ನಿತೀಶ್ ತಿವಾರಿಯವರ 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರ ಮಾಡುತ್ತಾರೆಯೇ ಕೆಜಿಎಫ್ ಸ್ಟಾರ್ ಯಶ್?

'ಬವಾಲ್' ಚಿತ್ರ ನಿರ್ಮಾಪಕ ನಿತೇಶ್ ತಿವಾರಿ ಅವರು ರಾಮಾಯಣ ಕಥೆಯನ್ನು ಬೆಳ್ಳಿ ಪರದೆಯ ಮೇಲೆ ತರಲು ಬಯಸಿದ್ದು, ಚಿತ್ರದಲ್ಲಿ ರಾವಣ ಮತ್ತು ರಾಮ ಆಗಿ ನಟಿಸಲು ನಿರ್ಮಾಪಕರು ಹೃತಿಕ್ ರೋಷನ್ ಮತ್ತು ರಣಬೀರ್ ಕಪೂರ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.
ರಾಕಿಂಗ್ ಸ್ಟಾರ್ ಯಶ್
ರಾಕಿಂಗ್ ಸ್ಟಾರ್ ಯಶ್

'ಬವಾಲ್' ಚಿತ್ರ ನಿರ್ಮಾಪಕ ನಿತೇಶ್ ತಿವಾರಿ ಅವರು ರಾಮಾಯಣ ಕಥೆಯನ್ನು ಬೆಳ್ಳಿ ಪರದೆಯ ಮೇಲೆ ತರಲು ಬಯಸಿದ್ದು, ಚಿತ್ರದಲ್ಲಿ ರಾವಣ ಮತ್ತು ರಾಮ ಆಗಿ ನಟಿಸಲು ನಿರ್ಮಾಪಕರು ಹೃತಿಕ್ ರೋಷನ್ ಮತ್ತು ರಣಬೀರ್ ಕಪೂರ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.

ವಿಕ್ರಮ್ ವೇದಾ ನಂತರ ನೆಗೆಟಿವ್ ರೋಲ್ ನ್ನು ಮಾಡಲು ಬಯಸದ ಕಾರಣ ಹೃತಿಕ್ ರೋಷನ್ ಈ ಪಾತ್ರ ತಿರಸ್ಕರಿಸಿದ್ದಾರೆ ಎಂಬ ಸುದ್ದಿ ಬಿಟೌನ್ ನಲ್ಲಿ ಕೇಳಿಬರುತ್ತಿದೆ. 

ನೋಟೇಶ್ ತಿವಾರಿ ಮತ್ತು ನಿರ್ಮಾಪಕ ಮಧು ಮಂಟೇನಾ ಈಗ ಈ ಪಾತ್ರಕ್ಕಾಗಿ ಕೆಜಿಎಫ್ ಸ್ಟಾರ್ ಯಶ್ ಕಡೆಗೆ ತಿರುಗಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.  ಯಶ್ ಅವರು ಚಿತ್ರದ ಕಥೆ, ಸ್ಕ್ರಿಪ್ಟ್ ಓದುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ನಿರ್ಮಾಪಕ-ನಿರ್ದೇಶಕ ಜೋಡಿಯು 2019 ರಲ್ಲಿ ಜಾಗತಿಕ ಪ್ರೇಕ್ಷಕರಿಗೆ ಭಾರತೀಯ ಮಹಾಕಾವ್ಯ ರಾಮಾಯಣವನ್ನು ದೊಡ್ಡ ಪರದೆಯ ಮೇಲೆ ಅಳವಡಿಸುವ ಯೋಜನೆಗಳನ್ನು ಘೋಷಿಸಿದ್ದರು. ಇದು ಭಾರತೀಯ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ. ರಣಬೀರ್ ಪಾತ್ರ ಮಾಡಲು ಉತ್ಸುಕರಾಗಿದ್ದರೂ ಇನ್ನೂ ಸಹಿ ಹಾಕಿಲ್ಲ. 

ಈ ವರ್ಷ ಬೇಸಿಗೆಯಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಯಶ್ ರಾವಣ ಪಾತ್ರವನ್ನು ಒಪ್ಪಿಕೊಳ್ಳುತ್ತಾರೆಯೇ, ತಿರಸ್ಕರಿಸುತ್ತಾರೆಯೇ ಎಂಬುದು ಕುತೂಹಲವಾಗಿದೆ. ನಿತೇಶ್ ತಿವಾರಿ ಪ್ರಸ್ತುತ ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ಅವರೊಂದಿಗೆ ಬವಾಲ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com