ಗುಜರಾತಿ ಚಿತ್ರರಂಗವು ಇದೀಗ ಭಾರಿ ಜನಪ್ರಿಯತೆಯನ್ನು ಪಡೆಯುತ್ತಿದೆ. ಇದಕ್ಕೆ ಸ್ಪೂರ್ತಿ ಎಂಬಂತೆ ಇದೇ ಮೊದಲ ಬಾರಿಗೆ ಗುಜರಾತಿ ಸಿನಿಮಾವೊಂದು ಕನ್ನಡದಲ್ಲಿ ಬಿಡುಗಡೆಯಾಗಲಿದೆ. 'ವರ ಪಧರಾವೋ ಸಾವಧಾನ' ಎಂಬ ಸಿನಿಮಾ ಕನ್ನಡ ನಾಡಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಸಿ ಥ್ರಿಲ್ಲರ್ 'ವಿಕ್ರಾಂತ್ ರೋಣ' ಸಿನಿಮಾ ನಿರ್ಮಾಣಕ್ಕೆ ಹೆಸರುವಾಸಿಯಾಗಿರುವ ಮಂಜುನಾಥ್ ಗೌಡ ಅವರ ಶಾಲಿನಿ ಆರ್ಟ್ಸ್ ಬ್ಯಾನರ್ 'ವರ ಪಧಾರವೋ ಸಾವಧಾನ'ದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಜುಲೈ 7 ರಂದು ಕನ್ನಡದಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.
ವಿಪುಲ್ ಶರ್ಮಾ ಬರೆದು ನಿರ್ದೇಶಿಸಿದ ವರ ಪಧಾರವೋ ಸಾವಧಾನ ಒಂದು ಕಾಮಿಡಿ ಕೌಟುಂಬಿಕ ಮನರಂಜನೆಯ ಭರವಸೆಯನ್ನು ನೀಡುತ್ತದೆ. ಪ್ರತಿಭಾವಂತ ನಟರಾದ ತುಷಾರ್ ಸಾಧು ಮತ್ತು ಕಿಂಜಲ್ ರಾಜಪ್ರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದಲ್ಲದೆ, ಚಿತ್ರದಲ್ಲಿ ರಾಗಿ ಜಾನಿ, ಕಾಮಿನಿ ಪಾಂಚಾಲ್, ಪ್ರಶಾಂತ್ ಬರೋಟ್ ಮತ್ತು ಜೇ ಪಾಂಡ್ಯ ಸೇರಿದಂತೆ ದೊಡ್ಡ ತಾರಾಗಣವಿದೆ.
Advertisement