social_icon

50 ನಿಮಿಷಗಳ ವಿಎಫ್‌ಎಕ್ಸ್‌ನೊಂದಿಗೆ 'ಛೂ ಮಂತರ್' ಸಿನಿಮಾ ಕಣ್ಣಿಗೆ ದೃಶ್ಯ ಹಬ್ಬವಾಗಲಿದೆ: ನಿರ್ದೇಶಕ ನವನೀತ್

ಶರಣ್ ನಾಯಕನಾಗಿ ನಟಿಸಿರುವ ನವನೀತ್ ನಿರ್ದೇಶನದ ಮುಂಬರುವ 'ಛೂ ಮಂತರ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ನಟ ರವಿಚಂದ್ರನ್ ಬಿಡುಗಡೆ ಮಾಡಿದರು. 

Published: 13th September 2023 01:05 PM  |   Last Updated: 13th September 2023 01:07 PM   |  A+A-


The makers have revealed the film’s title track, which was launched by Ravichandran.

ಛೂ ಮಂತರ್ ಚಿತ್ರದ ಟೈಟಲ್ ಟ್ರ್ಯಾಕ್‌ ಅನ್ನು ಬಿಡುಗಡೆ ಮಾಡಿದ ನಟ ರವಿಚಂದ್ರನ್

Posted By : Ramyashree GN
Source : Express News Service

ಶರಣ್ ನಾಯಕನಾಗಿ ನಟಿಸಿರುವ ನವನೀತ್ ನಿರ್ದೇಶನದ ಮುಂಬರುವ 'ಛೂ ಮಂತರ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ನಟ ರವಿಚಂದ್ರನ್ ಬಿಡುಗಡೆ ಮಾಡಿದರು. 

ನಟರಾದ ಶರಣ್, ಚಿಕ್ಕಣ್ಣ ಮತ್ತು ನಟಿ ಅದಿತಿ ಪ್ರಭುದೇವ ಅವರೊಂದಿಗೆ ಸಾಕಷ್ಟು ನೃತ್ಯಗಾರರನ್ನು ಒಳಗೊಂಡಿರುವ ಈ ಹಾಡನ್ನು ಚಂದನ್ ಶೆಟ್ಟಿ ಸಂಯೋಜಿಸಿದ್ದಾರೆ. ವಿಜಯ್ ಈಶ್ವರ್ ಸಾಹಿತ್ಯ ಬರೆದಿದ್ದು, ದರ್ಶಿನಿ ಅವರ ನೃತ್ಯ ಸಂಯೋಜನೆ ಇದೆ. ಚಿತ್ರದ ಹಿನ್ನೆಲೆ ಸಂಗೀತವನ್ನು ಅವಿನಾಶ್ ಆರ್ ಬಸುತ್ಕರ್ ಸಂಯೋಜಿಸಿದ್ದಾರೆ.

ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕ್ರೇಜಿ ಸ್ಟಾರ್ ರವಿಚಂದ್ರನ್, ಶರಣ್‌ ಅವರ ಪ್ರತಿ ಚಿತ್ರಗಳಲ್ಲಿ ಕನಿಷ್ಠ ಎರಡು ಉತ್ತಮ ಹಾಡುಗಳಿವೆ. ಅದೇ ರೀತಿ ಛೂ ಮಂತರ್ ಚಿತ್ರದಲ್ಲಿಯೂ ಉತ್ತಮ ಹಾಡುಗಳಿವೆ ಎಂದರು. 

ಹಾಸ್ಯನಟನಿಂದ ನಾಯಕನಾಗಿ ವೃತ್ತಿಜೀವನದ ಬದಲಾವಣೆಯನ್ನು ನೆನಪಿಸಿಕೊಂಡ ಶರಣ್, 'ರವಿಚಂದ್ರನ್ ಅವರು ನನ್ನನ್ನು ಮೊದಲು ನಾಯಕನಾಗುವಂತೆ ಪ್ರೇರೇಪಿಸಿದರು ಮತ್ತು ಅವರು ಸಲಹೆ ನೀಡಿದ ಎರಡು ವರ್ಷಗಳಲ್ಲಿಯೇ ನಾನು ನಾಯಕನಾಗಿ ನಟಿಸಿದೆ' ಎಂದು ಬಹಿರಂಗಪಡಿಸಿದರು.

ಇದನ್ನೂ ಓದಿ: ಹಾರರ್ ಕಾಮಿಡಿ 'ಛೂ ಮಂತರ್‌' ಸಿನಿಮಾದಲ್ಲಿ ನಟ ಶರಣ್

ಚಿತ್ರವನ್ನು ಮಾನಸ ಮತ್ತು ತರುಣ್ ಶಿವಪ್ಪ ನಿರ್ಮಿಸಿದ್ದು, ಚಿತ್ರಕ್ಕೆ 'ಛೂ ಮಂತರ್' ಎಂಬ ಶೀರ್ಷಿಕೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೂಚಿಸಿದರು. ಇದು ಕಂಟೆಂಟ್‌ಗೆ ತುಂಬಾ ಸೂಕ್ತವಾಗಿದೆ ಎಂದರು.

ನವನೀತ್ ಸಿನಿಮಾ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿ, ಸಿನಿಮಾ ಸದ್ಯ ಪೋಸ್ಟ್-ಪ್ರೊಡಕ್ಷನ್‌ ಹಂತದಲ್ಲಿದ್ದು, ಗಮನಾರ್ಹ ವಿಎಫ್‌ಎಕ್ಸ್‌ ಅನ್ನು ಒಳಗೊಂಡಿದೆ. 'ನಾವು ಚಿತ್ರದಲ್ಲಿ 50 ನಿಮಿಷಗಳ ವಿಎಫ್‌ಎಕ್ಸ್ ಅನ್ನು ಸಂಯೋಜಿಸಿದ್ದೇವೆ. ಇದನ್ನು ಮೂರು ವಿಭಿನ್ನ ಕಂಪನಿಗಳು ನಿರ್ವಹಿಸಿವೆ. ಚಿತ್ರವು ಅಸಾಮಾನ್ಯ ಘಟನೆಗಳು ಮತ್ತು ಪ್ರೇತಾತ್ಮದ ಸುತ್ತ ಸುತ್ತುವುದರಿಂದ, ಹಾರರ್ ವಾತಾವರಣವು ಸಿನಿಮಾದ ಹೈಲೈಟ್ ಆಗಿರುತ್ತದೆ. ಇದು ಪ್ರೇಕ್ಷಕರ ಸಿನಿಮಾ ವೀಕ್ಷಣೆಯ ಅನುಭವವನ್ನು ಹೆಚ್ಚಿಸುತ್ತದೆ ಮತ್ತು ದೃಶ್ಯದ ಹಬ್ಬವಾಗಿರುತ್ತದೆ. ಚಿತ್ರ ಬಿಡುಗಡೆಯು VFX ನ ಪ್ರಗತಿಯನ್ನು ಅವಲಂಬಿಸಿರುತ್ತದೆ' ಎಂದರು.


Stay up to date on all the latest ಸಿನಿಮಾ ಸುದ್ದಿ news
Poll
N R narayana Murty

ಯಾವುದನ್ನೂ ಫ್ರೀಯಾಗಿ ಕೊಡಬಾರದು ಎಂದು ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp