social_icon

'ಶಿವಾಜಿ ಸುರತ್ಕಲ್ 2' ಟ್ರೈಲರ್ ಬಿಡುಗಡೆ; ಮತ್ತೆ ಪತ್ತೇದಾರಿಯಾಗಿ ಕಾಣಿಸಿಕೊಂಡ ನಟ ರಮೇಶ್ ಅರವಿಂದ್

ರಮೇಶ್ ಅರವಿಂದ್ ಅವರು ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ (2020) ಚಿತ್ರದ ಮೂಲಕ ನಟನೆಯಲ್ಲಿ ಸೈ ಎನಿಸಿಕೊಂಡಿದ್ದರು. ಇದೀಗ ನಟ ಮತ್ತು ನಿರ್ದೇಶಕ ಎರಡನೇ ಕಂತಿನೊಂದಿಗೆ ಮರಳಿದ್ದು, ಇದು ಮಾಯಾವಿಯ ನಿಗೂಢ ಪ್ರಕರಣದ ಸುತ್ತ ಸುತ್ತುತ್ತದೆ.

Published: 03rd April 2023 12:57 PM  |   Last Updated: 03rd April 2023 12:59 PM   |  A+A-


A still from the second installment of Shivaji Surathkal.

ಶಿವಾಜಿ ಸುರತ್ಕಲ್ 2 ಚಿತ್ರದ ಪೋಸ್ಟರ್

Posted By : Ramyashree GN
Source : Express News Service

ರಮೇಶ್ ಅರವಿಂದ್ ಅವರು ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ (2020) ಚಿತ್ರದ ಮೂಲಕ ನಟನೆಯಲ್ಲಿ ಸೈ ಎನಿಸಿಕೊಂಡಿದ್ದರು. ಇದೀಗ ನಟ ಮತ್ತು ನಿರ್ದೇಶಕ ಎರಡನೇ ಕಂತಿನೊಂದಿಗೆ ಮರಳಿದ್ದು, ಇದು ಮಾಯಾವಿಯ ನಿಗೂಢ ಪ್ರಕರಣದ ಸುತ್ತ ಸುತ್ತುತ್ತದೆ.

ಆಕಾಶ್ ಶ್ರೀವತ್ಸ  ಚಿತ್ರಕಥೆ ಬರೆದು, ಸಂಕಲನ ಮಾಡಿ, ನಿರ್ದೇಶನ ಮಾಡಿರುವ ಈ ಚಿತ್ರ ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ. ಚಿತ್ರತಂಡ ಚಿತ್ರದ ಟ್ರೈಲರ್ ಅನ್ನು ಶನಿವಾರ ಬಿಡುಗಡೆ ಮಾಡಿದ್ದು, ಪ್ರೇಕ್ಷಕರಿಂದ ಅಗಾಧ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. 

ಚಿತ್ರವು ಶಿವಾಜಿ ಸುರತ್ಕಲ್ ಅವರ ಕುಟುಂಬದ ಭಾಗವನ್ನು ತೋರಿಸುತ್ತದೆ, ಅವರು ತಮ್ಮ ಪತ್ನಿ ಜನನಿ (ರಾಧಿಕಾ ನಾರಾಯಣ್) ಅವರನ್ನು ಕಳೆದುಕೊಳ್ಳುತ್ತಾರೆ ಮತ್ತು ಅವರ ಚಿಕ್ಕ ಮಗಳು ಚುಕ್ಕಿ ಅಲಿಯಾಸ್ ಸಿರಿ ಸುರತ್ಕಲ್ ಅವರೊಂದಿಗೆ ಸಮಯ ಕಳೆಯುತ್ತಿರುತ್ತಾರೆ. ಈ ಸಂದರ್ಭದಲ್ಲಿ ಸಂತ್ರಸ್ತ, ಕೊಲೆಗಾರ ಮತ್ತು ತನ್ನ ನಡುವೆ ಸಂಪರ್ಕವಿದೆ ಎಂಬುದನ್ನು ಆತ ಕಂಡುಕೊಳ್ಳುತ್ತಾನೆ.

ರಮೇಶ್ ಅರವಿಂದ್‌ ಜೊತೆಗೆ ಮೇಘನಾ ಗಾಂವ್ಕರ್ ಕೂಡ ನಟಿಸಿದ್ದು, ಅವರು ಪ್ರಕರಣವನ್ನು ನಿಭಾಯಿಸಲು ಶಿವಾಜಿಗೆ ಸೂಚಿಸುತ್ತಾರೆ. ಜೂಡಾ ಸ್ಯಾಂಡಿ ಅವರ ಹಿನ್ನೆಲೆ ಸಂಗೀತದೊಂದಿಗೆ, ಗುರುಪ್ರಸಾದ್ ಎಂಡಿ ಅವರ ಛಾಯಾಗ್ರಹಣವಿದೆ.

ಇದನ್ನೂ ಓದಿ: ಶಿವಾಜಿ ಸುರತ್ಕಲ್ 2 ಚಿತ್ರದ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸಂಗೀತಾ ಶೃಂಗೇರಿ!

ಶಿವಾಜಿ ಸುರತ್ಕಲ್ ಅನ್ನು ಕೆಆರ್‌ಜಿ ಸ್ಟುಡಿಯೋಸ್ ವಿತರಿಸಲಿದ್ದು, ಸಂಗೀತಾ ಶೃಂಗೇರಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ರಘು ರಮಣಕೊಪ್ಪ ಮತ್ತು ವಿದ್ಯಾ ಮೂರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp