಕರಾಗಿ ಕಾಣಿಸಿಕೊಂಡರೂ, ಸೆಟ್‌ಗಳಲ್ಲಿ ಅವರು ತುಂಬಾ ಗಂಭೀರ ಮತ್ತು ಪ್ರಬುದ್ಧರಾಗಿರುತ್ತಾರೆ. ಅವರ ಚಿತ್ರಗಳು ಗುಣಮಟ್ಟದ ಮನರಂಜನೆ ಮತ್ತು ಸಾಮಾಜಿಕ ಸಂದೇಶವನ್ನು ಸಾರುತ್ತವೆ. ಜಗ್ಗೇಶ್ ಅವರಂತಹ ಹಿರಿಯ ನಟರೊಂದಿಗೆ ಕೆಲಸ ಮಾಡುವುದು ನನ್ನ ವೃತ್ತಿಜೀವನಕ್ಕೆ ಸಿಕ್ಕ ಅಮೂಲ್ಯ ಕೊಡುಗೆ' ಎಂದು ಅವರು ಮಾತು ಮುಗಿಸುತ್ತಾರೆ.


Stay up to date on all the latest ಸಿನಿಮಾ ಸುದ್ದಿ news
Poll
Khalistani militant Hardeep Singh Nijjar

ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ನೀವು ನಂಬುತ್ತೀರಾ?


Result
ಹೌದು
ಇಲ್ಲ

Comments(1)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • Shyamprasad R Bhat

    ಅದಿತಿ ಪ್ರಭುದೇವ ನಟ ಅಲ್ಲ, ನಟಿ. ಸುದ್ದಿಯ ಶೀರ್ಷಿಕೆಯಲ್ಲೇ ತಪ್ಪಾಗಿದ್ದು ಗಮನಿಸದಿದ್ದರೆ, ಸುದ್ದಿಯಲ್ಲಿ ಇರುವ ತಪ್ಪುಗಳು ಎಷ್ಟಿರಬಹುದು. ಇದು ಒಂದೆರಡು ಬಾರಿ ಅಲ್ಲ, ಕಳೆದ 1 ತಿಂಗಳಲ್ಲಿ ಮೂರನೇ ಬಾರಿ ನೋಡುತ್ತಿರುವುದು
    11 months ago reply
flipboard facebook twitter whatsapp